ಮದರ್ ತೆರೇಸಾ
Jump to navigation
Jump to search
- ಉತ್ಕಟ ಪ್ರೀತಿಯನ್ನು ಅಳೆಯಲಾಗದು; ಕೊಡಬಹುದಷ್ಟೆ. - ೦೬:೫೪, ೨೬ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕೀಳರಿಮೆ ಮತ್ತು ಭಯವನ್ನು ಕಿತ್ತೊಗೆದರೆ ಅದ್ಭುತವಾದುದನ್ನು ಸಾಧಿಸಲು ಸಮರ್ಥರಾಗುತ್ತೀರಿ. - ೦೭:೦೫, ೨೯ ಜೂನ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕೆಲಸ ಮಾಡುವುದಕ್ಕೆ ನಾಯಕರಿಗಾಗಿ ಕಾಯಬೇಡಿ, ನಿಮ್ಮ ಪಾಡಿಗೆ ಕೆಲಸ ಮಾಡುವುದನ್ನು ಕಲಿಯಿರಿ. - ೦೫:೫೨, ೮ ಜುಲೈ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನೀವು ಜನರನ್ನು ವಿಮರ್ಶಿಸುವುದರಲ್ಲೇ ಕಾಲ ಕಳೆದರೆ, ಅವರನ್ನು ಪ್ರೀತಿಸಲು ನಿಮಗೆ ಸಮಯವೇ ಸಿಗದು. - ೦೪:೦೩, ೯ ಅಕ್ಟೋಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಮ್ಮಲ್ಲಿ ಶಾಂತಿ ಇಲ್ಲದಿದ್ದರೆ ಅದಕ್ಕೆ, ನಾವು ಪರಸ್ಪರ ಸಂಬಂಧಿಗಳು ಎಂಬುದನ್ನು ನಾವು ಮರೆತಿರುವುದೇ ಕಾರಣ. - ೦೭:೨೩, ೨೬ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಾವು ಯಾರಿಗೂ ಏನೂ ಆಗದೆ ಇರುವುದು ಜಗತ್ತಿನ ಬಹುದೊಡ್ಡ ರೋಗ. - ೦೨:೫೫, ೧೯ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಯಾರಿಂದಲೂ ಪ್ರೀತಿ ದೊರೆಯದ, ಯಾರಿಂದಲೂ ಕಾಳಜಿ ದೊರೆಯದ, ಎಲ್ಲರಿಂದಲೂ ಅಲಕ್ಷಿತನಾದ ಮನುಷ್ಯನ ಸ್ಥಿತಿ, ಹಸಿವಿನಿಂದ ನರಳುವವನಿಗಿಂತ ಘೋರ. - ೦೫:೩೬, ೨ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬಹಳಷ್ಟು ತಪ್ಪುಗಳನ್ನು ಮಾಡದೆ ಯಾರೂ ದೊಡ್ಡ ವ್ಯಕ್ತಿ ಅಥವಾ ಮಹಾಪುರುಷ ಆಗಲಾರರು. - ೦೪:೨೯, ೨೬ ಜೂನ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಷ್ಟು ಕೊಡುತ್ತೀಯ ಎನ್ನುವುದು ಮುಖ್ಯವಲ್ಲ. ಕೊಡುವುದರಲ್ಲಿ ಎಷ್ಟು ಪ್ರೀತಿ ತುಂಬಿಸಿದ್ದೀಯ ಎನ್ನುವುದು ಮುಖ್ಯ.