ತ.ರಾ.ಸು.

ವಿಕಿಕೋಟ್ದಿಂದ
  • ಅರಸನಾದವನು ಆಳಬೇಕು, ಅಳಬಾರದು. - ೧೪:೧೯, ೨೫ ಆಗಸ್ಟ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿಜವಾದ ಸೋಲು ಪ್ರತಿಸ್ಪರ್ಧಿಗಳಿಂದ ಸಂಭವಿಸುವ ಪರಾಜಯವಲ್ಲ. ನಮ್ಮಲ್ಲಿ, ನಮ್ಮ ಸಾಹಸದಲ್ಲಿ, ನಮ್ಮ ಶ್ರದ್ಧೆಯಲ್ಲಿ ನಮಗೆ ನಂಬಿಕೆ ಹೋಗುವುದು. - ೦೬:೪೩, ೩ ಮಾರ್ಚ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅಹಂಕಾರ, ಬೆಳೆಯುವ ಗಿಡಕ್ಕೆ ಹತ್ತುವ ರೋಗ. - ೧೦:೦೯, ೬ ಫೆಬ್ರುವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ದೇವರು ಧನ, ಅಧಿಕಾರ ಕೊಡೋದು ಜನರಿಗೆ ಉಪಕಾರ ಮಾಡಲಿ ಅಂತ. ಆದರೆ, ಮನುಷ್ಯ ಅದನ್ನು ಜನರನ್ನು ಸುಲಿಗೆ ಮಾಡಲು ಉಪಯೋಗಿಸುತ್ತಾನೆ. - ೧೨:೨೩, ೧೨ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸತ್ಯ ದರ್ಶನವಾಗಬೇಕು ಎಂದರೆ ಅಹಂಕಾರ ವಿಸರ್ಜನೆಯಾಗಬೇಕು.
  • ತಾನು ಆಚರಿಸದೆ ಮತ್ತೊಬ್ಬರು ಮಾತ್ರ ಆಚರಿಸಬೇಕೆಂದು ದ್ವಿವಿಧವಾದುದು ಎಂದು ಧರ್ಮವೆನಿಸಿಕೊಳ್ಳುವುದಿಲ್ಲ.
  • ‘ಅಹಂಕಾರ’, ಬೆಳೆಯುವ ಗಿಡಕ್ಕೆ ಹತ್ತುವ ರೋಗ. - ೦೨:೧೩, ೨೦ ಜುಲೈ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅಧಿಕಾರ ನಾಗರಹಾವಿನ ಹೆಡೆಯಂತೆ ಇದ್ದಂತೆ. ಅದು ಬರಲಿ ಎಂದು ಬಯಸಬಾರದು. ಬಂದಾಗ, ಸ್ವೀಕರಿಸುವಾಗ ಹೆದರಿ ಸ್ವೀಕರಿಸಬೇಕು.
"https://kn.wikiquote.org/w/index.php?title=ತ.ರಾ.ಸು.&oldid=8652" ಇಂದ ಪಡೆಯಲ್ಪಟ್ಟಿದೆ