ದ.ರಾ.ಬೇಂದ್ರೆ
Jump to navigation
Jump to search
- ಭಿನ್ನಮತಗಳ ಹಿಂದೇ ಒಂದೇ ಒಂದು ಬುದ್ಧಿಯನ್ನು ಕಂಡು ಹಿಡಿಯುವುದೇ ಜ್ಞಾನ
- ಜ್ಞಾನ ಎಂಬುದು ಸೂರ್ಯನ ಹಾಗೆ, ನಾವಿರುವಲ್ಲಿಗೆ ಬಂದು ನಮ್ಮನ್ನು ಕೊರೆಯುತ್ತದೆ
- ಅನ್ಯರನು ಹಾಳುಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ. - ೦೫:೨೬, ೧೩ ಮೇ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರಕೃತಿಯ ಮೇಲೆ ಮಾನವ ಗೆಲುವು ಸಾಧಿಸಿದ ಕ್ರಮಬದ್ಧ ಕಥೆಯೇ ಸಂಸ್ಕೃತಿ. - ೦೩:೧೦, ೨೫ ಜೂನ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಂತಹ ಕಟು ಅನುಭವ ಪ್ರಸಂಗ ಬಂದರೂ ಎದೆಗುಂದಬಾರದು.ಇದೇ ಸುಖಿ ಆಗಿರೋ ರಹಸ್ಯ.
- ಅನ್ಯರನು ಆಳುಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ. - ೦೫:೨೬, ೬ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತೊs
- ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ (ಯುಗಾದಿ)