ಹಾ.ಮಾ. ನಾಯಕ

ವಿಕಿಕೋಟ್ದಿಂದ
  • ಜ್ಞಾನ ನಿಂತ ನೀರಲ್ಲ, ಹರಿಯುವ ಹೊಳೆ, ದಿನ ದಿನವೂ ಅದು ನವೋನವವಾಗುತ್ತಿದೆ
  • ಜ್ಞಾನ ಬೆಳೆದಂತೆಲ್ಲ ವ್ಯವಸ್ಥೆಗೊಳ್ಳಬೇಕಾಗುತ್ತದೆ. ವ್ಯವಸ್ಥೆಗೊಂಡಾಗ ವಿಸ್ತರಣ ಸಂಶೋಧನೆ ಮತ್ತು ವ್ಯಾಸಂಗಗಳು ಸುಲಭವಾಗುತ್ತವೆ
  • ಪುಸ್ತಕಗಳಲ್ಲಿ ಹಳೆಯವೆಂಬುವೇ ಇಲ್ಲ. ಓದಿರದ ಪುಸ್ತಕಗಳೆಲ್ಲ ಹೊಸವು; ಮತ್ತೆ ಮತ್ತೆ ಓದಬೇಕೆನ್ನುವ ಪುಸ್ತಕಗಳೆಲ್ಲ ಹೊಸವು.
    - ೧೬:೪೫, ೨೬ ಫೆಬ್ರುವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಯಾವ ಭಾಷೆಯ ಹೇರಿಕೆಯೂ ಸರಿಯಲ್ಲ, ಯಾವುದೇ ಭಾಷೆಯ ಕಲಿಕೆಯನ್ನು ತಡೆಯುವುದೂ ಸರಿಯಲ್ಲ.
    - ೧೪:೧೭, ೭ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸ್ವಾತಂತ್ರ್ಯ ಮನುಷ್ಯನ ದುಡಿಮೆಯನ್ನು ಬೇಡುತ್ತದೆ. ದುಡಿಯದ ಮನುಷ್ಯನಿಗೆ ಸ್ವಾತಂತ್ರ್ಯವಿರುವುದಿಲ್ಲ.
    - ೦೫:೫೫, ೧೫ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿಜವಾದ ವಿದ್ಯೆ ಮನುಷ್ಯನಿಗೆ ಆಲೋಚಿಸುವುದನ್ನು ಕಲಿಸುತ್ತದೆ.
    - ೦೪:೪೬, ೨೧ ಏಪ್ರಿಲ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿಜವಾದ ವಿದ್ಯೆ, ಮನುಷ್ಯನಿಗೆ ಆಲೋಚಿಸುವುದನ್ನು ಕಲಿಸುತ್ತದೆ.
    - ೦೬:೨೭, ೧೮ ನವೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಭಾಷೆಗಳನ್ನು ಒಂದಕ್ಕೊಂದು ಪೂರಕವೆಂದು ಭಾವಿಸಬೇಕು. ಅವುಗಳ ನಡುವೆ ಸ್ಪರ್ಧೆ ಏರ್ಪಡಿಸಬಾರದು.
  • ಮತ್ತೊಬ್ಬರ ವಿಚಾರವನ್ನು ಕೇಳುವ ಸಹನೆಯನ್ನು ಬೆಳಸಿಕೊಳ್ಳದಿದ್ದರೆ ನಾವು ವಿಚಾರವಂತರಾಗುವುದು ಸಾಧ್ಯವಿಲ್ಲ.
    - ೧೧:೧೦, ೧೪ ಮಾರ್ಚ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ‘ಸ್ನೇಹ’ ಬದುಕಿನ ಅಮೂಲ್ಯ ನಿಧಿ. ಒಳ್ಳೆಯ ಸ್ನೇಹಿತರು ವರವಾಗುತ್ತಾರೆ. ಕೆಟ್ಟ ಸ್ನೇಹಿತರು ಶಾಪವಾಗುತ್ತಾರೆ.
    - ೦೩:೧೮, ೧೬ ಜೂನ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿಪ್ರಕಟಗೊಂಡ ಸುಭಾಷಿತ.
  • ಸುಭಾಷಿತ: ಮನುಷ್ಯ ಕೇವಲ ಸ್ಥಿತಪ್ರಜ್ಞನಾಗಿದ್ದರೆ ಸಾಲದು, ಸ್ಥಿತಿಪ್ರಜ್ಞನೂ ಆಗಿರಬೇಕು.
    - ಪ್ರಜಾವಾಣಿಯಲ್ಲಿಪ್ರಕಟಗೊಂಡ ಸುಭಾಷಿತ.