ಚಾಣಕ್ಯ
Jump to navigation
Jump to search
- ನೀರಿನಲ್ಲಿ ಎಣ್ಣೆ, ವಿವೇಕಿಯಲ್ಲಿ ತಿಳಿವು ಸ್ವಶಕ್ತಿಯಿಂದ ವಿಸ್ತಾರವಾಗುತ್ತದೆ. - ೦೬:೩೨, ೯ ಏಪ್ರಿಲ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸೌಂದರ್ಯ ಮತ್ತು ಯೌವನವನ್ನು ಸೋಲಿಸುವ ತಾಕತ್ತು ಇರುವುದು ಜ್ಞಾನಕ್ಕೆ. - ೦೭:೧೮, ೩ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸ್ವಹಿತಾಸಕ್ತಿ ಇಲ್ಲದ ಸ್ನೇಹ ಇಲ್ಲವೇ ಇಲ್ಲ. ಇದು ಕಹಿಯಾದ ಸತ್ಯ. - ೦೫:೧೬, ೧೨ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸಾವಿರ ಹಸುಗಳ ನಡುವೆಯೂ ಕರುವು ತನ್ನ ತಾಯಿಯನ್ನೇ ಅನುಸರಿಸಿ ಹೋಗುವಂತೆ, ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಅವನನ್ನು ಹಿಂಬಾಲಿಸುತ್ತವೆ. - ೦೪:೫೨, ೧೯ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಭೀತಿ ಹತ್ತಿರವಾಗುತ್ತಿರುವ ಸುಳಿವು ಸಿಕ್ಕಿದ ಕೂಡಲೇ ಆಕ್ರಮಣ ಮಾಡಿ ಅದನ್ನು ನಾಶ ಮಾಡು. - ೦೬:೫೭, ೨೪ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಯಾರ ಬಗ್ಗೆ ನಿನಗೆ ದ್ವೇಷವಿದೆಯೋ ಅವನ ಬಳಿ ಮಧುರವಾಗಿ ಮತ್ತು ಹಿತವಾಗಿ ಮಾತನಾಡು. - ೦೬:೩೩, ೨೭ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬುದ್ಧಿವಂತನಿಗೆ ಜೀವನದ ಭಯವಿಲ್ಲ.:ಚಾಣಕ್ಯನ ಪ್ರಮುಖ ನೀತಿ ಸೂತ್ರಗಳು ಪ್ರಕಟಣೆ 23-Feb-2016 00:30 IST kannada.eenaduindia.com
- ಯಾವ ವ್ಯಕ್ತಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ತಾನಾಗಿ ಹೋರಾಟ ಮಾಡುತ್ತಾನೆ. ಆತನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.
- ಅಲ್ಪಕಾಲದ ಸುಖದಲ್ಲಿ ಮೈಮರೆಯಬಾರದು. ತಕ್ಷಣದ ಸುಖಕ್ಕಾಗಿ ದೀರ್ಘಕಾಲದ ಆನಂದ ಬಿಟ್ಟುಕೊಡುವವನು ಕಡುಮೂರ್ಖನೇ ಸರಿ.
- ದೇಶದ ಬುದ್ಧಿಜೀವಿಗಳು ಮತ್ತು ಅಪರಾಧಿಗಳು ತಳಮಳಗೊಂಡಿದ್ದಾರೆಂದರೆ ಆ ದೇಶದ ಆಡಳಿತ ನಡೆಸುವಾತ ಸರಿದಾರಿಯಲ್ಲಿದ್ದಾನೆಂದೆ ಅರ್ಥ.
- ಆತ್ಮ ವಿಶ್ವಾಸ ಒಂದಿದ್ದರೆ ಎಂತಹ ಪರಿಸ್ಥಿತಿಯಲ್ಲೂ ತಲೆ ಎತ್ತಿ ನಿಲ್ಲಬಹುದು.
- ಬೇರೆಯವರ ತಪ್ಪಿನಿಂದಲೂ ಕಲಿತುಕೊಳ್ಳಿ. ಎಲ್ಲಾ ತಪ್ಪುಗಳನ್ನು ನೀವೇ ಮಾಡುವಷ್ಟು ಜೀವನದ ಆಯಸ್ಸು ನಿಮಗಿಲ್ಲ.
- ತನಗಿಂತ ಹೆಚ್ಚಿನವನೊಡನಾಗಲೀ, ಸರಿಸಮನನೊಡನಾಗಲಿ ಯುದ್ಧ ಮಾಡಬಾರದು.
- ಆಶಾಪರನಾದ ಕಾರ್ಯದಕ್ಷನನ್ನು ಮೋಸಗೊಳಿಸುವುದು ಸುಲಭ.
- ಹಾಲಿನ ಜೊತೆ ಸೇರಿದ ನೀರು ಸಹ ಹಾಲಾಗುತ್ತದೆ, ಅದೇ ರೀತಿ ಗುಣವಂತನ ಆಶ್ರಯ ಪಡೆದ ಗುಣಹೀನನು ಗುಣವಂತನಾಗುತ್ತಾನೆ.
- ಮರ್ಯಾದೆ ಮೀರಿದವರನ್ನು ಯಾವತ್ತೂ ನಂಬ ಬಾರದು.:ಚಾಣಕ್ಯನ ಪ್ರಮುಖ ನೀತಿ ಸೂತ್ರಗಳು ಪ್ರಕಟಣೆ 23-Feb-2016 00:30 IST kannada.eenaduindia.com
- ವಿದ್ಯಾವಂತನಿಗೆ ಎಲ್ಲೆಡೆ ಗೌರವ ಲಭಿಸುತ್ತದೆ. ವಿದ್ಯೆ ಸೌಂದರ್ಯ ಮತ್ತು ಯೌವನಕ್ಕೂ ಮಿಗಿಲಾದದ್ದು - ೦೪:೦೮, ೨೪ ಜೂನ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮಕ್ಕಳನ್ನು ಐದು ವರ್ಷಗಳವರೆಗೆ ಮುದ್ದಿಸಬೇಕು, ಮುಂದಿನ ಹತ್ತು ವರ್ಷಗಳವರೆಗೆ ದಂಡಿಸಬೇಕು. ಹದಿನಾರರ ವಯಸ್ಸಿಗೆ ಬಂದ ನಂತರ ಮಿತ್ರರಂತೆ ಕಾಣಬೇಕು. - ೦೫:೩೭, ೧೫ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹೂವಿನ ಸುಗಂಧವು ಗಾಳಿ ಬೀಸಿದ ಕಡೆ ಮಾತ್ರ ಪಸರಿಸಿದರೆ, ಉತ್ತಮ ಕಾರ್ಯವು ಎಲ್ಲೆಡೆ ಪಸರಿ. - ೦೫:೪೮, ೨೩ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ವ್ಯಕ್ತಿ ಕೆಲಸದ ಮೂಲಕ ದೊಡ್ಡವನಾಗುವನೇ ಹೊರತು ಹುಟ್ಟಿನಿಂದಲ್ಲ. - ೧೭:೦೫, ೧೬ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಒಂದು ಕೆಲಸ ಹಿಡಿದ ಮೇಲೆ ಬೆನ್ನು ಹತ್ತಿ ಅದನ್ನು ಮುಗಿಸಿಬಿಡಬೇಕು. - ೧೬:೩೭, ೧ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಶ್ರಮಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವವರೇ ಕೊನೆಗೂ ಅತ್ಯಂತ ಸಂತೋಷದಿಂದ ಇರುತ್ತಾರೆ. - ೦೬:೨೦, ೬ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕೆಲಸ ಮಾಡುತ್ತಿದ್ದರೆ ಬಡತನ ಇರುವುದಿಲ್ಲ. ಮೌನವಾಗಿದ್ದರೆ ಜಗಳ ಉಂಟಾಗುವುದಿಲ್ಲ.