ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನ್ ನೀ ಕಾಣೆ.
ಜ್ಞಾನದ ರಕ್ಷೆಗಿಂತ ದೊಡ್ಡ ರಕ್ಷೆ ಇಲ್ಲ, ಅದು ಸಹಕಾರದಿಂದ ಮಾತ್ರ ಸಾಧ್ಯ.
ಧನವಿದ್ದವರೇ ಧನಿಕರಲ್ಲ, ಜ್ಞಾನ ಎನ್ನುವುದು ಬಾಲ್ಯದಿಂದಲೂ ಬೆಳೆಯುತ್ತಾ ಹೋದಂತೆ, ಜ್ಞಾನವೇ ಧನದ ‘ನಿಧಿ’ಯಾಗುತ್ತದೆ. ಜ್ಞಾನ ಒಂದು ಅನಂತವಾದ ನದಿ. ಈ ಮಹಾನದಿಗೆ ಎಷ್ಟು ಉಪ ನದಿಗಳು ಬಂದು ಸೇರುತ್ತವೆಯೋ ಬಲ್ಲವರಾರು?
ಜ್ಞಾನ ಸಮುದ್ರ ಇದ್ದ ಹಾಗೆ, ಈ ಜ್ಞಾನ ಸಮುದ್ರವನ್ನು ಬುದ್ಧಿ ಎಂಬ ಮಂದರದಿಂದ ಕಡೆದಾಗ ವಿಚಾರವೆಂಬ ಅಲೆಗಳು ಏಳುತ್ತವೆ. ಕಡೆಯುವುದು ಮುಂದುವರಿಸಿದರೆ ಬದುಕಿಗೆ ಉಪಯೋಗವಾಗುವ ಅಮೃತ ದೊರೆಕುತ್ತದೆ.