ನಂಬಿಕೆಯೇ ಯಶಸ್ಸಿನ ಮೂಲಾಧಾರ. ನಂಬಿಕೆಯಿಲ್ಲದಿದ್ದರೆ ಯಾವುದೇ ಕಾರ್ಯ ಸಿದ್ಧಿಸುವುದಿಲ್ಲ. ಸುಖದ ಅನುಭವಕ್ಕೆ ನಂಬಿಕೆ ಮುಖ್ಯ. - ೧೭:೪೫, ೧೬ ಅಕ್ಟೋಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಮ್ಮ ಬಹುಪಾಲು ಸೋಲುಗಳಿಗೆ ಕಾರಣ ನಮ್ಮಲ್ಲಿ ತಲೆಯೆತ್ತುವ ಅಪನಂಬಿಕೆಗಳು.
ಈ ಪ್ರಪಂಚದಲ್ಲಿ ಯಾವುದೂ ಸ್ಥಿರವಲ್ಲ. ಕೀರ್ತಿಯೂ ಸರಿ ಕೀರ್ತಿವಂತರೂ ಸರಿ.
ಯೋಚನೆಗಳು ಅಲೆಯಂತೆ ಚಲಿಸುತ್ತವೆ, ತಮಗೆ ವ್ಯಕ್ತವಾಗಲು ಅನುಕೂಲವಾದ ಮನಸ್ಸನ್ನು ಹುಡುಕುತ್ತವೆ.
ಒಬ್ಬ ಆದರ್ಶ ತಾಯಿ ಗುರುಗಳಿಂತ ಶ್ರೇಷ್ಠಳು.
ಶಾಂತವಾಗಿ ನೀಡುವ ಉತ್ತರದಿಂದ ಎಂಥಾ ಸಿಟ್ಟನ್ನೂ ಕಡಿಮೆ ಮಾಡಬಹುದು.
ತೀವ್ರವಾದ ಹಂಬಲ ಮತ್ತು ಹಂತ ಹಂತವಾಗಿ ಮೇಲೇರುವ ತಾಳ್ಮೆ ವಿದ್ಯಾರ್ಥಿಗಳಿಗಿರಬೇಕು.