ಬಸವೇಶ್ವರ
ಗೋಚರ
- ಕಾಯಕವೇ ಕೈಲಾಸ, ಕರ್ತವ್ಯದ ಉದ್ದೇಶ.
- ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ
- ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯಾ.
- ಬಯ್ದವರೆನ್ನ ಬಂಧುಗಳೆಂಬೆ, ಜರೆದವರೆನ್ನ ಜನ್ಮಬಂಧುಗಳೆಂಬೆ ಹೊಗಳಿದವರೆನ್ನ ಹೊನ್ನಶೂಲಕ್ಕಿಕಿದರು.
- ತನುವಿನ ಕೋಪ ಹಿರಿತನಕ್ಕೆ ಕೇಡು. ಮನದ ಕೋಪ ತನ್ನ ಅರಿವಿಗೆ ಕೇಡು. - ೧೩:೦೩, ೧೭ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
- ಸಾರ ಸಜ್ಜನರ ಸಂಗವ ಮಾಡುವುದು, ದೂರ ದುರ್ಜನರ ಸಂಗ ಬೇಡವಯ್ಯಾ.
- ನುಡಿದರೆ ಮುತ್ತಿನ ಹಾರದಂತಿರಬೇಕು.
- ಬೆಲ್ಲವಿಲ್ಲದಿದ್ದರೂ ಬೆಲ್ಲದಂತೆ ಮಾತನಾಡಬೇಕು.
- ಆಚಾರವೇ ಸ್ವರ್ಗ ಅನಾಚಾರವೇ ನರಕ.
- ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರೂ ಇಲ್ಲವಯ್ಯ.


