ಕಾಳಿದಾಸ

ವಿಕಿಕೋಟ್ದಿಂದ
  • ಕಾರ್ಯ ಕುಶಲನಾದ ಮನುಷ್ಯನಿಗೆ ಯಶಸ್ಸು ಮತ್ತು ಹಣಕ್ಕೆ ಕೊರತೆ ಇರುವುದಿಲ್ಲ. - ೦೪:೫೦, ೨೧ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಹಳೆಯದು ಎಂದರೆ ಎಲ್ಲವೂ ಶ್ರೇಷ್ಠವಲ್ಲ, ಹೊಸತು ಎಂದ ಮಾತ್ರಕ್ಕೆ ತಿರಸ್ಕರಿಸಬೇಕಿಲ್ಲ. ತಿಳಿದವರು ಎರಡನ್ನೂ ಪರೀಕ್ಷಿಸಿಯೇ ಒಪ್ಪುತ್ತಾರೆ. ಮೂರ್ಖರಾದವರು ಈ ವಿಷಯದಲ್ಲಿ ಅವಿಚಾರಿಗಳಾಗಿರುತ್ತಾರೆ. - ೦೫:೧೮, ೧೨ ಡಿಸೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಗುರಿ ಮುಟ್ಟಲು ನಿರ್ಧರಿಸಿರುವ ಮನಸ್ಸನ್ನು, ಇಳಿಜಾರಿನಲ್ಲಿ ಹರಿಯುವ ನೀರನ್ನು ಯಾರು ತಾನೇ ತಡೆಯಲು ಸಾಧ್ಯ? - ೦೭:೩೯, ೧೦ ಜನವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಇಂದಿನ ದಿನವನ್ನು ಚೆನ್ನಾಗಿ ಬದುಕಿದರೆ ನಿನ್ನೆಗಳು ಸುಂದರ ನೆನಪಾಗುತ್ತವೆ, ನಾಳೆಗಳು ಭರವಸೆಯ ಬೆಳಕಾಗುತ್ತವೆ. - ೦೮:೧೭, ೨೮ ಜನವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮನಸ್ಸನ್ನು ಚಂಚಲಗೊಳಿಸುವ ವಸ್ತು ಎದುರಿರುವಾಗಲೂ ಯಾರ ಮನಸ್ಸು ವಿಕಾರವಾಗುವುದಿಲ್ಲವೋ ಅವರೇ ಲೋಕದಲ್ಲಿ ಧೀರರು. - ೧೦:೪೩, ೨೭ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಆಸೆ ಇಲ್ಲದವನಿಗೆ ಜಗತ್ತೇ ತೃಣಸಮಾನ.
  • ದುರ್ಜನರು ಉಪಕಾರದಿಂದಲೇ ಶಾಂತರಾಗುವುದಿಲ್ಲ.
  • ಹುಲ್ಲು ಕೂಡ ಆಹಾರವಾಗಿ ಹಸುಗಳಿಗೆ ಒದಗುತ್ತದೆ. ಉಪಕಾರ ಬುಧ್ಧಿ ಇಲ್ಲದ ಮನುಷ್ಯ ಹುಲ್ಲಿಗಿಂತ ಕೀಳು.
  • ರತ್ನವನ್ನು ಇತರರು ಹುಡುಕಿಕೊಂಡು ಹೊಗುತ್ತಾರೆಯೇ ಹೊರತು ರತ್ನವೇ ಇತರರನ್ನು ಹುಡುಕಿಕೊಂಡು ಹೋಗುವುದಿಲ್ಲ.
"https://kn.wikiquote.org/w/index.php?title=ಕಾಳಿದಾಸ&oldid=8527" ಇಂದ ಪಡೆಯಲ್ಪಟ್ಟಿದೆ