ಹಾ.ಮಾ. ನಾಯಕ
ಗೋಚರ
ಡಾ. ಹಾ. ಮಾ. ನಾಯಕ ಅವರು ಕನ್ನಡದ ಖ್ಯಾತ ಕವಿ, ಅಂಕಣಕಾರ, ಭಾಷಾಶಾಸ್ತ್ರಜ್ಞ ಮತ್ತು ಜಾನಪದ ವಿದ್ವಾಂಸ. ಹಾಮಾನಾ ಎಂದೇ ಪ್ರಸಿದ್ಧರಾಗಿದ್ದ ಹಾ. ಮಾ. ನಾಯಕರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ಅಂಕಣ ಬರಹಗಳನ್ನು ಮುನ್ನೆಲೆಗೆ ತಂದವರಲ್ಲಿ ನಾಯಕರೂ ಒಬ್ಬರು. "ಕನ್ನಡ ತನ್ನ ಮೊದಲ ಪ್ರೀತಿ; ಎರಡನೆಯ ಪ್ರೀತಿಯೂ ಅದೇ" ಎಂದು ಹೇಳುತ್ತ ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಬದುಕು ಸವೆಸಿದ ಹೋರಾಟಗಾರ.
ನುಡಿಗಳು
[ಸಂಪಾದಿಸಿ]- ಜ್ಞಾನ ನಿಂತ ನೀರಲ್ಲ, ಹರಿಯುವ ಹೊಳೆ, ದಿನ ದಿನವೂ ಅದು ನವೋನವವಾಗುತ್ತಿದೆ
- ಜ್ಞಾನ ಬೆಳೆದಂತೆಲ್ಲ ವ್ಯವಸ್ಥೆಗೊಳ್ಳಬೇಕಾಗುತ್ತದೆ. ವ್ಯವಸ್ಥೆಗೊಂಡಾಗ ವಿಸ್ತರಣ ಸಂಶೋಧನೆ ಮತ್ತು ವ್ಯಾಸಂಗಗಳು ಸುಲಭವಾಗುತ್ತವೆ
- ಪುಸ್ತಕಗಳಲ್ಲಿ ಹಳೆಯವೆಂಬುವೇ ಇಲ್ಲ. ಓದಿರದ ಪುಸ್ತಕಗಳೆಲ್ಲ ಹೊಸವು; ಮತ್ತೆ ಮತ್ತೆ ಓದಬೇಕೆನ್ನುವ ಪುಸ್ತಕಗಳೆಲ್ಲ ಹೊಸವು.
- - ೧೬:೪೫, ೨೬ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಯಾವ ಭಾಷೆಯ ಹೇರಿಕೆಯೂ ಸರಿಯಲ್ಲ, ಯಾವುದೇ ಭಾಷೆಯ ಕಲಿಕೆಯನ್ನು ತಡೆಯುವುದೂ ಸರಿಯಲ್ಲ.
- - ೧೪:೧೭, ೭ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸ್ವಾತಂತ್ರ್ಯ ಮನುಷ್ಯನ ದುಡಿಮೆಯನ್ನು ಬೇಡುತ್ತದೆ. ದುಡಿಯದ ಮನುಷ್ಯನಿಗೆ ಸ್ವಾತಂತ್ರ್ಯವಿರುವುದಿಲ್ಲ.
- - ೦೫:೫೫, ೧೫ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಿಜವಾದ ವಿದ್ಯೆ ಮನುಷ್ಯನಿಗೆ ಆಲೋಚಿಸುವುದನ್ನು ಕಲಿಸುತ್ತದೆ.
- - ೦೪:೪೬, ೨೧ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಿಜವಾದ ವಿದ್ಯೆ, ಮನುಷ್ಯನಿಗೆ ಆಲೋಚಿಸುವುದನ್ನು ಕಲಿಸುತ್ತದೆ.
- - ೦೬:೨೭, ೧೮ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಭಾಷೆಗಳನ್ನು ಒಂದಕ್ಕೊಂದು ಪೂರಕವೆಂದು ಭಾವಿಸಬೇಕು. ಅವುಗಳ ನಡುವೆ ಸ್ಪರ್ಧೆ ಏರ್ಪಡಿಸಬಾರದು.
- ಮತ್ತೊಬ್ಬರ ವಿಚಾರವನ್ನು ಕೇಳುವ ಸಹನೆಯನ್ನು ಬೆಳಸಿಕೊಳ್ಳದಿದ್ದರೆ ನಾವು ವಿಚಾರವಂತರಾಗುವುದು ಸಾಧ್ಯವಿಲ್ಲ.
- - ೧೧:೧೦, ೧೪ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ‘ಸ್ನೇಹ’ ಬದುಕಿನ ಅಮೂಲ್ಯ ನಿಧಿ. ಒಳ್ಳೆಯ ಸ್ನೇಹಿತರು ವರವಾಗುತ್ತಾರೆ. ಕೆಟ್ಟ ಸ್ನೇಹಿತರು ಶಾಪವಾಗುತ್ತಾರೆ.
- - ೦೩:೧೮, ೧೬ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿಪ್ರಕಟಗೊಂಡ ಸುಭಾಷಿತ.
- ಸುಭಾಷಿತ: ಮನುಷ್ಯ ಕೇವಲ ಸ್ಥಿತಪ್ರಜ್ಞನಾಗಿದ್ದರೆ ಸಾಲದು, ಸ್ಥಿತಿಪ್ರಜ್ಞನೂ ಆಗಿರಬೇಕು.
- - ಪ್ರಜಾವಾಣಿಯಲ್ಲಿಪ್ರಕಟಗೊಂಡ ಸುಭಾಷಿತ.