ವಿಷಯಕ್ಕೆ ಹೋಗು

ಮಹಾವೀರ

ವಿಕಿಕೋಟ್ದಿಂದ
  • ಏನನ್ನಾದರೂ ಪಡೆದರೆ ಸಂತೋಷಪಡಬೇಡ, ಕಳೆದುಕೊಂಡರೆ ದುಃಖಿಸಬೇಡ. - ೧೮:೧೧, ೭ ಜನವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಹೊರಗಿನ ಸಾವಿರಾರು ಶತ್ರುಗಳನ್ನು ಗೆಲ್ಲುವುದಕ್ಕಿಂತಲೂ ತನ್ನನ್ನು ತಾನು ಗೆಲ್ಲುವುದು ಲೇಸು - ೧೨:೧೨, ೨ ಏಪ್ರಿಲ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸಹನಶೀಲನು ಸಂತೃಪ್ತಿ ಹೊಂದುತ್ತಾನೆ. ಸಹನೆ ಇಲ್ಲದವನು ದುಃಖಕ್ಕೆ ಗುರಿಯಾಗುತ್ತಾನೆ. - ೦೪:೧೧, ೧೭ ಫೆಬ್ರುವರಿ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪಾಪದಿಂದ ದೂರವಿರುವುದು ಒಬ್ಬನನ್ನು ಸಂಪೂರ್ಣವಾಗಿ ಸಂತೋಷಪಡಿಸುತ್ತದೆ.
  • ಎಲ್ಲಾ ಉಸಿರಾಡುವ, ಅಸ್ತಿತ್ವದಲ್ಲಿರುವ, ಜೀವಂತ, ಬುದ್ಧಿವಂತ ಜೀವಿಗಳನ್ನು ಕೊಲ್ಲಬಾರದು ಅಥವಾ ಹಿಂಸೆಯಿಂದ ನಡೆಸಿಕೊಳ್ಳಬಾರದು, ನಿಂದನೆ ಮಾಡಬಾರದು, ಹಿಂಸೆ ನೀಡಬಾರದು ಅಥವಾ ಓಡಿಸಬಾರದು.
  • ಜೀವಿಗಳಿಗೆ ದಯೆ ಮತ್ತು ಅಹಿಂಸೆ ತೋರುವುದು ತನಗೆ ದಯೆ ತೋರಿದಂತೆ.
  • ಕೊಲ್ಲಬೇಡ, ನೋವು ಕೊಡಬೇಡ. ಅಹಿಂಸೆಯೇ ಶ್ರೇಷ್ಠ ಧರ್ಮ.
  • ದಯೆ ಇಲ್ಲದವನು ಸುಟ್ಟ ಬೀಜದಂತೆ ನಿಷ್ಪ್ರಯೋಜಕ.

-೮ ಫೆಬ್ರವರಿ ೨೦೨೪ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ

  • ಮನುಷ್ಯನಲ್ಲಿ ಆಸೆ ಇಲ್ಲದಿದ್ದರೆ ಪ್ರಯತ್ನವೂ ಇರುವುದಿಲ್ಲ.

-೧೩ ಮಾರ್ಚ್ ೨೦೨೪ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ

  • ಪರಿಸರದ ಬಹುಮುಖ್ಯ ತತ್ವವೆಂದರೆ. ಈ ಪರಿಸರದಲ್ಲಿ ನೀವೊಬ್ಬರೇ ಇರುವುದಲ್ಲ ಎನ್ನುವುದು.
"https://kn.wikiquote.org/w/index.php?title=ಮಹಾವೀರ&oldid=12549" ಇಂದ ಪಡೆಯಲ್ಪಟ್ಟಿದೆ