ಬೋಧಿ ವೃಕ್ಷ

ವಿಕಿಕೋಟ್ದಿಂದ

ವಿಜಯ ಕರ್ನಾಟಕದಲ್ಲಿ ಬೋಧಿ ವೃಕ್ಷ ವಿಭಾಗದಲ್ಲಿ ಪ್ರಕಟಗೊಂಡಿರುವ ನುಡಿಗಳನ್ನು ಇಲ್ಲಿ ಸೇರಿಸಲಾಗಿದೆ.

  • ಎಲ್ಲವೂ ಪರಿಮಿತ: ಮನಸ್ಸು ಸಹ ಪರಿಮಿತ. ಮನಸ್ಸಿಗೆ ದೀರ್ಘಾವಧಿಯ ಸಾ ಇದೆ. ವಿಜ್ಞಾನ, ತಂತ್ರಜ್ಞಾನ, ಸಂಗೀತ ಸಾಧನೆ, ಇದೆಲ್ಲವೂ ಮನಸ್ಸಿದ್ದರೆ ಆಗುವಂಥ ಕೆಲಸಗಳು. ಹಾಗೆಂದು ಮನಸ್ಸನ್ನು ಅಪರಿಮಿತ ಎನ್ನುವಂತಿಲ್ಲ. - ೨೮ ಡಿಸೆಂಬರ್ ೨೦೧೩, ೦೪:೦೦
  • ಕ್ಷುಲ್ಲಕತೆ ಮೀರುವುದು ಹೇಗೆ?: ಮನಸ್ಸು ಕ್ಷುಲ್ಲಕ ವಿಷಯಗಳ ಒಂದು ಪ್ರಪಂಚದಲ್ಲಿ ಜೀವಿಸುತ್ತದೆ; ಮತ್ತು ಕ್ಷುಲ್ಲಕವಾಗಿ ಮನಸ್ಸು ಒಂದು ಉನ್ನತ ನಮೂನೆ ಸೃಷ್ಟಿಸುತ್ತಿದ್ದರೂ ಅದು ಕ್ಷುಲ್ಲಕವಾಗಿಯೇ ಇರುತ್ತದೆ ಅಲ್ಲವ? - ೨೭ ಡಿಸೆಂಬರ್ ೨೦೧೩, ೦೪:೦೦
  • ಬರೀ ಕಲೆ ಅಲ್ಲವಿದು...: ಜಗತ್ತಿನ ನಿಗೂಢತೆಯನ್ನು ತೋರಬಲ್ಲ ಕಿಟಕಿ ಯಾವುದಾದರೂ ಇದ್ದರೆ, ಅದು ಕಲೆ. ಕಲೆಯ ನಾನಾ ಪ್ರಕಾರಗಳು ನಮ್ಮ ಸುತ್ತಲಿನ ವಿಸ್ಮಯವನ್ನು ಸಮರ್ಥವಾಗಿ ಕಟ್ಟಿಕೊಡುತ್ತವೆ. - ೨೪ ಡಿಸೆಂಬರ್ ೨೦೧೩, ೦೪:೧೩
  • ಕಂಬಗಳಿವೆ: ಪ್ರತಿಯೊಂದು ಸದುದ್ದೇಶದ ಕ್ರಿಯೆ ಸಹ ಆಕಾಶ ಹೊತ್ತಿರುವ ಕಂಬವೇ ಆಗಿದೆ. ಅವು ಹೊರನೋಟಕ್ಕೆ ಕಾಣುವುದಿಲ್ಲ, ಒಳಗಣ್ಣಿಗೆ ಮಾತ್ರ ಗೋಚರ. ಇಂಥ ನಂಬಿಕೆಯಿಂದ ನಾವು ಸಾಗಿದಾಗಲೇ ಹೆಚ್ಚಿನ ಶಕ್ತಿ ಚೈತನ್ಯಗಳು ನಮ್ಮದಾಗುತ್ತವೆ. ಅನಾಮಿಕ ಮೂಲದಿಂದ ನಾವು ಈ ಶಕ್ತಿಯನ್ನು ಹೊಂದುತ್ತೇವೆ. - ೨೫ ಡಿಸೆಂಬರ್ ೨೦೧೩, ೦೪:೦೦
  • ವಾಸ್ತವಕ್ಕೆ ಮುಖಾಮುಖಿ: ಭ್ರಮೆಗಳ ಸುತ್ತಲೇ ಬದುಕುತ್ತಿರುವ ನಾವು ಎದುರಿನ ವಾಸ್ತವಗಳನ್ನು ಒಪ್ಪಿಕೊಳ್ಳುತ್ತಿಲ್ಲ ಒಪ್ಪಿಕೊಳ್ಳುತ್ತಿಲ್ಲ. ಬಹುತೇಕ ಸಂದರ್ಭಗಳಲ್ಲಿ ನಮ್ಮ ತೀರ್ಮಾನಗಳು ಬೇರೆಯವರ ವಿಚಾರಗಳನ್ನು ಆಧರಿಸಿಯೇ ಇರುತ್ತದೆ. ವಾಸ್ತವ ಮತ್ತು ನಮ್ಮ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಚಿಸುವುದೇ ಇಲ್ಲ. - ೨೬ ಡಿಸೆಂಬರ್ ೨೦೧೩, ೦೪:೦೦
  • ಅತ್ಯಂತ ಸಂತುಷ್ಟ ವ್ಯಕ್ತಿ: ವಿಜ್ಞಾನ ತಂತ್ರಜ್ಞಾನಗಳು ನಮ್ಮೆಲ್ಲರ ಬದುಕು ಮಾತ್ರವಲ್ಲ, ಇಡಿಯ ಮಾನವ ಕುಲವನ್ನೇ ಬದಲಿಸಿಬಿಟ್ಟಿದೆ. ಆದರೆ ಈ ಪ್ರಾರ್ಥನೆಯ ಪ್ರಭಾವ ಎಷ್ಟು ಸೀಮಿತ ನೋಡಿ - ೩೦ ಡಿಸೆಂಬರ್ ೨೦೧೩, ೦೪:೦೪
  • ತಪ್ಪು ಹೆಜ್ಜೆಗಳು ತಪ್ಪಿದ್ದಲ್ಲ: ಪ್ರತಿ ಜೀವಿ ಸಹ ತನ್ನ ಪ್ರಗತಿ ಪಥದಲ್ಲಿ ನಿಶ್ಚಯವಾಗಿ ತಪ್ಪುಗಳು ಮಾಡಬೇಕಾದ್ದೇ. ಹೊಸ ಪಾಠಗಳನ್ನು ಕಲಿತುಕೊಳ್ಳುವಾಗ ತಪ್ಪು ಹೆಜ್ಜೆ ಹಾಕುವುದು ತಪ್ಪಿದ್ದಲ್ಲವಲ್ಲ? ಅಂತಹ ತಪ್ಪುಹೆಜ್ಜೆಗಳು ಪಾಪಗಳೂ ಅಲ್ಲ. - ೧ ಜನವರಿ ೨೦೧೪, ೦೪:೦೭
  • ಎರಡು ಅಲಗಿನ ಕತ್ತಿ: ಪ್ರತಿಯೊಬ್ಬರಿಗೂ ಹಣ ಸಂಪಾದಿಸುವುದು ಹೇಗೆ ಎನ್ನುವುದು ಗೊತ್ತಿದೆ. ಆದರೆ ಕೆಲವೇ ಕೆಲವರಿಗಷ್ಟೇ ಅದನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡುವ ಜ್ಞಾನವಿದೆ. - ೨ ಜನವರಿ ೨೦೧೪, ೦೪:೧೮
  • ದೋಣಿ ಸಾಗದು ಮುಂದೆ ಹೋಗದು...: ಬಾರ್‌ನಲ್ಲಿದ್ದ ಆ ಗುಂಪು ರಾತ್ರಿ ಬಹು ಹೊತ್ತಿನ ತನಕ ಮನಬಂದಂತೆ ಹರಟೆ ಹೊಡೆಯುತ್ತಾ ಕುಳಿತಿತ್ತು. ಕುಡಿದ ಮತ್ತಿನಲ್ಲಿ ಮಾತುಕತೆ ಎಲ್ಲೆಲ್ಲಿಗೋ ಹೋಗಿ, ಎಲ್ಲೆಲ್ಲಿಗೋ ನಿಲ್ಲುತ್ತಿತ್ತು. ಮಧ್ಯರಾತ್ರಿಯಾಗುತ್ತಿದ್ದಂತೆಯೇ ಬಾರ್ ಮುಚ್ಚುವ ಸಮಯವಾಯಿತು. - ೩ ಜನವರಿ ೨೦೧೪, ೦೪:೪೦
  • ಆಯ್ಕೆಗಳು ನಮ್ಮವು: ದೇವರು ದುಃಖವನ್ನು ಸೃಷ್ಟಿಸಲಿಲ್ಲ. ದುಃಖದ ಸಾಧ್ಯತೆಯನ್ನು ಮಾತ್ರ ಸೃಷ್ಟಿಸಿದ. ಅವನು ನಮಗೆ ಒಳಿತನ್ನು ಅಥವಾ ಕೆಡಕನ್ನು ಅಭಿವ್ಯಕ್ತಿಸುವ ಇಚ್ಛಾ ಸ್ವಾತಂತ್ರ್ಯವನ್ನು ಕೊಟ್ಟ. ಆದರೆ ಆಯ್ಕೆ ನಮ್ಮದು. ಪ್ರಪಂಚದ ಎಲ್ಲ ಸಂಕಷ್ಟಗಳಿಗೂ ಕಾರಣ ನಮ್ಮ ವೈಯಕ್ತಿಕ ಹಾಗೂ ಸಾಮೂಹಿಕ ಆಯ್ಕೆಗಳೇ ಆಗಿವೆ. - ೭ ಜನವರಿ ೨೦೧೪, ೦೪:೦೦
  • ಅರಿವಿಲ್ಲವಾದರೆ ಕ್ಷಮೆಯೂ ಇಲ್ಲ..: ‘ನನಗೆ ಹೀಗೆಲ್ಲ ಆಗುತ್ತೆ ಎಂದು ಗೊತ್ತಿರಲಿಲ್ಲ. ದಯವಿಟ್ಟು ನನ್ನ ಕ್ಷಮಿಸಿ,' ಎಂದರೆ ಪ್ರಯೋಜನವಿಲ್ಲ. ಅರಿವಿಲ್ಲದಿರುವುದಕ್ಕೂ ಆಗುವ ಪ್ರಮಾದಕ್ಕೂ ಸಂಬಂಧವಿಲ್ಲ. - ೧೫ ಜನವರಿ ೨೦೧೪, ೦೪:೫೦
  • ಅನುಭವಿಸದ ಹೊರತು...: ಧ್ಯಾನ ಎನ್ನುವ ಪದ ಮತ್ತು ಅದರ ಶುಭ ಪರಿಣಾಮ ಚರ್ಚಿಸುವಂಥದ್ದಲ್ಲ, ಅನುಭವಿಸುವಂಥವು. ಚರ್ಚೆಗಳಲ್ಲಿ ಯಾರಿಗೆ ಹೆಚ್ಚು ವಾಕ್ಚಾತುರ್ಯ ಇದೆಯೋ ಅವರು ಗೆಲ್ಲುತ್ತಾರೆಯೇ ಹೊರತು ಸತ್ಯ ಬಟಾಬಯಲಾಗುವುದಿಲ್ಲ. - ೧೩ ಜನವರಿ ೨೦೧೪, ೦೪:೧೧
  • ಭಯದ ಉತ್ಪತ್ತಿ: ಸತ್ಯವನ್ನು ಹೊರತೋರಬಲ್ಲ ಯಾವುದೇ ಒಂದು ನಿರ್ದಿಷ್ಟ ಕೀಲಿಕೈ ಇಲ್ಲ. ಬೋಧನೆ ಎಷ್ಟೇ ಉನ್ನತವಾಗಿದ್ದರೂ ಅದನ್ನು ವೈಯಕ್ತೀಕರಿಸಿಕೊಳ್ಳದ ಹೊ ಅದು ಸುಪ್ತವಾಗಿಯೇ ಇರುತ್ತದೆ. - ೮ ಜನವರಿ ೨೦೧೪, ೦೪:೧೪
  • ಸಂಕಲ್ಪಗಳ ಸುತ್ತ: ಹೊಸವರ್ಷವನ್ನು ಸಂತೋಷ, ಸಂಭ್ರಮ ಮತ್ತು ಪ್ರೀತಿಯೊಂದಿಗೆ ಸ್ವಾಗತಿಸಿದ್ದೇವೆ. ಆದರೆ ಹೊಸ ವರ್ಷದ ಸಂಕಲ್ಪಗಳ ಕತೆ? ಇದು ಒಂದು ವರ್ಷದ ವಿಷಯವಲ್ಲ, ಪ್ರತಿವರ್ಷವೂ ಇದ್ದದ್ದೇ. ಹೊಸ ವರ್ಷ ಹಾಗೇಹೀಗೆಂದು ನಾನಾ ಸಂಕಲ್ಪಗಳನ್ನು ಮಾಡುತ್ತೇವೆ, ಮುರಿಯುತ್ತೇವೆ. - ೧೦ ಜನವರಿ ೨೦೧೪, ೦೪:೦೦
  • ಸದ್ಗುಣದಿಂದ ದೃಢತೆ: ನಮ್ಮ ಬದುಕು ‘ಪ್ರತಿಧ್ವನಿ ಸಿದ್ಧಾಂತ’ವನ್ನೇ ಅನುಸರಿಸಿದೆ. ನೀವು ಒಳ್ಳೆಯದು ಮಾಡಿದರೆ, ಒಳ್ಳೆಯದು ಅಥವಾ ಕೆಟ್ಟದು ಮಾಡಿದರೆ ಕೆಟ್ಟದ್ದು ಜೀವನದಲ್ಲಿ ಪ್ರತಿಬಿಂಬವಾಗುತ್ತದೆ. - ೯ ಜನವರಿ ೨೦೧೪, ೦೪:೦೦
  • ಸರ್ವ ತ್ಯಾಗದ ಸರಳ ಸೂತ್ರ: "ನಿಮ್ಮಲ್ಲಿ ಯಾರು ಸರ್ವಸ್ವವನ್ನೂ ತ್ಯಾಗ ಮಾಡುವುದಿಲ್ಲವೋ ಅವರು ನನ್ನ ಶಿಷ್ಯರಾಗಲಾರರು", ಎಂದು ಏಸು ಕ್ರಿಸ್ತ ಅಂದೇ ಹೇಳಿಬಿಟ್ಟಿದ್ದಾನೆ. - ೧೬ ಜನವರಿ ೨೦೧೪, ೦೪:೫೭
  • ಮೂರು ಗುಣಗಳನ್ನೂ ದಾಟಬೇಕು: ಭೂಮಿಯು ಸೂರ್ಯನ ಸುತ್ತಲೂ ಸುತ್ತುತ್ತದೆ, ಗಂಡು ಹೆಣ್ಣಿನ ಸುತ್ತ ಸುತ್ತುತ್ತಾನೆ. ಇದೇ ರೀತಿ ಗಂಡಿನ ಸುತ್ತ ಹೆಣ್ಣೂ ಸುತ್ತುತ, ಅಥವಾ ಇಬ್ಬರೂ ಮಗುವಿನ ಸುತ್ತ ಸುತ್ತುತ್ತಾರೆ. - ೧೪ ಜನವರಿ ೨೦೧೪, ೦೪:೪೨
  • ಜಗವೇ ಒಂದು ನಾಟಕರಂಗ: ನಮ್ಮ ಬದುಕೆನ್ನುವುದು ಭಗವಂತನ ನಾಟಕದಂತೆ. ಆ ನಾಟಕದ ಪಾತ್ರಧಾರಿಗಳಾಗಿ ನಮ್ಮನ್ನು ಆ ದೇವರು ಸೃಷ್ಟಿಸಿದ್ದಾನೆ. ಈ ನಾಟಕವೆಲ್ಲವೂ ಆತನ ಸಂತೋಷಕ್ಕಾಗಿ. ಎಲ್ಲದಕ್ಕೂ ಅವನೇ ಸೂ! - ೧೧ ಜನವರಿ ೨೦೧೪, ೦೪:೦೦
  • ಕೆಲಸದ ಪ್ರೀತಿ: ಮನೆ ಬಿಟ್ಟರೆ, ಮನುಷ್ಯ ಹೆಚ್ಚಿನ ಸಮಯವನ್ನ ಕಚೇರಿ ಅಥವಾ ಕೆಲಸದ ಜಾಗದಲ್ಲಿಯೇ ಕಳೆಯಬೇಕಾಗುತ್. ಹೀಗಾಗಿ ಕಚೇರಿಯನ್ನು ಹಿತವಾಗಿ ರೂಪಿಸಿಕೊಳ್ಳಬೇಕು. ಕ ಎಂದ ಮೇಲೆ ಅಲ್ಲಿ ನೂ ಸವಾಲು, ಸಮಸ್ಯೆಗಳು ಸಹಜ. ಅವ ಮುಖಾಮುಖಿಯಾಗಲು ಒಂದಷ್ಟು ಸಿದ್ಧತೆಗಳು ಅಗತ್ಯ. - ೧೪ ಫೆಬ್ರವರಿ ೨೦೧೪, ೦೪:೦೦
  • ಅಂಕುಶವೇಕೆ ಮಕ್ಕಳಿಗೆ?: ಇಂದಿನ ದಿನಗಳಲ್ಲಿ ಎಲ್ಲ ಹಿರಿಯರದು ಒಂದೇ ಕೊರಗು. ‘‘ಮಕ್ಕಳು ನಮ್ಮ ಮಾತು ಕೇಳೋದಿಲ್ಲ,’’ ಅನ್ನುವುದು ಪೋಷಕರ ಕಾಮನ್ ಕಂಪ್ಲೆಂಟ್. - ೧೮ ಫೆಬ್ರವರಿ ೨೦೧೪, ೦೪:೧೭
  • ಇಚ್ಛಾಶಕ್ತಿ ಮಹಾಶಕ್ತಿ: ನಮ್ಮಲ್ಲಿ ಬಹುಮಂದಿ ಯಶಸ್ಸನ್ನು ಬಯಸುತ್ತೇವೆ. ಕೀರ್ತಿಯನ್ನು ಅರಸುತ್ತೇವೆ. ಮೆಚ್ಚುಗೆಯನ್ನು ಆಶಿಸುತ್ತೇವೆ. ಆದರೆ ಅದನ್ನು ಗಳಿಸಲು ಬೇಕಾದ ಇ ಎಲ್ಲರಲ್ಲೂ ಇರುವುದಿಲ್ಲ. - ೧೦ ಫೆಬ್ರವರಿ ೨೦೧೪, ೦೪:೦೦
  • ಪ್ರೇರಣೆಯ ಕೇಂದ್ರ: ಮೆದುಳಿನ ವ ನಡೆಸಿರುವ ಪ್ರಯೋಗಗಳ ಪ್ರಕಾರ ಡೋಪ್‌ಮೀನ್ ಎಂಬ ರಾಸಾಯನಿಕ ಪದಾರ್ಥ ಪ್ರತಿಕ್ಷಣವು ನಮ್ಮ ಇಚ್ಛಾಶಕ್ತಿಯ ಮಟ್ಟವನ್ನು ಪ್ರಿತಿಬಿಂಬಿಸುತ್ತದೆ. - ೧೧ ಫೆಬ್ರವರಿ ೨೦೧೪, ೦೩:೪೭
  • ಮನುಷ್ಯನ ಉನ್ನತ ಬಯಕೆ: ಬದುಕಿನಲ್ಲಿ ಸಾಹಸಗಳು ಇರಬೇಕು. ಇಂಥ ಸಾಹಸಗಳಿಗೆ ಧ್ಯಾನವು ನಮಗೆ ಶಕ್ತಿಯನ್ನು ತುಂಬುತ್ತ. ಧ್ಯಾನ ಸಾಧನೆ ಎನ್ನುವುದು ಬಾಲ್ಯದಿಂದಲೇ ನಮ್ಮ ಜೀವನದಲ್ಲಿ ಒಂದು ಭಾಗವಾಗಬೇಕು. - ೧೨ ಫೆಬ್ರವರಿ ೨೦೧೪, ೦೪:೪೫
  • ದೇವರನ್ನು ಪ್ರೀತಿಸಿ ದೇವರನ್ನು ಪ್ರೀತಿಸಿ ಎಂದು ಸಾಧು ಸಂತರು ಬಹಳ ಕಾಲದಿಂದ ಹೇಳುತ್ತಲೇ ಬಂದಿದ್ದಾರೆ. ಮನುಷ್ಯನ ಬದುಕು ನಶ್ವರ, ಇಲ್ಲಿ ಶಾಶ್ವತ ಅನ್ನುವಂಥದ್ದು ಏನೂ ಇಲ್ಲ. - ೨೧ ಫೆಬ್ರವರಿ ೨೦೧೪, ೦:೩
  • ಯೋಗವೆಂದರೆ...: ಯೋಗವೆಂದರೆ ದೈಹಿಕ ಆರೋಗ್ಯದ ಸಾಧನವಲ್ಲ. ವ್ಯಕ್ತಿಯ ಸಮಗ್ರ ವಿಕಸನಕ್ಕೆ ಯೋಗ ನೆರವಾಗಬಲ್ಲದು. ಯೋಗವು ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಶಾಶ್ವತವೂ, ಆನಂದವೂ ಆದ ಸ್ಥಿತಿಗೆ ತಲುಪಿಸುತ್ತದೆ ಎಂದು ಪರಿಣತರು ವ್ಯಾಖ್ಯಾನಿಸುತ್ತಾರೆ. - ೧೭ ಫೆಬ್ರವರಿ ೨೦೧೪, ೦೪:೨೧
  • ನಾನು ನಾವಾಗುವ ಪರಿ: ಅನಿರ್ಬಂಧಿತ ಪ್ರೀತಿ ಆತ್ಮದ ಅತ್ಯಂದ ಉತ್ಕೃಷ್ಟ ಸ್ಪಂದನ. ಅದು ಅತ್ಯಂತ ಉದಾತ್ತ ಯೋಚನೆ ಮ ಭಾವನೆಗಳ ರೂಪದಲ್ಲಿ ಪ್ರಕಟವಾಗುತ್ತದೆ. ಪ್ರೀತಿಯನ್ನು ಅನುಭವಿಸಿ ಹರಡುವು ನಮ್ಮ ಪರಿವರ್ತನೆ ಶೀಘ್ರವಾಗಿ ಆಗುತ್ತದೆ. - ೧೫ ಫೆಬ್ರವರಿ ೨೦೧೪, ೦೪:೦೦
  • ಅಧ್ಯಾತ್ಮದ ಉನ್ನತಾವಸ್ಥೆ: ಆನಂದ ಎನ್ನುವುದು ದುಡ್ಡಿಗೆ ಸಿಗುವ ವಸ್ತುವಲ. ಕೀರ್ತಿ, ಪ್ರತಿಷ್ಠೆ ಮತ್ತು ಗೌರವ ಎಲ್ಲವೂ ಕೆಲವರಿಗೆ ಇರುತ್ತದೆ. ಅಲ್ಲದೇ ಕೋಟ್ಯಂತರ ರೂಪಾಯಿ ಸಂಪಾದಿಸಿದರೂ, ನೆಮ್ಮದಿ ಅಥವಾ ಆನಂದ ಇರುವುದಿಲ್ಲ. ನಿಜಕ್ಕೂ ಆನಂದ ಅಥವಾ ನೆಮ್ಮದಿ ಎನ್ನುವುದು ನಮ್ಮೊಳಗೇ ಇದ್ದು, ಅದನ್ನು ಹೊಂದುವ ಮಾರ್ಗವನ್ನು ಕಂಡುಕೊಳ್ಳಬೇಕು. - ೧೩ ಫೆಬ್ರವರಿ ೨೦೧೪, ೦೪:೦೦
  • ಬಂಧಗಳೆಂಬ ಅಂಗಿಗಳ ಕಳಚುತ್ತಾ...: ‘‘ಒಂದು ಚಿಕ್ಕ ಇರುವೆ ತನ್ನ ಜೀವನಕ್ಕಾಗಿ ಒಂದು ಧಾನ್ಯ ಹೊತ್ತೊಯ್ಯುತ್ತಿದ್ದರೆ, ಅದಕ್ಕೆ ತೊಂದರೆ ಕೊಡಬೇಡ. ಅದಕ್ಕೂ ಒಂದು ಜೀವನವಿದೆ. ಜೀವನವೆಂಬುದು ಮಧುರವಾದುದು,’’ ಎಂದಿದ್ದಾನೆ ಝರಾತುಷ್ಟ. ಸೃಷ್ಟಿಯಲ್ಲಿ ಎಲ್ಲ ಜೀವಿಗಳೂ ಸಮಾನ. - ೨೦ ಫೆಬ್ರವರಿ ೨೦೧೪, ೦೪:೫೨
  • ಧನಾತ್ಮಕ ಆಲೋಚನೆ: ಸಮಯದಲ್ಲೂ ಸಕಾರಾತ್ಮಕವಾಗಿರುವುದು ಪ್ರಾಯಶಃ ದೈನಂದಿನ ಧ್ಯಾನದಷ್ಟೇ ಮುಖ್ಯ. ಸಕಾರಾತ್ಮಕವಾಗಿರುವುದೆಂದರೆ ಯೋಚನೆಗಳು ಮತ್ತು ಭಾವನೆಗಳೂ ಸಕಾರಾತ್ಮಕವಾಗಿರಬೇಕು. - ೨೨ ಫೆಬ್ರವರಿ ೨೦೧೪, ೦೪:
  • ಏಳು ಸೂತ್ರಗಳು: ಪ ಒಂದು ಕೆಲಸದ ಆ ದಾರಿಯಾಗುತ್ತದೆ. ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮ ಎನ್ನುವ ಆರು ಸೂತ್ರಗಳನ್ನು ಪಾಲಿಸಿದಾಗ ಯಶಸ್ಸು ಹುಡುಕಿಕೊಂಡು ಬ. - ೨೪ ಫೆಬ್ರವರಿ ೨೦೧೪, ೦೩:೧೨
  • ಮಹಾಸಮುದ್ರ: ಮಹಾಶಯರು ಆದವರೆ ಮಹಾಸಾಧನೆ ಮಾಡಿ ಮಹಾನುಭಾವರು ಆಗುತ್ತಾರೆ. ಅಂದರೆ ಮಹಾಶಯ ಮತ್ತು ಮಹಾನುಭಾವರ ನಡುವೆ ಮಹಾ ಸಾಧನೆಯೆಂಬ ಒಂದು ಸಮುದ್ರವೇ ಇದೆ. - ೨೫ ಫೆಬ್ರವರಿ ೨೦೧೪, ೦೪:೦೦
  • ಹಿಂಸೆ ತಡೆಗೆ ಬೌದ್ಧೋಪಾಯ: ಹಿಂಸೆಯನ್ನು ಮಾಡುವವರು ಮತ್ತು ಹಿಂಸೆಗೆ ಒಳಗಾಗುವರು- ಇಬ್ಬರಿಗೂ ಇರುವ ಒಂದು ದಾರಿಯೆಂದರೆ, ಮಿಥ್ಯೆ ಮತ್ತು ಅಹಂಕಾರದಿಂದ ಈಚೆ ಬರುವುದು ಮತ್ತು ನಾವು ಯಾರು, ಇಲ್ಲಿ ಏತಕ್ಕಾಗಿ ಬಂದಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳುವುದು. - ೨೬ ಫೆಬ್ರವರಿ ೨೦೧೪, ೦೪:೦೦
  • ಒಳ್ಳೆಯ ಗುರುವನ್ನು ಹುಡುಕುವ ಮೊದಲು: ನಮ್ಮ ಬದುಕನ್ನು ನಿಯಂತ್ರಿಸುವ ರಿಮೋಟ್ ಕಂಟ್ರೋಲರ್ ಸಮಾಜದ ಕೈಯಲ್ಲಿಯೇ ಇದೆ. ಇಂಥ ಹೊತ್ತಿನಲ್ಲಿ ಒಳ್ಳೆಯ ವಿದ್ಯಾರ್ಥಿಯಾದರೆ ಮಾತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಹೀಗಾಗಿ ಒಳ್ಳೆಯ ಗು ಹುಡುಕುವುದನ್ನು ನಿಲ್ಲಿಸಿ. ಅದರ ಬದಲಿಗೆ ನೀವೇ ಒಳ್ಳೆಯ ವಿದ್ಯಾರ್ಥಿಯಾಗಿ ರೂಪಾಂತರಗೊಳ್ಳಿ. - ೨೭ ಫೆಬ್ರವರಿ ೨೦೧೪, ೦೪:೦೦
  • ಆನಂದ ಪಡೆವ ಮಾರ್ಗ: ಲೌಕಿಕ ಭೋಗಗಳನ್ನೇ ನಾವು ಸಂತೋಷವೆಂದುಕೊಂಡು ಅದರಲ್ಲೇ ಕಳೆದುಹೋಗಿದ್ದೇವೆ. ಬಿಡುವುದೆಂದರೆ ನಿಜಕ್ಕೂ ಅದು ಸುಲಭದ್ದಲ್ಲ. ಎಲ್ಲವನ್ನೂ ತೊರೆದು, ಕಡೆಗೆ ಬಟ್ಟೆಯನ್ನೂ ಬಿಟ್ಟು ದಿಗಂಬರನಾಗಿಯೇ ಬದುಕಿದವನು ಮಹಾವೀರ. - ೨೮ ಫೆಬ್ರವರಿ ೨೦೧೪, ೦೪:೦೦
  • ಎಷ್ಟೊಂದು ಜ್ಞಾನ!: ಜೈನಮತ ಸ್ಥಾಪಕರಾದ ವರ್ಧಮಾನ ಮಹಾವೀರರು ಸತ್ಯವನ್ನು ಕಂಡುಹಿಡಿಯಬೇಕು ಎನ್ನುವ ಮಹಾಶಯದಿಂದ ಸಮಸ್ತ ರಾಜಭೋಗಗಳನ್ನು ತ್ಯಜಿಸಿ, ಹನ್ನೆರಡು ವರ್ಷಗಳ ಕಾಲ ಕಠೋರವಾದ ಮಹಾಧ್ಯಾನ ಸಾಧನೆಯನ್ನು ಮಾಡಿ ಮಹಾನುಭಾವನಾದನು. - ೩ ಮಾರ್ಚ್ ೨೦೧೪, ೦೪:೪೨
  • ಪ್ರಜ್ಞೆಯ ಉನ್ನತ ಸ್ತರಕ್ಕೇರುವ ಮಾರ್ಗ: ಉತ್ತಮ ಆಹಾರವು ನಾವು ಪ್ರಜ್ಞೆಯ ಉನ್ನತ ಸ್ತರಕ್ಕೇರಲು ಸಹಕರಿಸುತ್ತದೆ ಎನ್ನುತ್ತಾರೆ. ನಾವು ಸೇವಿಸುವ ಆಹಾರವು ಅಂತಹ ಶಕ್ತಿಯನ್ನು ನೀಡಲು ಸಮರ್ಥವಾಗಿದೆಯೇ ಎಂ ನಾವು ನೋಡಿಕೊಳ್ಳಬೇಕು. - ೧ ಮಾರ್ಚ್ ೨೦೧೪, ೦೪:೧೩
  • ಹೀಗೊಂದು ಸುಖಾನ್ವೇಷಣೆ: ಆನಂದದ ಇನ್ನೊಂದು ಹೆಸರೇ ಸುಖ. ಅಪ್ಪ ಸತ್ತಾಗ ಮಗ ಬಿಕ ಅಳುತ್ತಾನೆ. ಅಳುವ ಮೂಲಕ ಅಪ್ಪನಿಗೆ ಆತ ಗೌರವ ಸಲ್ಲಿಸುತ್ತಾನೋ, ತನ್ನ ಪ್ರೀತಿಯನ್ನು ಆಪ್ತರ ಮುಂದೆ ಅಭಿವ್ಯಕ್ತಗೊಳಿಸುತ್ತಾನೋ ಗೊತ್ತಿಲ್ಲ. ಆದರೆ ಅಳುವ ಮೂಲಕ ಆತ ಕಷ್ಟವನ್ನು ಕರಗಿಸುತ್ತಾನೆ. ಕಷ್ಟ ಕರಗಿಸುವುದು ಎಂದರೆ ಸುಖ ಹುಡುಕುವುದೇ ತಾನೇ? - ೪ ಮಾರ್ಚ್ ೨೦೧೪, ೦೪:೦೦
  • ಯೋಗ ಮತ್ತು ದೇವರು: ಮೇಲ್ನೋಟಕ್ಕೆ ಯೋಗವು ಒಂದು ಭೌತಿಕ ಅಭ್ಯಾಸದಂತೆ ಕಂಡರೂ, ಅದರ ವ್ಯಾಪ್ತಿ ವಿಸ್ತಾರವಾದುದು. ಅ ಮನಸ್ಸನ್ನು ಸುಸ್ಥಿತಿಯಲ್ಲಿಡುತ್ತದೆ. - ೫ ಮಾರ್ಚ್ ೨೦೧೪, ೦೪:೦೪
  • ನಾವು ಒಂಟಿಯಲ್ಲ...: ದೇವರಿದ್ದಾನೆಯೇ? ಹೌದು, ದೇವರಿದ್ದಾನೆ. ದೇವರನ್ನು ಪರಮಾತ್ಮ, ಪರಮೇಶ್ವರ, ಸೃಷ್ಟಿಕರ್ತ ಮುಂತಾಗಿ ಕರೆಯುತ್ತಾರೆ. ದೇವರಿದ್ದಾನೆಂದು ಸಾಧಿಸಲು ಸಾಧ್ಯವೇ? ದೇವರ ಅಸ್ತಿತ್ವವನ್ನು ಅರಿಯಬೇಕಾದರೆ ಅದು ನೇರ ಅನುಭವದಿಂದ ಮಾತ್ರ ಸಾಧ್ಯ. - ೬ ಮಾರ್ಚ್ ೨೦೧೪, ೦೪:೦೯
  • ಕಡೆಯ ಕರೆಗೆ ಕೊರಗುವ?: ಸಿಖ್ ಧರ್ಮದಲ್ಲಿ ಸಾವನ್ನು ದೇವರೊಂದಿಗೆ ಐಕ್ಯವಾಗುವ ದಿನವೆಂದು, ಪವಿತ್ರ ಸಂದರ್ಭವೆಂದು ಹೇಳಲಾಗುತ್ತದೆ. ಹೀಗಾಗಿಯೇ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಅಳುವುದು, ದುಃಖ ಪಡುವುದು, ಗದ್ದಲ, ಗಲಾಟೆ ಮತ್ತು ರೋಧನಕ್ಕೆಲ್ಲ ಅವಕಾಶವಿಲ್. - ೭ ಮಾರ್ಚ್ ೨೦೧೪, ೦೪:೪೦
  • ಪ್ರಾರ್ಥನೆಯೂ ಆಟವೂ: ‘‘ಯಾವುದೇ ಕೆಲಸ ಮಾಡಿದರೂ ಫಲ ಸಿಗದೇಹೋದರೆ ಪ್ರಾರ್ಥನೆ ಮಾಡು, ಎಷ್ಟು ಪ್ರಾರ್ಥನೆ ಮಾಡಿದರೂ ಪ್ರಯೋಜನವಿಲ್ಲ ಅನ್ನಿಸಿದರೆ ಕೆಲಸ ಮಾಡು,’’ -ಜರ್ಮನಿಯ ಈ ಗಾದೆ ವಿಚಿತ್ರವಾಗಿದ್ದರೂ, ಅರ್ಥಪೂರ್ಣವಾಗಿದೆ. - ೮ ಮಾರ್ಚ್ ೨೦೧೪, ೦೪:೫೨
  • ಭ್ರಷ್ಟಾಚಾರ ನಿಗ್ರಹಕ್ಕೆ ಗೀತೆ: ಆಚಾರ್ಯ ಶಿವೇಂದರ್ ನಗರ್ ಅವರು ಸೊನಾಲ್ ಶ್ರೀವಾಸ್ತವ ಅವರಿಗೆ ನೀಡಿರುವ ಸಂದರ್ಶನದಲ್ಲಿ ಭಗವದ್ಗೀತೆ, ಸಾವು, ಭ್ರಷ್ಟಾಚಾರ ನಿಗ್ರಹದಂಥ ಮಹತ್ವದ ವಿಷಯಗಳನ್ನು ಸರಳವಾಗಿ ವಿವರಿಸಿದ್ದಾರೆ. ಸಂದರ್ಶನದ ಸಾರ ಸಂಗ್ರಹ ಇಲ್ಲಿದೆ. - ೧೦ ಮಾರ್ಚ್ ೨೦೧೪, ೦೪:೦೨
  • ಸಲಿಗೆಯೆಂಬುದು ಶೋಷಣೆಯ?: ಒಬ್ಬ ವ್ಯಕ್ತಿ ಕುರಿತಾಗಿ ನಿಮ್ಮಲ್ಲಿ ಯಾವಾಗ ಲೈಂಗಿಕ ಹುಟ್ಟುತ್ತವೆ, ಲೈಂಗಿಕ ಸಂಪರ್ಕ ಸಾಧ್ಯವಾಗುತ್ತದೆ, ಲೈಂಗಿಕವಾಗಿ ಆಕರ್ಷಿತವಾಗುವಿರಿ... ಈ ಸಂದರ್ಭದಲ್ಲಿ ನಿಮ್ಮೊಳಗೆ ಅಸೂಯೆ ಪ್ರವೇಶಿಸುತ್ತದೆ. - ೧೨ ಮಾರ್ಚ್ ೨೦೧೪, ೦೪:೨೩
  • ಧ್ಯಾನ ಸೇವೆ ದೊಡ್ಡದು: ಸಂಗೀತ ತಿಳಿಯದವರಿಗೆ ಅದರಲ್ಲಿನ ಮಾಧುರ್ಯ ಹೇಗೆ ತಿಳಿಯುವುದಿಲ್ಲವೋ, ಚದುರಂಗ ಆಡದವರಿಗೆ ಅದರಲ್ಲಿನ ಹಿಡಿತಗಳು ಹೇಗೆ ತಿಳಿದಿಲ್ಲವೋ, ಹಾಗೆಯೇ, ಸೇವೆ ಮಾಡದವನಿಗೆ ಅದರಲ್ಲಿನ ಆನಂದ ತಿಳಿಯದು. - ೧೧ ಮಾರ್ಚ್ ೨೦೧೪, ೦೪:೪೭
  • ಮೌನ ಪಾವನ ನಮ್ಮೊಳಗೆ ನಾನು ಎ ಹಮ್ಮು ತುಂಬಿಕೊಂಡಾಗ, ಮನಸ್ಸು ಅವ್ಯವಸ್ಥಿತವಾಗಿದ್ದಾಗ, ಸ್ವಾರ್ಥಪರರಾದಾಗ ನಮ್ಮ ಮಾತು, ಗದ್ದಲವಾಗಿ (ಕರ್ಕಶ) ಬದಲಾಗುತ್ತಾರೆ. ನಾ ಎಲ್ಲ ನಕಾರಾತ್ಮಕ ಆಲೋಚನೆಗಳನ್ನು ತೆಗೆದು ಹಾಕಬೇಕು. - ೧೫ ಮಾರ್ಚ್ ೨೦೧೪, ೦೪:೦೦
  • ವಿದ್ಯೆಯೊಂದಿಗೆ ವಿನಯ: ವಿದ್ಯೆ ಮತ್ತು ವಿನಯಯುಕ್ತನಾದ ಬ್ರಾಹ್ಮಣ, ಹಸು, ಆನೆ, ನಾಯಿ ಮತ್ತು ಚಾ ಇವರೆಲ್ಲರನ್ನೂ ಸಮದಷ್ಟಿಯಿಂದಲೇ ನೋಡುತ್ತಾನೆ ಎಂದು ಭಗವದ್ಗೀತೆಯಲ್ಲಿ (ಅಧ್ಯಾಯ ೫, ಶ್ಲೋಕ ೧೮) ಶ್ರೀಕಷ್ಣ ಹೇಳುತ್ತಾನೆ. - ೧೩ ಮಾರ್ಚ್ ೨೦೧೪, ೦೪:೫೯
  • ಕಲಿಕೆ: ಪ್ರಾಚೀನ ಕಾಲದಲ್ಲಿ ಚೀನಾದಲ್ಲಿ ಕೆಲವು ಕುಟುಂಬಗಳು ಕಡುಕಷ್ಟದಲ್ಲಿ ಬದುಕುತ್ತಿದ್ದವು. ಹೊಟ್ಟೆ ಬಟ್ಟೆಗೆ ಸಂಪಾದಿಸಲು ಬೆವರು ಹರಿಸುತ್ತಿದ್ದರು. - ೧೪ ಮಾರ್ಚ್ ೨೦೧೪, ೦೪:೨೩
  • ವಲಸೆ ಬಂದವರು ನಾವು: ಪ್ರ ಈಗಿನ ಪರಿಸ್ಥಿತಿ ಮತ್ತು ಸಮಸ್ಯೆಗಳನ್ನು ನೋಡುತ್ತಿದ್ದರೆ, ಎಂದಾದರೂ ಒಳ್ಳೆಯ ಕಾಲ ಬರುವುದೇ, ಎಲ್ಲರೂ ಪೈಪೋಟಿ, ದುರಾಸೆ ಮತ್ತು ಯುದ್ಧಗಳಿಲ್ಲದೆ ಆರೋಗ್ಯ ಮತ್ತು ಆನಂದದಿಂದ ಬದುಕಲು ಸಾಧ್ಯವೇ ಎಂದು ಯೋಚಿಸುವಂತಾಗುತ್ತದೆ. - ೧೭ ಮಾರ್ಚ್ ೨೦೧೪, ೦೪:೨
  • ಸೋಲಿನ ಗೆಲುವು: ಅಮೆರಿಕಾ ಪ್ರಜೆಯೊಬ್ಬ ೧೮೩೧ರಲ್ಲಿ ವ್ಯಾಪಾರ ಪ್ರಾರಂಭಿಸಿದ. ಒಂದೇ ವರ್ಷದಲ್ಲಿ, ಅಂದರೆ ೧೮೩೨ರಲ್ಲಿ ಅ ವ್ಯಾಪಾರದಲ್ಲಿ ಯಶಸ್ವಿಯಾಗಲಿಲ್ಲವಾದ್ದರಿಂದ ರಾಜಕೀಯ ಪ್ರವೇಶಿಸಿದ. - ೨೦ ಮಾರ್ಚ್ ೨೦೧೪, ೦೪:೩೨
  • ವಿದ್ಯೆಯೊಂದಿಗೆ ವಿನಯ: ವಿದ್ಯೆ ಮತ್ತು ವಿನಯಯುಕ್ತನಾದ ಬ್ರಾಹ್ಮಣ, ಹಸು, ಆನೆ, ನಾಯಿ ಮತ್ತು ಚಾಂಡಾಲ ಇವರೆಲ್ಲರನ್ನೂ ಸಮದಷ್ಟಿಯಿಂದಲೇ ನೋಡುತ್ತಾನೆ ಎಂದು ಭಗವದ್ಗೀತೆಯಲ್ಲಿ (ಅಧ್ಯಾಯ ೫, ಶ್ಲೋಕ ೧೮) ಶ್ರೀಕಷ್ಣ ಹೇಳುತ್ತಾನೆ. - ೧೩ ಮಾರ್ಚ್ ೨೦೧೪, ೦೪:೫೯
  • ಶ್ರೇಷ್ಠತೆಯ ಸಾಧನೆ: ಮಹಾ ಜ್ಞಾನಿಗಳಾದ ಭಾರತದ ಋಷಿಮುನಿಗಳು ಬಹಳ ಹಿಂದೆಯೇ ಶ್ರೇಷ್ಠತೆಯನ್ನು ಗಳಿಸಲು ಸೂತ್ರವನ್ನು ಅನ್ವೇಷಿಸಿದ್ದರು. ಪ್ರಾಪಂಚಿಕ ಲೋಕದಲ್ಲಿ ಜಯ ಪಡೆಯುವುದು ಇದರ ಮುಖ್ಯ ಉದ್ದೇಶವಾಗಿರಲಿಲ್ಲ. ಬದಲು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದು ಗುರಿಯಾಗಿತ್ತು. - ೧೯ ೨೦೧೪, ೦೪:೧೦
  • ಸೋಲಿನ ಗೆಲುವು: ಅಮೆರಿಕಾ ಪ್ರಜೆಯೊಬ್ಬ ೧೮೩೧ರಲ್ಲಿ ವ್ಯಾಪಾರ ಪ್ರಾರಂಭಿಸಿದ. ಒಂದೇ ವರ್ಷದಲ್ಲಿ, ಅಂದರೆ ೧೮೩೨ರಲ್ಲಿ ಅವನು ವ್ಯಾಪಾರದಲ್ಲಿ ಯಶಸ್ವಿಯಾಗಲಿಲ್ಲವಾದ್ದರಿಂದ ರಾಜಕೀಯ ಪ್ರವೇಶಿಸಿದ. - ೨೦ ಮಾರ್ಚ್ ೨೦೧೪, ೦೪:೩೨
  • ಆಂತರಿಕ ಸೌಂದರ‌್ಯ: ಹಸಿರು ಹೊಲದಲ್ಲಿ ಗಾಳಿಗೆ ತೂಗುವ ಹಳದಿ ಸಾಸಿವೆಯ ಹೂಗಳು, ಹರಿವ ತೊರೆ ಎಂತಹ ಸುಂದರ ದೃಶ್ಯ ಎಂದ ಅನ್ನಿಸದೆ ಇರದು. - ೨೧ ಮಾರ್ಚ್ ೨೦೧೪, ೦೪:೩೮
  • ಸಾವ ಸಂಭ್ರಮಿಸುವ ಪ್ರಬುದ್ಧತೆ: ಯಾವ ಧ ಅಹಿಂಸೆಯಾಗಿರಬೇಕು. ಯಾವುದೇ ಜೀವ, ಮಾನವ ಅಥವಾ ಯಾರಿಗೂ ನೋವುಂಟು ಮಾಡಬಾರದು. - ೨೨ ಮಾರ್ಚ್ ೨೦೧೪, ೦೪:೫೭
  • ಅಂಪ್ರಕ ಲಯದ ಜತೆ ಸಾಗ ಜೀವ ಅ ಅನು. ಬ ಜ ಬದವುದು ಒಂದೊಳ್ಳೆಯ ಆಯ್ಕೆ. - ೨೪ ಮಾರ್ಚ್ ೨೦೧೪, ೦೪:೪೫
  • ವಿದ್ಯೆಯೊಂದಿಗೆ ವಿನಯ: ವಿದ್ಯೆ ಮತ್ತು ವಿನಯಯುಕ್ತನಾದ ಬ್ರಾಹ್ಮಣ, ಹಸು, ಆನೆ, ನಾಯಿ ಮತ್ತು ಚಾಂಡಾಲ ಇವರೆಲ್ಲರನ್ನೂ ಸಮದಷ್ಟಿಯಿಂದಲೇ ನೋಡುತ್ತಾನೆ ಎಂದು ಭಗವದ್ಗೀತೆಯಲ್ಲಿ (ಅಧ್ಯಾಯ ೫, ಶ್ಲೋಕ ೧೮) ಶ್ರೀಕಷ್ಣ ಹೇಳುತ್ತಾನೆ. - ೧೩ ಮ ೨೦೧೪, ೦೪:
  • ಸೋಲಿನ ಗೆಲುವು: ಅಮೆರಿಕಾ ಪ್ರಜೆಯೊಬ್ಬ ೧೮೩ ವ್ಯಾಪಾರ ಪ್ರಾರಂಭಿಸಿದ. ಒಂದೇ ವರ್ಷದಲ್ಲಿ, ಅಂದರೆ ೧೮೩೨ರಲ್ಲಿ ಅವನು ವ್ಯಾಪಾರದಲ್ಲಿ ಯಶಸ್ವಿಯಾಗಲಿಲ್ಲವಾದ್ದರಿಂದ ರಾಜಕೀಯ ಪ್ರವೇಶಿಸಿದ. - ೨೦ ಮಾರ್ಚ್ ೨೦೧೪, ೦೪:೩೨
  • ವಿದ್ಯೆಯೊಂದಿಗೆ ವಿನಯ: ವಿದ್ಯೆ ಮತ್ತು ವಿನಯಯುಕ್ತನಾದ ಬ್ರಾಹ್ಮಣ, ಹಸು, ಆನೆ, ನಾಯಿ ಮತ್ತು ಚಾಂಡಾಲ ಇವರೆಲ್ಲರನ್ನೂ ಸಮದಷ್ಟಿಯಿಂದಲೇ ನೋಡುತ್ತಾನೆ ಎಂದು ಭಗವದ್ಗೀತೆಯಲ್ಲಿ (ಅಧ್ಯಾಯ ೫, ಶ್ಲೋಕ ೧೮) ಶ್ರೀಕಷ್ಣ ಹೇಳುತ್ತಾನೆ. - ೧೩ ಮ ೨೦೧೪, ೦೪:೫೯
  • ದೇವರ ಕೃಪೆಗೆ ಮೈಯೊಡ್ಡಿ: ದೇವರು ಸಜೀವ ಆಗಿರುವನು. ಆತನನ್ನು ಪ್ರಕ್ರಿಯೆಯೇ ಪರಮಾನಂದ. ನಮ್ಮೆಲ್ಲರ ಗುರಿಯಾಗಿರುವ, ಬ್ರಹ್ಮಾನಂದ ಆಗಿರುವ ಕೃಷ್ಣ, ಯೇಸುಕ್ರಿಸ್ತ ನಿಮ್ಮಲ್ಲಿಯೇ ಇರುವನು. ಸಾಕ್ಷಾತ್ಕಾರಕ್ಕಾಗಿ ನಾವೆಲ್ಲರೂ ಜೀವನ ಪರ್ಯಂತ ಹುಡುಕುತ್ತಿರುವ, ಎಲ್ಲರ, ಎಲ್ಲದರ ಅಂತರಾಳದಲ್ಲಿ ಇರುವವನು ಇದೇ ಸಾರ್ವತ್ರಿಕವಾದ ದೇವರು. - ೨೫ ಮಾರ್ಚ್ ೨೦೧೪, ೦೪:೦೦
  • ಸೋಲಿನ ಗೆಲುವು: ಅಮೆರಿಕಾ ಪ್ರಜೆಯೊಬ್ಬ ೧೮೩೧ರಲ್ಲಿ ವ್ಯಾಪಾರ ಪ್ರಾರಂಭಿಸಿದ. ಒಂದೇ ವರ್ಷದಲ್ಲ, ಅಂದರೆ ೧೮೩೨ರಲ್ಲಿ ಅವನು ವ್ಯಾಪಾರದಲ್ಲಿ ಯಶಸ್ವಿಯಾಗಲಿಲ್ಲವಾದ್ದರಿಂದ ರಾಜಕೀಯ ಪ್ರವೇಶಿಸಿದ. - ೨೦ ಮಾರ್ಚ್ ೨೦೧೪, ೦೪:೩೨
  • ಮೌನವೇ ಆಭರಣ: ಯಾರು ಮೌನವಾಗಿರುತ್ತಾರೊ ಅವರ ‘ಮುನಿ ಎನ್ನುತ್ತ. ಅವಶ್ಯಕತೆ ಇದ್ದರೆ ಮಾತನಾಡಬೇಕು, ಹಾಡು ಹಾಡಬಹುದು. ಅವಶ್ಯಕತೆ ಇಲ್ಲದಿದ್ದರೆ ಬಾಯಿಂದ ಶಬ್ದ ಬರಬಾರದು. ಮೌನದಿಂದ ಇರುವುದನ್ನು ಅಭ್ಯಾಸ ಮಾಡಬೇಕು. - ೨೭ ಮಾರ್ಚ್ ೨೦೧೪, ೦೪:೦೦
  • ಐಹಿಕತೆ ನಕಾರಾತ್ಮಕವೇನಲ್ಲ: ಬೌದ್ಧ ಧರ್ಮದ ಪ್ರಕಾರ ಐಹಿಕವಾದವು ಯಾವಾಗಲೂ ನಕಾರಾತ್ಮಕವೇ ಆಗಿರಬೇಕಿಲ್ಲ. ಇದೊಂದು ಸಾಧನ ಮತ್ರ. ಇದೊಂದು ಕಂಪ್ಯೂಟರಿನಂತೆ, ಶಾಂತಿಯ ಮಂತ್ರ ಸಾರಲು ಇಲ್ಲವೇ ದ್ವೇಷಪೂರಿತ ಸಂದೇಶ ಹರಡಲು ಇದನ್ನು ಬಳಸಬಹುದು. - ೨೬ ಮಾರ್ಚ್ ೨೦೧೪, ೦೪:೦೦
  • ಸೋಲಿನ ಗೆಲುವು: ಅಮೆರಿಕಾ ಪ್ರಜೆಯೊಬ್ಬ ೧೮೩೧ರಲ್ಲಿ ವ್ಯಾಪ ಪ್ರಾರಂಭಿಸಿದ. ಒಂದೇ ವರ್ಷದಲ್ಲಿ, ಅಂದರೆ ೧೮೩೨ರಲ್ಲಿ ಅವನು ವ್ಯಾಪಾರದಲ್ಲಿ ಯಶಸ್ವಿಯಾಗಲಿಲ್ಲವಾದ್ದರಿಂದ ರಾಜಕೀಯ ಪ್ರವೇಶಿಸಿದ. - ೨೦ ಮಾರ್ಚ್ ೨೦೧೪, ೦೪:೩೨
  • ಇತರರ ಕಣ್ಣುಗಳಿಂದ ನೋಡುವುದು: ಇತರರ ಕಣ್ಣುಗಳಿಂದ, ದೃಷ್ಟಿಕೋನಗಳಿಂದ ಪ್ರಪಂಚವನ್ನು ನೋಡುವುದರಿಂದ ಬೇರೆಯವರನ್ನು ಅರ್ಥ ಮಾಡಿಕೊಳ್ಳಲು, ಅವರೊಂದಿಗೆ ಸಂಬಂಧ ಬೆಳೆಸಿಕೊಳ್ಳಲು, ಅವರ ಸಮಸ್ಯೆಯನ್ನು ಅರಿತು ಬಗೆಹರಿಸಲು ಸುಲಭವಾಗುತ್ತದೆ. - ೨೮ ಮಾರ್ಚ್ ೨೦೧೪, ೦೪:೧೧
  • ಆನಂದದ ಅಂತರ್ಜಲ ಪಡೆಯಲು...: ದಿನವಿಡೀ ಧ್ಯಾನ ಮಾಡಿ, ನಿಮ್ಮನ್ನು ನೀವು ನೋಡಿಕೊಳ್ಳಲು ಸಾಧ್ಯವಾಗದೆ ಹೋದರೆ ಪ್ರಯೋಜನವಿಲ್ಲ. ಹೊರಗಣ್ಣನ್ನು ಮುಚ್ಚಿ, ಒಳಗಣ್ಣನ್ನು ತೆರೆದಿಡಿ. ನಿಮ್ಮೊಳಗಿನ ಆಳದಲ್ಲಿರುವ ಆನಂದ ನಿಮಗೆ ಗೋಚರಿಸುವುದು. - ೨೯ ಮಾರ್ಚ್ ೨೦೧೪, ೦೪:೦೦
  • ಸಾಮರಸ್ಯದ ಬದುಕು: ಸಹಜೀವಿಗಳೊಂದಿಗೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕುವುದು ಅತ್ಯಂತ ಕಷ್ಟದ ವಿಚಾರ. ಬಹಶಃ ಹಕ್ಕಿಗಳು ಮತ್ತು ಪ್ರಾಣಿಗಳೊಂದಿಗೆ ಬದುಕುವುದು ಮನುಷ್ಯರ ಜೊತೆಗೆ ಬದುಕುವುದಕ್ಕಿಂತ ಹೆಚ್ಚು ಸುಲಭ. - ೩೧ ಮಾರ್ಚ್ ೨೦೧೪, ೦೪:೫೧
  • ಬದುಕಿನ ದೊಡ್ಡ ಪಾಠಗಳು: ಡೈನಮೈಟ್ ಕಂಡುಹಿಡಿದ ಆಲ್‌ಫ್ರೆಡ್ ನೊಬೆಲ್, ಶಸ್ತ್ರಾಸ್ತ್ರ ಉತ್ಪಾದನೆ ಮಾಡುವ ೯೦ ಕಾರ್ಖಾನೆಗಳನ್ನು ಸ್ಥಾಪಿಸಿದ. ಲೆಕ್ಕವಿಲ್ಲದಷ್ಟು ಸಂಪತ್ತು ಅವನ ಖಜಾನೆಯಲ್ಲಿ ಬಿದ್ದಿತ್ತು. ಯಾವುದಕ್ಕೂ ಕೊರತೆ ಇರಲಿಲ್ಲ. ಆಗ ನಡೆದ ಒಂದು ಘಟನೆ ಅವನ ಬದುಕಿನ ಗತಿಯನ್ನೇ ಬದಲಿಸಿಬಿಟ್ಟಿತು. - ೨ ಏಪ್ರಿಲ್ ೨೦೧೪, ೦೪:೦೭
  • ವಿಭಿನ್ನ ಸ್ವರೂಪಗಳು: ಸ್ತ್ರೀವಾದ, ಪುರುಷಪ್ರಧಾನ ಸಮಾಜ, ಧರ್ಮ ಮತ್ತು ಪೌರಾಣಿಕ ಪದಗಳನ್ನು ಬಳಸುವಾಗ ಈ ಪದಗಳ ಮೂಲ ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳಲ್ಲಿ ಎಂಬುದನ್ನು ಪ್ರಜ್ಞಾ ಪೂರ್ವಕವಾಗಿ ನೆನಪಿಟ್ಟುಕೊಳ್ಳಬೇಕು. - ೪ ಏಪ್ರಿಲ್ ೨೦೧೪, ೦೪:೨೭
  • ಸಂಬಂಧ ಮತ್ತು ಸಿದ್ಧಾಂತ: ಸಂಬಂಧ ಅಂದರೇನು? ಘರ್ಷಣೆ, ನೋವು ಮತ್ತು ಯಾತನೆ, ಒಬ್ಬರ ಮೇಲೊಬ್ಬರ ಅವಲಂಬನೆ, ಹೋಲಿಕೆ, ಸಂಸಾರ ಮತ್ತು ಇತ್ಯಾದಿಗಳ ಸಮಗ್ರವನ್ನು ನಾವು ಸಂಬಂಧ ಅನ್ನುತ್ತೇವಲ್ಲವೇ? ನಾನು ಸಂಬಂಧದ ಅವಲಂಬನೆ ಬಗ್ಗೆ ಮಾತಾಡುವಾಗ ಅದು ಒಬ್ಬ ಡಾಕ್ಟರ್ ಮತ್ತು ರೋಗಿ ಅಥವಾ ಗುರು ಹಾಗು ಶಿಷ್ಯನ ವ್ಯಾವಹಾರಿಕ ಸಂಬಂಧಗಳ ಬಗ್ಗೆ ಆಗಿರುವುದಿಲ್ಲ. - ೫ ಏಪ್ರಿಲ್ ೨೦೧೪, ೦೫:೫೩
  • ನಾಗರಿಕತೆ ಕಟ್ಟುವ ಪರಿ: ವಿಶ್ವದೆಲ್ಲೆಡೆ ಹರಡಿಕೊಂಡಿರುವ ಬಹಾಯ್ ಸಮುದಾಯ ನಾಗರಿಕತೆಯೊಂದನ್ನು ಕಟ್ಟುವಲ್ಲಿ ರಚನಾತ್ಮಕವಾಗಿ ಭಾಗವಹಿಸುವ ಪರಿಯ ಬಗ್ಗೆ ಚಿಂತನೆ ನಡೆಸುತ್ತಿದೆ. - ೩ ಏಪ್ರಿಲ್ ೨೦೧೪, ೦೪:೩೬
  • ಅಹಂಕಾರದ ತೆರೆ ಸರಿದಾಗ: ಮನುಷ್ಯ ತನ್ನ ಅಸ್ತಿತ್ವವನ್ನು ಖಾತ್ರಿಪಡಿಸಿಕೊಳ್ಳುವುದೇ ಅಹಂಕಾರದಿಂದ. ಒಂದು ದಿನ ತಾನು ಅವಜ್ಞೆಗೆ ಒಳಗಾದೆ, ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅನಿಸಿದರೂ ಸಾಕು ತೀವ್ರ ಚಡಪಡಿಸಿಹೋಗುತ್ತಾನೆ. - ೭ ಏಪ್ರಿಲ್ ೨೦೧೪, ೦೪:೫೧
  • ರಾಮ ಬೋಧಿಸಿದ ರಾಜಧರ್ಮ: ರಾಮಾಯಣದಲ್ಲಿ ಹೇಳಿದ ‘ರಾಮರಾಜ್ಯ’ ನೆಲೆಗೊಳ್ಳಬೇಕಾದರೆ ರಾಮ ಭರತನಿಗೆ ಉಪದೇಶಿಸಿದ ರಾಜಧರ್ಮವನ್ನೇ ಅವಲಂಬಿಸಬೇಕು. ರಾಮನು ಕೇಳಿದ ಒಂದೊಂದು ಪ್ರಶ್ನೆಗಳೂ ರಾಜಧರ್ಮ ತಿಳಿಸುವುದಲ್ಲದೇ, ರಾಜನ ಜವಾಬ್ದಾರಿಯನ್ನು ಮಾರ್ಮಿಕವಾಗಿ ಹೇಳುತ್ತದೆ. - ೮ ಏಪ್ರಿಲ್ ೨೦೧೪, ೦೪:೦೦
  • ನಾಸ್ತಿಕರ ಕುರಿತ ವ್ಯಾಖ್ಯಾನ: ನಾಸ್ತಿಕರಿಗೆ ದೇವರು ಸೃಷ್ಟಿಸಿದ ಸ್ವರ್ಗ ಅಥವಾ ನರಕವೂ ಇಲ್ಲ. ಸ್ವರ್ಗ ಅಥವಾ ನರಕಗಳನ್ನು ಸೃಷ್ಟಿಸುವವರು ನಾವೇ. ಅದೂ ಕೂಡಾ ಇದೇ ಜೀವಿತಾವಧಿಯಲ್ಲಿಯೇ. ನಾವು ಮಾಡಿದ ಕೆಲಸಗಳ ಫಲವನ್ನು ಮುಂದಿನ ಜನ್ಮಗಳಲ್ಲಿ ಅಲ್ಲದೆ ಇಂದೇ ಉಣ್ಣುತ್ತೇವೆ. - ೯ ಏಪ್ರಿಲ್ ೨೦೧೪, ೦೪:೦೦
  • ಬದುಕಿನ ದೊಡ್ಡ ಪಾಠಗಳು: ಡೈನಮೈಟ್ ಕಂಡುಹಿಡಿದ ಆಲ್‌ಫ್ರೆಡ್ ನೊಬೆಲ್, ಶಸ್ತ್ರಾಸ್ತ್ರ ಉತ್ಪಾದನೆ ಮಾಡುವ ೯೦ ಕಾರ್ಖಾನೆಗಳನ್ನು ಸ್ಥಾಪಿಸಿದ. ಲೆಕ್ಕವಿಲ್ಲದಷ್ಟು ಸಂಪತ್ತು ಅವನ ಖಜಾನೆಯಲ್ಲಿ ಬಿದ್ದಿತ್ತು. ಯಾವುದಕ್ಕ ಕೊರತೆ ಇರಲಿಲ್ಲ. ಆಗ ನಡೆದ ಒಂದು ಘಟನೆ ಅವನ ಬದುಕಿನ ಗತಿಯನ್ನೇ ಬದಲಿಸಿಬಿಟ್ಟಿತು. - ೨ ಏಪ್ರಿಲ್ ೨೦೧೪, ೦೪:೦೭
  • ಸಕಾರಾತ್ಮಕತೆಯ ಸಂತೋಷ: ಅನೇಕ ಜನರು ಮಾಡುವ ಕಾರ್ಯಗಳ ಫಲವನ್ನು ಆರಂಭಿಸುವ ಮೊದಲೇ ನಿರೀಕ್ಷಿಸುತ್ತಾರೆ. ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ ಮತ್ತು ಫಲಿತಾಂಶವು ನಮ್ಮ ಎಂಬ ತತ್ತ್ವವನ್ನು ಅನುಸರ, ವೈಫಲ್ಯದ ನೋವು ಬಾಧಿಸುವುದಿಲ್ಲ. ಏಕೆಂದರೆ ಆಗ ನಮ್ಮ ಮನಸ್ಸು ಬಯಕೆರಹಿತ ಸ್ಥಿತಿಯಲ್ಲಿರುತ್ತದೆ. - ೧೪ ಏಪ್ರಿಲ್ ೨೦೧೪, ೦೪:೩೦
  • ಚಾಣಕ್ಯನೀತಿಯ ಹೊಸ ನೋಟ: ಜೇಮ್ಸ್ ಬಾಂಡ್ ಒಬ್ಬ ಕಾಲ್ಪನಿಕ ಪತ್ತೇದಾರ ಇರಬಹುದು. ಆದರೆ, ಆತ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಚಾಣಕ್ಯ ನಿರೂಪಿಸಿರುವ ‘ಮಾದರಿ ಪತ್ತೇದಾರ’ನ ಕಲ್ಪನೆಗೆ ಸಮೀಪದಲ್ಲಿದ್ದಾನೆ. - ೧೦ ಏಪ್ರಿಲ್ ೨೦೧೪, ೦೪:೦೦
  • ಸಮತೋಲನವೇ ಧ್ಯಾನ: ಸಮತೋಲನದಲ್ಲಿರುವುದು ಮನಸ್ಸಿಗೆ ಅಸಾಧ. ಅದು ಅತ್ಯಂತ ಕಷ್ಟವೆಂದೇ ತೋರುತ್ತದೆ. ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ಸಾಗುವುದು ಅತ್ಯಂತ ಸುಲಭ. ಒಂದು ಧ್ರುವದಿಂದ ಇನ್ನೊಂದಕ್ಕೆ ಸಾಗುವುದು ಮನಸ್ಸಿನ ಲಕ್ಷಣ. ನೀವು ಸಮತೋಲನದಿಂದಿದ್ದರೆ, ಮನಸ್ಸು ಕಣ್ಮರೆಯಾಗುತ್ತದೆ. - ೧೨ ಏಪ್ರಿಲ್ ೨೦೧೪, ೦೪:೧೨
  • ಗುರುವಿನ ಅನುಗ್ರಹ: ಗುರುವಿನ ಅಥವಾ ದೇವರ ಅನುಗ್ರಹದ ಬಗ್ಗೆ ಮಾತನಾಡುವಾಗ ಅದು ವಾಸ್ತವಿಕತೆಯಿಂದ ಬಹುದೂರವಿರುತ್ತದೆ. ಮನಸ್ಸನ್ನು ರಾಗದ್ವೇಷಗಳಿಂದ ಮುಕ್ತಗೊಳಿಸಿ, ಐಹಿಕ ಸುಖ ಭೋಗಗಳಿಂದ ಸಂತಪ್ತ ಭಾವಗಳಿಂದ, ಅಸಂತಪ್ತಿ, ಅಸಮಾಧಾನಗಳಿಂದ ಮನಸ್ಸನ್ನು ಶುದ್ಧೀಕರಿಸಿ ನಿರ್ಮಲಗೊಳಿಸಿಕೊಳ್ಳಬೇಕು. - ೧೧ ಏಪ್ರಿಲ್ ೨೦೧೪, ೦೪;೦೦
  • ವಿಶೇಷತೆ-ಸಾಮಾನ್ಯತೆ: ಇಂಡಿಯಾದಲ್ಲಿ ಕೆಲ ಮನೆಗಳಲ್ಲಿ ಅನೇಕ ಕನ್ನಡಿಗಳಿರುತ್ತವೆ; ಗೋಡೆಗಳನ್ನೂ ಮೇಲು ಮಾಳಿಗೆಯ ಒಳಮುಖವನ್ನೂ ಕನ್ನಡಿಗಳಿಂದ ಮುಚ್ಚಿರುವುದುಂಟು. ಅಂಥ ಒಂದು ಮನೆಯಲ್ಲಿ ಒಮ್ಮೆ ಒಂದು ನಾಯಿ ಪ್ರವೇಶ ಮಾಡಿತು. - ೧೬ ಏಪ್ರಿಲ್ ೨೦೧೪, ೦೪:೪೧
  • ಅಹಮಿಕೆಯ ತೊರೆಯುವಿಕೆ: ಮನಸ್ಸಿಲ ಎಲ್ಲ ಸಾರವೂ ಸಾಕಾರಗೊಳ್ಳುವುದು ಜಾಗ ಅಥವಾ ಪ್ರಜ್ಞೆಗಳಲ್ಲಿ. ಆದರೆ ಅದಕ್ಕೆ ಅಹಂ ಮುಸುಕಿದಾಗ, ಅದರ ತರ್ಕ ಚಿಂತನೆಗಳು ಬದಲಾಗುತ್ತವೆ. ವಿಶ್ವದತ್ತ ಮನಸ್ಸು ಅಹಂಗೆ ಮಾತ್ರ ಸೀಮಿತವಾಗುವುದಿಲ್ಲ. ಅದರಿಂದ ಹೊರಗೆ ಏನೂ ಇರುವುದಿಲ್ಲ. - ೧೫ ಏಪ್ರಿಲ್ ೨೦೧೪, ೦೪:೦೦
  • ಕ್ಷುದ್ರ ಮನಸ್ಸುಗಳ ಗೆಲ್ಲಿ: ಜನಸ ಒಳ್ಳೆಯತನಕ್ಕೆ ವಿಶ್ವ ತಾನೇತಾನಾಗಿ ಒತ್ತಾಸೆ ನೀಡುತ್ತದೆ. ನನ್ನ ಬದುಕಿನಲ್ಲಿ ಸಂಕಷ್ಟ ಎದುರಾದಾಗಲೆಲ್ಲ ನನ್ನ ನೆರವಿಗೆ ಬಂದವರು ಶ್ರೀಸಾಮಾನ್ಯರೇ. - ೧೮ ಏಪ್ರಿಲ್ ೨೦೧೪, ೦೪:೧೫
  • ಆತ್ಮದ ಊಟವೇ ಧ್ಯಾನ: ಹೇಗೆ ಶರೀರಕ್ಕೆ ಊಟ ಬೇಕೋ ಹಾಗೆ ಆತ್ಮಕ್ಕೆ ಧ್ಯಾನ ಬೇಕು. ಶರೀರಕ್ಕೆ ಧ್ಯಾನ ಬೇಡ, ಆತ್ಮಕ್ಕೆ ಊಟ ಬೇಡ. ಶರೀರ ಶವವಾಗಿ ಬಿದ್ದರೆ ಅದಕ್ಕೆ ಧ್ಯಾನ ಬೇಡ. ಶರೀ ಆತ್ಮ ಇರುವುದರಿಂದ ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನದ ಅವಶ್ಯಕತೆ ಇದೆ. - ೧೯ ಏಪ್ರಿಲ್ ೨೦೧೪, ೦೪:೦೦
  • ವಿಕೃತಿಯ ಗಳಿಗೆಯಿಂದಾಚೆ: ಮನುಷ್ಯ ತನ್ನ ಅಸ್ತಿತ್ವವನ್ನು ಖಾತ್ರಿಪಡಿಸಿಕೊಳ್ಳುವುದೇ ಅಹಂಕಾರದಿಂದ. ಒಂದು ದಿನ ತಾನು ಅವಜ್ಞೆಗೆ ಒಳಗಾದೆ, ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅನ್ನಿಸಿದರೂ ಸಾಕು ತೀವ್ರ ಚಡಪಡಿಸಿಹೋಗುತ್ತಾನೆ. - ೨೧ ಏಪ್ರಿಲ್ ೨೦೧೪, ೦೪:೪೫
  • ಶಿಶುವೆಂಬ ಸಸಿ: ಒಂದು ಸಸಿಯು ಬೆಳೆದು ಹೆಮ್ಮರವಾಗಬೇಕಾದರೆ ಅದಕ್ಕೆ ರಕ್ಷಣೆ, ಪೋಷಣೆ ಎರಡೂ ಬೇಕು. ದನ-ಕರುಗಳು ಬಂದು ತಿಂದುಹಾಕದಂತೆ ಸಸಿಗೆ ಬೇಲಿಹಾಕಿ ರಕ್ಷಿಸಬೇಕು. - ೧೯ ಏಪ್ರಿಲ್ ೨೦೧೪, ೦೪:೪೨
  • ವ್ಯಕ್ತಿ, ಸಮಾಜ ಒಂದಕ್ಕೊಂದು ಪೂರಕ: ಸಮಾಜ ಮತ್ತು ವ್ಯಕ್ತಿಗಳ ನಡುವೆ ಪರಸ್ಪರ ಕೊಡುಕೊಳ್ಳುವ ಸಂಬಂಧವಿದೆ. ಇದನ್ನು ಅರಿತಾಗಲೇ ಸುಸ್ಥಿರ, ನ್ಯಾಯಸಮ್ಮತ ವಿಕಾಸ ಸಾಧ್ಯ. - ೨೨ ಏಪ್ರಿಲ್ ೨೦೧೪, ೦೪:೧೪
  • ಮರದ ಸೌಂದರ್ಯ: ನಾನು ನಡೆಯುತ್ತ ಹೋಗುತ್ತಿರುವಾಗ ಚಳಿಯಲ್ಲಿ ಉದುರಿದ ಕೆಂಪು ಒತ್ತಿದ ಅರಸಿನ ಬಣ್ಣದ ಒಂದು ಸತ್ತ ದಪ್ಪ ಎಲೆ ನೋಡಿದೆ. ಅದು ಬಾಡಿರಲಿಲ್ಲ. ಸಾವಿನಲ್ಲೂ ಆ ಎಲೆಯಲ್ಲಿ ಸರಳತೆ ತುಂಬಿತ್ತು. ಸುಂದರವಾಗಿತ್ತು. ಆ ಎಲೆಯಲ್ಲಿ ಇಡೀ ಮರದ ಸತ್ವ ಅಡಗಿತ್ತು. - ೨೩ ಏಪ್ರಿಲ್ ೨೦೧೪, ೦೪:೦೦
  • ಆನಂದ ಸಾರ್ವತ್ರಿಕ ಹುಡುಕಾಟ: ನಮ್ಮ ವ್ ಬಯಕೆಗಳ ಸುತ್ತಲೇ ಗಿರಕಿ ಹೊಡೆಯುವುದರಿಂದ, ಸೂಕ್ತ ಬಯಕೆ ಯಾವುದೆಂದು ಅರಿತುಕೊಳ್ಳಬೇಕಿದೆ. ಎಲ್ಲಕ್ಕಿಂತ ಮೊದಲು ಗುರಿಯನ್ನು ಆಯ್ದುಕೊಳ್ಳಬೇಕು. ದೇವ ಸಾಕ್ಷಾತ್ಕಾರ ಮತ್ತು ದೇವನಲ್ಲಿ ಒಂದಾಗುವ ಗುರಿ ಹೊಂದುವುದೇ ಜೀವನಕ್ಕೆ ಸರಿಯಾದ ಗುರಿ. - ೨೪ ಏಪ್ರಿಲ್ ೨೦೧೪, ೦೪೦೦
  • ಸಾವಿನ ಭಯ ಬಿಟ್ಟು ಬದುಕಲಾರಂಭಿಸಿ: ಸಾವಿನ ಭಯದಿಂದ ಅನೇಕರಿಗೆ ತೀವ್ರ ಉದ್ವೇಗ, ಭಯವಿಹ್ವಲತೆ, ಗಾಬರಿ ಮತ್ತು ಚಿತ್ತ ಭ್ರಾಂತಿಗಳು ಉಂಟಾಗುತ್ತವೆ. ಇವುಗಳ ವಿರುದ್ಧ ಹೋರಾಟ ನಡೆಸುತ್ತಲೇ ಅವರ ಶಕ್ತಿಯಿಡೀ ಸೋರಿ ಹೋಗುತ್ತದೆ. ಇಂತಹ ಭೀತಿಯೊಡನೆ ಹೋರಾಡಲು ಅವರು ಎರಡು ವಿಭಿನ್ನ ಹಾದಿ ಹಿಡಿಯುತ್ತಾರೆ. - ೨೫ ಏಪ್ರಿಲ್ ೨೦೧೪, ೦೪:೦೨
  • ತಿಳಿವು ಘಟಿಸುವ ಘಳಿಗೆ: ನಾನು ಕರ್ತನಲ್ಲ ಎಂಬುದನ್ನು ಕೇಳಿಸಿಕೊಂಡರಷ್ಟೆ ಸಾಕಾಗುವುದಿಲ್ಲ. ನಾನು ‘ಕರ್ತಾ’ ಆಗಿದ್ದೀನೇ? ಮಾಡುವವನು ನಾನೇ ಆಗಿದ್ದೀನೇ? ಎಂದು ಪರೀಕ್ಷಿಸಿಕೊಳ್ಳುವುದು ಬಹಳ ಅವಶ್ಯಕ. - ೨೬ ಏಪ್ರಿಲ್ ೨೦೧೪, ೦೪:೦೦
  • ಅಸಾಮಾನ್ಯ ಸರಳತೆ: ಇಂದಿನ ಜಗತ್ತು ಆಧುನೀಕರಣ ಮತ್ತು ತಾಂತ್ರಿಕ ಸಂಸ್ಕೃತಿಗಳ ವೇಗ ಮತ್ತು ರಭಸಗಳಿಗೆ ಎಷ್ಟು ಒಳಪಟ್ಟಿದೆಯೆಂದರೆ, ಈ ಸಂಕೀರ್ಣತೆಯಲ್ಲಿ ಸಂಪೂರ್ಣ ಸರಳವಾಗಿರುವುದು ಅತ್ಯಂತ ಕಷ್ಟದ ಸಂಗತಿ. - ೨೮ ಏಪ್ರಿಲ್ ೨೦೧೪, ೦೪:೫೧
  • ಸತ್ಯದ ಶಕ್ತಿ ಮತ್ತು ಆನಂದ; ಒಂದು ದಿನ ಕಾರ್ತೀಕನ ಚೀಲದಿಂದ ತನ್ನ ಆತ್ಮೀಯ ಸ್ನೇಹ ಆರ್ಯನ್ ಹಣ ಕದಿ–ಯು–ತ್ತಿದ್ದುದನ್ನು ಕಿಷನ್ ನೋಡಿದ. ಸ್ವಲ್ಪಸಮಯದ ನಂತರ, ಕಾರ್ತೀಕ್ ಶಾಲೆಯ ಶುಲ್ಕ ನೀಡಲು ತಂದಿದ್ದ ಹಣ ತನ್ನ ಚೀಲದಲ್ಲಿಲ್ಲದ್ದನ್ನು ಕಂಡು, ಅಳುತ್ತಾ ಗುರು–ಗಳ ಬಳಿ ಹೋಗಿ ತನ್ನ ಚೀಲದಲ್ಲಿಟ್ಟಿದ್ದ ಹಣ ಮಾಯವಾಗಿ–ರು–ವುದನ್ನು ತಿಳಿಸಿದನು. - ೩೦ ಏಪ್ರಿಲ್ ೨೦೧೪, ೦೪:೫೭
  • ಮನಸ್ಸಿನ ಎಲ್ಲೆ ಮೀರಿ...: ನಿರಾಕಾ ವಸ್ತುವು ಧ್ಯಾನವಾಗಬಹುದೇ? ಆಗ ಅದು ನಿರಾಕಾರವಾಗಿಯೇ ಉಳಿಯುತ್ತದೆಯೇ? - ೨೯ ಏಪ್ರಿಲ್ ೨೦೧೪, ೦೪:೦೧
  • ಕೊಡುವುದರಲ್ಲಿನ ಸುಖ: ‘‘ಬಯಕೆ ಎಂಬುದು ಒಂದು ಬೇನೆ. ಅದು ನಿಮ್ಮನ್ನು ನಿರೀಕ್ಷೆಯ ಕಾತರ-–ಕಳವಳ ಸ್ಥಿತಿಯಲ್ಲಿಟ್ಟು ತೂಗಾಡಿಸುತ್ತದೆ. ನೀವು ಅತ್ಯಂತ ತೀವ್ರವಾಗಿ ಬಯಸಿದ ವಸ್ತುವು ಸಿಕ್ಕ ಮೇಲೆ ನಿಮಗೆ ಸುಖ, ಸಂತೋಷದ ಅನುಭೂತಿಯಾಗುತ್ತದೆ. - ೧ ಮೇ ೨೦೧೪, ೦೪:೦೪
  • ಶಾಶ್ವತತೆಯ ವ್ಯಸನ: ಯಾರು ‘ನನ್ನ ಹೆಸರು ಶಾಶ್ವತವಾಗಿ ನೆನೆಯಲ್ಪಡುವಂಥ ಕೆಲಸ ಮಾಡುತ್ತೇನೆ’ ಎಂದುಕೊಳ್ಳುತ್ತಾರೋ ಅವರು ಮರೆಯಾಗಿ ಹೋಗುತ್ತಾರೆ ಅಥವಾ ವಿವಿಧ ರೀತಿಯ ತಪ್ಪು ಕಾರಣಗಳಿಗಾಗಿ ನೆನೆಯಲ್ಪಡುತ್ತಾರೆ. - ೩ ಮೇ ೨೦೧೪, ೦೪:೦೦
  • ಸ್ವಾತಂತ್ರ್ಯದ ಧ್ಯಾನ: ಸ್ವಾತಂತ್ರ್ಯವನ್ನು ಸದಾ ಧೇನಿಸುವ ನಾವು ಅದರ ಅರ್ಥವನ್ನು ಎಂದೂ ಹುಡುಕುವುದಿಲ್ಲ ಅಥವಾ ನಮಗೆ ಬೇಕಾಗಿರುವ ಸ್ವಾತಂತ್ರ್ಯ ಎಂತಹದ್ದು ಎಂಬುದರ ಪರಿಕಲ್ಪನೆಯೇ ನಮಗಿರುವುದಿಲ್ಲ. - ೫ ಮೇ ೨೦೧೪, ೦೪:೨೭
  • ಸಕಾರಕ್ಕೆ ನಕರಾತ್ಮಕ ಮಾತು ಉತ್ತಮ ಆರಂಭವಾದರೂ ಒಳ್ಳೆಯ ಅಂತ್ಯವಲ್ಲ. ನಕಾರಾತ್ಮಕ ಮಾತು ಬೀಜದಂತೆ, ಸಕಾರಾತ್ಮಕ ಮಾತು ಅದರಿಂದ ಹೂ ಬಿರಿದಂತೆ. - ೨ ಮೇ ೨೦೧೪, ೦೪:೫೭
  • ನಮ್ಮ ಅದೃಷ್ಟಕ್ಕೆ ನಾವೇ ಸ್ವಾಮಿ: ನಿಮ್ಮ ಅದೃಷ್ಟಕ್ಕೋ ದುರದೃಷ್ಟಕ್ಕೋ ನೀವೇ ಒಡೆಯರು. ಬಡವರಾದ ತಂದೆ ತಾಯಿಗಳಲ್ಲಿ ನೀವು ಹುಟ್ಟಿದ್ದರೆ, ಅದಕ್ಕೆ ನೀವೇ ಕಾರಣ; ನೀವೇ ಹಾಗೆ ಮಾಡಿಕೊಂಡಿದ್ದೀರಿ; ನಿಮ್ಮ ಅದೃಷ್ಟಕ್ಕೆ ನೀವೇ ಸ್ವಾಮಿ. ನೀವು ಅತ್ಯಂತ ಅಪ್ರಿಯವಾದ ಸನ್ನಿವೇಶದಲ್ಲಿ ಹುಟ್ಟಿದ್ದರೆ, ಅದಕ್ಕೂ ನೀವೇ ಕಾರಣ. ಜನ್ಮದ ಅದೃಷ್ಟಕ್ಕೂ ನೀವೇ ಒಡೆಯರು. - ೭ ಮೇ ೨೦೧೪, ೦೪:೦೫
  • ಸಂಕಟವನ್ನು ಶಾಂತಿಯನ್ನಾಗಿ ಪರಿವರ್ತಿಸಿ: ಯಾವುದೇ ವಸ್ತುವಿಗೂ ಅಂಟಿಕೊಳ್ಳುವುದೇ ನಮ್ಮೆಲ್ಲಾ ಸಂಕಟಗಳಿಗೆ ಮೂಲ. ನಾವು ಮಾಡುವ ಕೆಲಸಕ್ಕೆ ಲೌಕಿಕ ಲಾಭದ ನಿರೀಕ್ಷೆಯಿರಿಸಿಕೊಂಡಾಗಲೇ ಯಾವುದೇ ಕೆಲಸದಲ್ಲೂ ನಿರಾಶೆಯ ಅನುಭವವಾಗುತ್ತದೆ. - ೬ ಮೇ ೨೦೧೪, ೦೪೦೯
  • ನಾನು ಯಾರು?: ನಾನು ಯಾರು? ಎಂಬ ಆಧ್ಯಾತ್ಮಿಕ ಹುಡುಕಾಟಕ್ಕೂ, ಅದೇ ಪ್ರಶ್ನೆಗೆ ಲೌಕಿದ ಛಾಯೆ ಹಚ್ಚಿ ನಡೆಯುವ ಮಾನಸಿಕ ತುಮುಲಕ್ಕೂ ಬಹಳ ವ್ಯತ್ಯಾಸವಿದೆ. ಸ್ವಯಂಗೂ ಮತ್ತು ಅಹಂಗೂ ಇರುವ ವ್ಯತ್ಯಾಸದಷ ಗಹನವಾದದ್ದು ಇದು. - ೮ ಮೇ ೨೦೧೪, ೦೪:೦೦
  • ಸಮಾಜ ಮತ್ತು ವ್ಯಕ್ತಿ: ಮನುಷ್ಯ ಮತ್ತು ಸಮಾಜ ಇವೆರಡೂ ವಾಸ್ತವಗಳು. ವ್ಯಕ್ತಿನಿಷ್ಠವಾದವನ್ನು ಪ್ರತಿಪಾದಿಸುವ ತತ್ತ್ವಜ್ಞಾನಿಗಳು ಸಮಾಜವಿಲ್ಲದೆ ಮಾನವ ನಿರಮ್ಮಳವಾಗಿ ಬದುಕಬಲ್ಲ ಎಂದೇ ಪ್ರತಿಪಾದಿಸುತ್ತಾರೆ. ಅಂದರೆ ಮಾನವ ಸಮಾಜದ ಭಾಗವಾಗುವ ಮೊದಲೇ ಆತ ಒಬ್ಬ ವ್ಯಕ್ತಿಯಾಗಿದ್ದ, ಆ ಬಳಿಕವೇ ಆತ ಸಮಾಜಕ್ಕೆ ಸೇರಿದ್ದು. - ೯ ಮೇ ೨೦೧೪, ೦೪:೦೦
  • ಬಯಕೆಯನ್ನು ಜಯಿಸುವುದೊಳಿತು: ಅನೇಕ ಜನರು ಮಾಡುವ ಕಾರ್ಯಗಳ ಫಲವನ್ನು ಆ ಕಾರ ಆರಂಭಿಸುವ ಅಥವಾ ಕರ್ತವ್ಯ ನಿರ್ವಹಣೆಗಿಂತ ಮೊದಲೇ ನಿರೀಕ್ಷಿಸುತ್ತಾರೆ. - ೧೦ ಮೇ ೨೦೧೪, ೦೪:೦೨
  • ಆಧ್ಯಾತ್ಮಿಕ ಪ್ರಯೋಜನದಿಂದಾಚೆಗೆ...: ಬದುಕಿನ ಒತ್ತಡ ಎಷ್ಟು ಅಧಿಕವಿದೆ ಎಂದರೆ ಅದು ಮಾನಸಿಕವಾಗಿ ಮತ್ತು ದ ನಮ್ಮ ಮೇಲೆ ಪರಿಣಾಮ ಬೀರತೊಡಗುತ್ತದೆ. ನಮ್ಮಲ್ಲಿ ಬಹುತೇಕರು ಆತಂಕ, ಭಯ, ಖಿನ್ನತೆಗಳನ್ನು ಅನುಭವಿಸುತ್ತೇವೆ. - ೧೨ ಮೇ ೨೦೧೪, ೦೪:೨೮
  • ನಿಜವಾದ ಸ್ನೇಹಿತ ಯಾರು?: ಸಮಯಕ್ಕೊದಗಿದವನೇ ನಿಜವಾದ ಸ್ನೇಹಿತ ಎಂಬ ನಾಣ್ಣುಡಿಯಿದೆ. ಆ ಬಗ್ಗೆ ಗಂಭೀರ–ವಾಗಿ ಚಿಂತನೆ ನಡೆಸಿದರೆ ಈ ಮಾತಿನಲ್ಲಿರುವುದು ಸ್ನೇಹ ಪ್ರೀತಿಗಳಲ್ಲ ಬರಿ ದುರಾಶೆ ಎಂಬ ವಿಷಯ ಮನವರಿಕೆಯಾಗುತ್ತದೆ. - ೧೩ ಮೇ ೨೦೧೪, ೦೪:೪೨
  • ವಾರಾಣಸಿಯ ವಿಶೇಷ: ಸದ್ಯ ರಾಜಕೀಯ ಕಾರಣಗಳಿಗಾಗಿ ಹೆಚ್ಚು ಸುದ್ದಿಯಲ್ಲಿರುವ ವಾರಾಣಸಿ ನನ್ನನ್ನು ಕಾಡುತ್ತಿದೆ. ಪುರಾತನ, ಬಹುಸಂಸ್ಕೃತಿಯ ನಗರ ವಾರಾಣಸಿ, ಪ್ರತಿಯೊಬ್ಬರ ಮನ–ದಲ್ಲೂ ಒಂದೋ ಹೆಮ್ಮೆ ಅಥವಾ ಪೂರ್ವಗ್ರಹಗಳನ್ನು ಹುಟ್ಟಿಸುತ್ತದೆ. - ೨೩ ಮೇ ೨೦೧೪, ೦೪:೪೦
  • ವಿಜ್ಞಾನ ಮತ್ತು ಧರ್ಮ ಜಿಜ್ಞಾಸೆ: ಹೇಳಿಕೇಳಿ ಇದು ಆಧುನಿಕ ಯುಗ. ವಿಜ್ಞಾನ, ತಂತ್ರಜ್ಞಾನಗಳ ಮೆರೆದಾಟ. ಎಲ್ಲದಕ್ಕೂ ಪ್ರೂಫ್ ಕೇಳುವ ಜಾಯಮಾನ. - ೧೪ ಮೇ ೨೦೧೪, ೦೪:೦೩
  • ಕನಸಿನ ದರ್ಶನ: ಕನಸೆಂಬುದು ಮಾನಸಿಕ ಘಟನೆ, ಅದು ನಡೆಯುವುದು ಮನಸ್ಸಿನಲ್ಲೇ. ಅದಕ್ಕೆ ಕಾರಣ, ನಿಮ್ಮ ಭಾವನೆ ಮತ್ತು ಬಯಕೆಗಳನ್ನು ತಲೆ ಎತ್ತದಂತೆ ದಮನ ಮಾಡಿ ಒತ್ತಿಹಿಡಿಯುವುದರಿಂದ ಉಂಟಾದದ್ದು. - ೨೨ ಮೇ ೨೦೧೪, ೦೪:೨೬
  • ಮನಸ್ಸು ಮತ್ತು ಚಾಂಚಲ್ಯಮ ಚಂಚಲ. ಅ ಸ್ಥ ಸಾಧ ಇಲ್ಲ. ವಸ್ತುಶಃ ಅಸ್ಥಿರತೆ ಮತ್ತು ಚಾಂಚಲ್ಯದ ಮತ್ತೊಂದು ಹೆಸರೇ ಮನಸ್ಸು. ಮನಸ್ಸಿನಿಂದಾಗಿಯೇ ಸತ್ಯ, ಸಂಸಾರದಂತೆ ತೋರುತ್ತದೆ. - ೧೬ ಮೇ ೨೦೧೪, ೦೪:೦೯
  • ಅರಿಯುವ ಬಗೆ: ಅರಿಯುವುದು ರೂಪಾಂತರಕ್ಕೆ ಮೊದಲ ಹೆಜ್ಜೆ. ಅರಿಯುವುದು ಮತ್ತು ನಾವೇನು ಅರಿತಿದ್ದೇವೆಯೋ ಅದರಂತೆ ಕ್ರಿಯಾಶೀಲರಾಗದಿರುವುದು ಏನೂ ಅರಿಯದಿ–ರು–ವುದಕ್ಕೆ ಸಮಾನ. - ೨೦ ಮೇ ೨೦೧೪, ೦೪:೨೮
  • ಪಂಚೇಂದ್ರಿಯಗಳನ್ನು ಬಳಸಿ: ಜನರು ಸಾಮಾನ್ಯವಾಗಿ ತಮ್ಮ ಸ್ವಂತ ಕಿವಿಗಳಿಂದ ಕೇಳುವುದಿಲ್ಲ. ಬದಲಿಗೆ ಬೇರೆಯ–ವರ ಕಿವಿಗಳಿಂದ ಕೇಳುತ್ತಾರೆ. ಅವರು ತಮ್ಮ ಸ್ವಂತ ಕಣ್ಣುಗಳಿಂದ ನೋಡುವುದಿಲ್ಲ. - ೧೯ ಮೇ ೨೦೧೪, ೦೪:೧೯
  • ಶತ್ರುಗಳಿಗೆ ಋಣಿ: ಸಹಾನುಭೂತಿ, ವಿವೇಕ ಮತ್ತು ತಾಳ್ಮೆ ತುಂಬ ಒಳ್ಳೆಯ ಗುಣಗಳು ಎಂದು ಬರಿ ಚಿಂತನೆ ನಡೆಸುವುದರಿಂದ ಅವುಗಳನ್ನು ಮೈಗೂಡಿಸಿಕೊಳ್ಳುವುದು ಸಾಧ್ಯವಿಲ್ಲ. - ೧೫ ಮೇ ೨೦೧೪, ೦೪:೪೭
  • ಗಿಳಿಯ ಗೆಳೆಯ: ಎಣ್ಣೆಯನ್ನು ಮಾರುವ ಒಬ್ಬ ವರ್ತಕನಿದ್ದ. ಅವನು ತನ್ನ ಮನೆಯಲ್ಲಿ ಬಹಳ ಸುಂದರ–ವಾದೊಂದು ಗಿಳಿಯನ್ನು ಸಾಕಿದ್ದನು. ಒಂದು ದಿನ ಆ ವರ್ತಕ ತನ್ನ ಅಂಗಡಿಯನ್ನು ಬಿಟ್ಟು ಎಲ್ಲಿಗೋ ಹೊರಗೆ ಹೋದ. - ೨೧ ಮೇ ೨೦೧೪, ೦೪:೩೩
  • ಸದ್ಗುರುವನ್ನು ಹುಡುಕಿ: ಜನರ ಗುಂಪು ಕುರಿಮಂದೆಯಂತೆ. ಸದ್ಗುರುವು ನಿಮ್ಮನ್ನು ಆ ಗುಂಪಿನಿಂದ ಬೇರ್ಪಡಿಸುತ್ತಾನೆ. ಆತ ನಿಮ್ಮನ್ನು ತಿಳಿವಳಿಕೆಯ ಕಡೆಗೆ ಕರೆದೊಯ್ಯುತ್ತಾನೆ. - ೨೪ ಮೇ ೨೦೧೪, ೦೪:೦೭
  • ಶಾಶ್ವತತೆಯ ವ್ಯಸನ: ಚಿಕ ಮಕ್ಕಳು ಕಡಲ ತಡಿಯಲ್ಲಿ ಕಪ್ಪೆಗೂಡು ಕಟ್ಟಿ ನಲಿಯುತ್ತವೆ. ಎಷ್ಟು ಬಾರಿ ಸಾಗರದಲೆಗಳು ಬಂದು ಮರಳಿನ ಗೂಡು ಕೆಡವಿ ಸೆಳೆದೊಯ್ದರೂ ಅವಕ್ಕೆ ಬೇಸರವಿಲ್ಲ. ಅದೇ ಹಿಂದಿನ ಉತ್ಸಾಹದಲ್ಲಿ ಚಪ್ಪಾಳೆ ತಟ್ಟುತ್ತಾ ಪುನಃ ಗೂಡು ಕಟ್ಟುವ ಕೆಲಸದಲ್ಲಿ ಮಗ್ನವಾಗುತ್ತವೆ. - ೨೬ ಮೇ ೨೦೧೪, ೦೪:೨೯
  • ಹೆಚ್ಚಿನದನ್ನು ಪಡೆಯಲು ತುಡಿಯುವಿರಾ?: ಯಾವುದನ್ನು ಪಡೆಯಬೇಕೆಂದು ನೀವು ಅದರ ಹಿಂದೆ ಓಡುತ್ತೀರೋ ಅದು ನಿಮಗೆ ದಕ್ಕದೆ ಮರೀಚಿಕೆಯಂತೆ ನಿಮ್ಮನ್ನು ಕಾಡುತ್ತದೆ. ಎಲ್ಲವನ್ನೂ ಹೊಂದುವುದು ಸಾಧ್ಯವೇ ಇಲ್ಲ. ಹಾಗಿದ್ದಾಗ ಅತೃಪ್ತಿ ನಿಮ್ಮ ಜೀವ ಅವಿಭಾಜ್ಯ ಅಂಗವಾಗಿಬಿಡುತ್ತದೆ. - ೨೭ ಮೇ ೨೦೧೪, ೦೪:೦೦
  • ಮಾತು-ಮನಸ್ಸು: ನಮ್ಮ ಎಲ್ಲ ಸಮಸ್ಯೆಗಳಿಗೆ, ಸಂಕಟಗಳಿಗೆ ನಿಜವಾದ ಪರಿಹಾರ ಮನಸ್ಸಿನ ಸಂಪೂರ್ಣ ರೂಪಾಂತರ. ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳನ್ನು ನೀಗಿಕೊಳ್ಳುವುದಕ್ಕೆ ಮನಸ್ಸಿನ ಬೇರೆ ಬಗೆಯ ಅಗತ್ಯವಿದ್ದೇ ಇದೆ. - ೨೮ ಮೇ ೨೦೧೪, ೦೪:೦೦
  • ಧ್ಯಾನ ಮತ್ತು ಕೆಲಸ: ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ, ಅದನ್ನು ಧ್ಯಾನ ಮಾಡುವ ಮೂಲಕ ಪ್ರಾರಂಭಿಸಬೇಕು. ಕೆಲಸ ಮುಗಿದ ನಂತರವೂ ಧ್ಯಾನ ಮಾಡಿ, ಆ ಮೂಲಕ ಆ್ಯಸ್ಟ್ರಲ್ ಮಾಸ್ಟರ್‌ಗಳಿಗೆ ಕೃತಜ್ಞತೆ ಸಲ್ಲಿಸಬೇಕು. ಯಾವುದೇ ಕೆಲಸ ಮಾಡಲು ಶಕ್ತಿ ಅವಶ್ಯಕ. - ೨೯ ಮೇ ೨೦೧೪, ೦೪:೦೦
  • ಅಹಿಂಸೆಯ ಶಕ್ತಿ: ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು. ಪ್ರಾಣ ತೆರಲು ಸಿದ್ಧವಾಗುವುದಕ್ಕೆ ಹಲವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿದ್ಧನಿರಲಿಕ್ಕೆ ಯಾವ ಕಾರಣವೂ ಇಲ್ಲ. - ೩೦ ಮೇ ೨೦೧೪, ೦೪:
  • ಬದುಕಿನ ಅರ್ಥ ಹುಡುಕುತ್ತಾ: ಬದುಕಿಗೆ ನಿಜಕ್ಕೂ ಒಂದು ಅರ್ಥವಿದೆಯಾ, ನಾವು ಆಚರಿಸುವ ಧರ್ಮ, ಈ ಯುದ್ಧ, ಸಂಪ್ರದಾಯಗಳು, ಹಿಂಸೆ, ಭಿನ್ನ ಭಿನ್ನವಾಗಿ ಪ್ರತಿರೂಪ ಪಡೆಯುವ ಕ್ರೌರ್ಯ, ನಮ್ಮ ಐಡಿಯಾಲಜಿಗಳು, ರಾಷ್ಟ್ರೀಯತೆ- ಏನು ಇದೆಲ್ಲಾ? ನಿಜಕ್ಕೂ ಇದೇ ನಮ್ಮ ಜೀವನವಾ. - ೩೧ ಮೇ ೨೦೧೪, ೦೪:೦೦
  • ನಿರ್ಲಿಪ್ತತೆ- ಯಶಸ್ಸಿನ ದಾರಿ: ಪ್ರಾಪಂಚಿಕ ಬಯಕೆಗಳಿಂದ ವಿಮುಖರಾಗುವಂತೆ ಕೇಳಿಕೊಂಡಾಗ ಹಿಂಜರಿಯುವವರೇ ಹೆಚ್ಚು ಮಂದಿ. ನಿರ್ಲಿಪ್ತರಾಗುವುದು ಎಂದರೆ ಕಾವಿ ತೊಟ್ಟು ಮನೆಬಿಟ್ಟು ಹೊರಡುವುದು, ಸಂಸಾರ ತ್ಯಜಿಸಿ ಒಂದೆಡೆಯಿಂದ ಮತ್ತೊಂದೆಡೆ ಅಲೆಯುತ್ತಾ ಇರುವುದು, ಹಿಮಾಲಯದಲ್ಲೋ ಇನ್ನೆಲ್ಲೋ ಏಕಾಂತದಲ್ಲಿ ಕೂರುವುದು ಎಂದೆಲ್ಲ ತಮ್ಮಷ್ಟಕ್ಕೆ ತಾವೇ ಕಲ್ಪಿಸಿಕೊಳ್ಳತೊಡಗುತ್ತಾರೆ. - ೨ ಜೂನ್ ೨೦೧೪, ೦೪:೧೭
  • ಪ್ರತಿಭೆಯ ಹಿಂದಿದೆ ಪರಿಶ್ರಮ: ಜಗತ್ತಿನ ಇತಿಹಾಸವನ್ನು ಒಮ್ಮೆ ನೋಡಿ. ಏನಾದರೂ ಮಹತ್ತನ್ನು ಸಾಧಿಸಿದವರೆಲ್ಲರ ಹಿಂದೆಯೂ ಅಪಾರ ಶ್ರಮವಿದೆ. ತಮ್ಮ ಕೆಲಸದಲ್ಲೇ ತಲ್ಲೀನರಾಗುತ್ತಿದ್ದರು. - ೩ ಜೂನ್ ೨೦೧೪, ೦೪:೧೪
  • ಭ್ರಮೆ, ವಾಸ್ತವಗಳ ನಡುವೆ: ನೀವು ಒಂದು ಕಾಮನ ಬಿಲ್ಲನ್ನು ದೂರದಲ್ಲಿ ನೋಡುತ್ತೀರಿ. ಆ ಕಾಮನ ಬಿಲ್ಲು ನಿಜವೆ? ಅದು ನಿಜವಲ್ಲ; ಏಕೆಂದರೆ, ಅದು ಕಾಣಿಸಿದ ಸ್ಥಳಕ್ಕೆ ಹೋದರೆ, ಅಲ್ಲಿ ಅದು ಇರುವುದೇ ಇಲ್ಲ. - ೪ ಜೂನ್ ೨೦೧೪, ೦೪:೨೪
  • ಸತ್ಯದ ಹೊಳಪು: ಸತ್ಯದ ಕಿಂಚಿತ್ತು ಹೊಳಪು ನಿಮ್ಮ ಬಳಿಗೆ ಬಂದರೂ ನೀವು ಕಳವಳಗೊಳ್ಳುವಿರಿ. ನಿಮಗೆ ಇದೇನು ಎಂಬುದು ಅರ್ಥವಾಗದು. ಹಾಗಾದಾಗ ಅಪರಿಮಿತ ಅಶಾಂತಿ ನಿಮ್ಮನ್ನು ಆವರಿಸುತ್ತದೆ. - ೫ ಜೂನ್ ೨೦೧೪, ೦೪:೪೬
  • ಸಂತೋಷದಲ್ಲೂ ಅಸಂತೋಷದ ಎಳೆ: ಪರಮಸುಖ ಮತ್ತು ಅತ್ಯಂತ ಸಂತೋಷದ ಸಮಯದಲ್ಲೂ ಸಣ್ಣದೊಂದು ಅಸಂತೋ–ಷದ ಎಳೆ ಮನದಲ್ಲಿ ಹಾಯ್ದು ಹೋಗುತ್ತದೆ. - ೬ ಜೂನ್ ೨೦೧೪, ೦೪:೪೯
  • ಸಂಸಾರ, ಸನ್ಯಾಸ ಮತ್ತು ಆತ್ಮಜ್ಞಾನ: ‘‘ಆತ್ಮದ ಅಜ್ಞಾನದಿಂದ ಈ ಜಗತ್ತು ಕಾಣಿಸುತ್ತದೆ,ಆತ್ಮಜ್ಞಾನದಿಂದ ಜಗತ್ತು ಕಣ್ಮರೆಯಾಗಿಬಿಡುತ್ತದೆ,’’ - ೭ ಜೂನ್ ೨೦೧೪, ೦೪:೧೫
  • ತಾಯ್ತಂದೆಯರನ್ನು ಕ್ಷಮಿಸಿದ್ದೀರಾ?: ತಾಯ್ತಂದೆಯರು ನಿಮ್ಮನ್ನು ಬೆಳೆಸಿದ್ದರ ಬಗ್ಗೆ ನಿಮಗೇನನ್ನಿಸುತ್ತದೆ. ಅವರು ನಿಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ನೋವು, ಕೋಪಗಳಿವೆಯೇ? ತಾಯ್ತಂದೆಯರೊಂದಿಗೆ ಅತ್ಯುತ್ತಮವಾದ ಒಡನಾಟವನ್ನು ನೀವು ಹೊಂದಿಲ್ಲ ಎಂಬ ಭಾವನೆಯನ್ನು ತೊರೆದುಬಿಡಿ. - ೯ ಜೂನ್ ೨೦೧೪, ೦೪:೫೪
  • ಸಾರ್ವತ್ರಿಕ ಅನುಭವದ ಪರಿಗಣನೆ: ಲೋಕದಲ್ಲಿ ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಬಗೆಯ ಅನುಭವವು ಇರುತ್ತದೆ. ಜಪ, ಧ್ಯಾನ, ಯೋಗ- ಸಾಧನಾದಿಗಳನ್ನು ಮಾಡಿದವರಿಗೆ ಅನೇಕ ವಿಲಕ್ಷಣವಾದ ಅನು ದಕ್ಕುತ್ತವೆ. - ೧೦ ಜೂನ್ ೨೦೧೪, ೦೪:೦೦
  • ಇಂದ್ರಿಯಗಳ ಅನುಭವ: ಮಗುವಿಗೆ ಕಣ್ಣು, ಕಿವಿ, ಮೂಗು ಮೊದಲಾದ ಎಲ್ಲಾ ಇದ್ರಿಯಗಳೂ ಇವೆ. ಆದರೂ ಅದು ವಸ್ತುಗಳನ್ನು ನೋಡುವುದಿಲ್ಲ. ಇದು ಗೋಡೆ. ಇದು ಪುಸ್ತಕ ಎಂದು ಮೊದಲಾಗಿ ತಾಯಿಯು ಪುನಃ ಪುನಃ ಹೇಳಿಕೊಟ್ಟು ಅದನ್ನು ಸಮ್ಮೋಹನಗೊಳಿಸಿದಾಗಲೇ ಆ ಮಗುವಿಗೆ ಆಯಾ ವಸ್ತುಗಳ ಜ್ಞಾನವಾಗುವುದು. - ೧೧ ಜೂನ್ ೨೦೧೪, ೦೪:೦೦
  • ಕಣ್ಗಾವಲಿನ ಬದುಕು: ಯಾರೋ ನಮ್ಮ ಪ್ರತಿ ನಡೆಯನ್ನೂ ನೋಡುತ್ತಿದ್ದಾರೆ ಎಂಬದು ನಾವು ನಡೆದುಕೊಳ್ಳುವ ಮೇಲೆ ಪ್ರಭಾವ ಬೀರುವುದೇ? ಅದು ನಮ್ಮ ನಡವಳಿಕೆಯಲ್ಲಿ ಕೆಲಕಾಲದವರೆಗಾದರೂ ಸಕಾರಾತ್ಮಕ ಬದಲಾವಣೆ ತರುತ್ತದೆಯೇ. ಹೌದು ಎನ್ನುತ್ತವೆ ಕೆಲವು ಸಂಶೋಧನೆಗಳು. - ೧೨ ಜೂನ್ ೨೦೧೪, ೦೪:೦೦
  • ಕರ್ಮವನ್ನು ನಿರ್ವಹಿಸುವ ಕಲೆ: ಪ್ರತಿಯೊಬ್ಬರೂ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುತ್ತಾರೆ. ಆದರೆ ತನ್ನ ಕರ್ತವ್ಯ ಅಥವಾ ಕರ್ಮದ ಬಗ್ಗೆ ಅರಿವಿರುವುದು ಕೆಲವರಿಗೆ ಮಾತ್ರ. - ೧೩ ಜೂನ್ ೨೦೧೪, ೦೪:೦೦
  • ನಿಮ್ಮೊಳಗೇ ಇದೆ ಮದ್ದು: ತೀವ್ರ ಆತಂಕ, ಗೀಳು, ನಿರಂತರ ಖಿನ್ನತೆ, ವ್ಯಕ್ತಿತ್ವದಲ್ಲಿನ ಬದಲಾವಣೆಗಳು ಹೇಳತೀರದ ಸಂಕಟ ಮತ್ತು ನೋವುಗಳನ್ನು ತಂದಿಡುತ್ತವೆ. ಕಳೆದುಕೊಂಡಿದ್ದರ ಬಗ್ಗೆ ನೋವು ಮತ್ತು ಹೊಸ ಬದುಕಿಗೆ ಹೊಂದಿಕೊಳ್ಳಲಾಗದೆ ಮತ್ತೆ ಹಳೆಯ ಬದುಕಿಗೆ ಮರಳುವುದಕ್ಕೆ ತುಡಿಯುತ್ತಿರುತ್ತದೆ. - ೧೬ ಜೂನ್ ೨೦೧೪, ೦೪:೪೬
  • ‘ಅಹಂ’ ತೊರೆಯುವಿಕೆ: ಧರ್ಮ ಅನುಭೂತಿ, ವಿಚಾರ ಅಲ್ಲ. ವಿಚಾರ ಧರ್ಮದ ಛಾಯೆ ಸಹಾ ಆಗಲಾಗುವುದಿಲ್ಲ. ಯಾರು ವಿಚಾರಗಳಲ್ಲೇ ಸಂಲಗ್ನರಾಗಿರುತ್ತಾರೋ, ಅವರು ಧರ್ಮದಿಂದ ಸದಾ ದೂರವೇ ಆಗಿರುತ್ತಾರೆ. - ೧೪ ಜೂನ್ ೨೦೧೪, ೦೪:೦೦
  • ಹಿತ-ಅಹಿತದ ಪ್ರಶ್ನೆಗಳು: ಕೆಲವು ಸಂದರ್ಭಗಳು ಒಬ್ಬನಿಗೆ ಹಿತವಾಗಿರಬಹುದು, ಇನ್ನೊಬ್ಬನಿಗೆ ಅಹಿತವಾಗ–ಬಹುದು. - ೧೭ ಜೂನ್ ೨೦೧೪, ೦೪:೦೧
  • ವಿದ್ಯೆ-ಅವಿದ್ಯೆ: ವಿದ್ ಎಂದರೆ ಜ್ಞಾನ. ಇದು ವಸ್ತು ಹೇಗೆ ಇದೆಯೋ ಹಾಗೆ ನೋಡುವುದು. ನೋಡುವಾಗ ಯಾವ ಬಣ್ಣದ ಕನ್ನಡಕವನ್ನು ಹಾಕಿಕೊಳ್ಳುವುದಲ್ಲ. ಅವಿದ್ಯೆ ಎಂದರೆ ಅಜ್ಞಾನ. - ೧೮ ಜೂನ್ ೨೦೧೪, ೦೪:೨೯
  • ಅಂತರಾತ್ಮದ ದನಿ ಕೇಳ: ಅರಿವು ಮತ್ತು ಅಂತಃಸಾಕ್ಷಿಗಳ ನಡುವಿನ ಅಂತರವೇನು? ಇವೆರಡು ಬದುಕನ್ನು ಬೆಳಗುವ ಎರಡು ಜ್ಯೋತಿಗಳು. ಯಾವುದೇ ಮನುಷ್ಯ ಅರಿವು ಅಥವಾ ಜಾಗೃತಾವಸ್ಥೆಯಿಲ್ಲದೆ ಜೀವಿಸಲಾರ. ಹಾಗೆಯೇ ಅಂತಃಸಾಕ್ಷಿಯಿಲ್ಲದೆಯೂ ಬದುಕಲಾರ. - ೧೯ ಜೂನ್ ೨೦೧೪, ೦೪:೧೩
  • ಗೆಲುವಿನ ಗುಟ್ಟು: ನಾವೊಂದು ನೌಕರಿಗೆ ಅರ್ಜಿ ಹಾಕಿದರೆ, ಅದರಲ್ಲಿ ನಮ್ಮಲ್ಲಿರುವ ಎಲ್ಲಾ ಒಳ್ಳೆಯ ಗುಣಗಳನ್ನೂ ಹೆಕ್ಕಿ ತೆಗೆದು ಅದರಲ್ಲಿ ಅದು ಎದ್ದು ಕಾಣುವಂತೆ ಬರೆಯುತ್ತೇವೆ. ಉದ್ಯೋಗ–ದಾತರು ಇಂಥ ಅರ್ಜಿಗಳನ್ನು ನೋಡಿದಾಗ ಜಗತ್ತಿನಲ್ಲಿ ಬದುಕಿರುವ ಅತ್ಯುತ್ತಮ ಮನುಷ್ಯ ಈತನೇ ಏನೋ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದುಕೊಳ್ಳುತ್ತಾರೆ. - ೨೧ ಜೂನ್ ೨೦೧೪, ೦೪:೪೩
  • ಅಧ್ಯಾತ್ಮವು ಪವಾಡವಲ್ಲ: ಅಧ್ಯಾತ್ಮದ ಉನ್ನತಿಯೊಂದಿಗೆ ಆತ್ಮ ಸಾಕ್ಷಾತ್ಕಾರ ಬೆನ್ನಟ್ಟಲು ಗಂಭೀರ ಗುರಿ ಅಗತ್ಯ. ಆದಾಗ್ಯೂ, ಆಧ್ಯಾತ್ಮ ನಮ್ಮೆಲ್ಲರ ಕಷ್ಟ-ಕಾರ್ಪಣ್ಯಗಳಿಗೆ ದಿವ್ಯ ಔಷಧವಲ್ಲ. - ೨೪ ಜೂನ್ ೨೦೧೪, ೦೪:೦೦
  • ನಿಷ್ಠೆ ಸಾಧನೆ ಅಲ್ಲ, ಶ್ರದ್ಧೆ: ‘‘ನಿರಪೇಕ್ಷ, ನಿರ್ವಿಕಾರ, ನಿರ್ಭರ, ಶಾಂತ, ಅಗಾಧ ಬುದ್ಧಿಶೀಲ, ನಿಶ್ಚಲ, ಅಕ್ಷುಬ್ಧನು ನೀನು.ಹಾಗಾಗಿ ಚೈತನ್ಯ ಮಾತ್ರದಲ್ಲಿ ನಿಷ್ಠಾವಂತನು.’’ - ೨೦ ಜೂನ್ ೨೦೧೪, ೦೪:೫೬
  • ತರ್ಕದ ಮಿತಿಗಳು: ಪ್ರಪಂಚವು ಆರಂಭವಾದುದು ಯಾವಾಗ? ಈ ಪ್ರಶ್ನೆಯಲ್ಲಿ ನೀವು ಪ್ರಪಂಚವನ್ನು ಪ್ರಪಂಚದಿಂದಲೇ ಹರಿದು ಬೇರ್ಪಡಿಸುವುದಕ್ಕೆ ಬಯಸುತ್ತೀರಿ. - ೨೩ ಜೂನ್ ೨೦೧೪, ೦೪:೩೭
  • ವಿಜ್ಞಾನ ಮತ್ತು ಆಧ್ಯಾತ್ಮ: ವಿಜ್ಞಾನದಲ್ಲಿ ಖಂಡಿತವಾಗಿಯೂ ಅತ್ಯಂತ ಪವಿತ್ರವಾದದ್ದು ಏನೋ ಇದೆ. ಅದನ್ನು ಅತ್ಯಂತ ಸೂಕ್ತವಾದ ದೃಷ್ಟಿಕೋನದಿಂದ ಸರಿಯಾದ ಬೆಳಕಿನಲ್ಲಿ, ನಿರ್ದಿಷ್ಟ ಕೋನದಲ್ಲಿ ಹಿಡಿದು ನೋಡಿದಾಗ ಫಕ್ಕನೆ ಅದರೊಳಗಿನ ಆಧ್ಯಾತ್ಮದ ದರ್ಶನವಾಗುತ್ತದೆ. - ೨೭ ಜೂನ್ ೨೦೧೪, ೦೪:೦೦
  • ಗುರಿ ಸಾಧನೆಗೆ ಹಲವು ಹಾದಿಗಳು: ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಗಳು ಪರಸ್ಪರ ವಿರುದ್ಧವಾಗಿರಬೇಕಿಲ್ಲ. ವಿಧಾನ ಬೇರೆಯಾಗಿದ್ದರೂ ಪರಸ್ಪರ ಪೂರಕವೇ. ಈ ನಿಟ್ಟಿನಲ್ಲಿ ನೀವು ನಡೆಯುವ ಹಾದಿ ಪ್ರೀತಿ ಮತ್ತು ಸಹಾನುಭೂತಿ, ವಿನಯ ಮತ್ತು ಶ್ರದ್ಧೆಯಿಂದ ತುಂಬಿರಬೇಕಷ್ಟೆ. - ೨೬ ಜೂನ್ ೨೦೧೪, ೦೪:೦೦
  • ಆಂತರ್ಯ ಖಾಲಿ ಮಾಡುವುದು ಹೇಗೆ?: ನಾವು ಹಲವು ವೇಳೆ ವಿವೇಚನೆಯಿಂದ ಬದುಕುವುದರಲ್ಲಿ ಸೂಕ್ಷ್ಮತೆ ಕಳೆದುಕೊಳ್ಳುತ್ತೇವೆ. ಯಾವುದು ವಿವೇಚನಾಯುಕ್ತವೋ ಅದನ್ನು ಬಿಟ್ಟು ನಮಗೆ ಯಾವುದು ಬೇಕೋ ಅದರಲ್ಲೇ ಮುಳುಗುತ್ತೇವೆ. - ೨೫ ಜೂನ್ ೨೦೧೪, ೦೪:೦೦
  • ಎಲ್ಲವೂ ಅವಿನಾಶಿ: ಮನುಷ್ಯ ಎಂದರೆ ಬರೀ ದೇಹವಲ್ಲ, ದೇಹದ ಒಳಗೆ ವಾಸಿಸುವ ಜೀವ. ದೇಹ ಎಂಬುದು ಒಂದು ಗೂಡಿನಂತೆ. ಜೀವ ಬಂದು ಕೆಲವು ಕಾಲ ಅದರಲ್ಲಿ ಇರುವುದು ಮತ್ತು ಹೋಗುವುದು. ಹ ದೇಹ ಬಿಟ್ಟು ಹೋದರೆ ಜೀವ ನಾಶವಾಗಲಿಲ್ಲ. ಅದು ದೇಹದಿಂದ ಬೇರೆ ಆಯಿತು ಅಷ್ಟೆ. - ೩೦ ಜೂನ್ ೨೦೧೪, ೦೪:೨೧
  • ಆತ್ಮ ಸಂಯಮವೇ ಉಪವಾಸ: ಉಪವಾಸ ವ್ರತ ಕೇವಲ ಧಾರ್ಮಿಕ ಆಚರಣೆಯಲ್ಲ. ಪ್ರಾಕೃತಿಕ ಕ್ರಿಯೆ ಕೂಡ ಹೌದು. ಉದಾಹರಣೆಗೆ ನೋಡುವುದಾದರೆ, ನೀವು ಡ್ರೈವಿಂಗ್ ಮಾ ಟ್ರಾಫಿಕ್ ಜಾಮ್ ಎದುರಾದರೆ, ಕಾರಿನ ಗೇರ್ ಬದಲಾಯಿಸುವುದು ಅನಿವಾರ್ಯ. - ೧ ಜುಲೈ ೨೦೧೪, ೦೪:೪೯
  • ಪೂರ್ಣತ್ವದ ಮೂರು ದಾರಿಗಳು: ನಾವೆಲ್ಲರೂ ಆನಂದ, ಸಂತೃಪ್ತಿ ಹಾಗೂ ಪೂರ್ಣತ್ವಕ್ಕಾಗಿ ಹಂಬಲಿಸುವವರು. ಇದನ್ನೇ ಕೆಲವರು ಸಂಪತ್ತಿನಲ್ಲಿ ಹುಡುಕಿದರೆ, ಕೆಲವರು ಆರೋಗ್ಯದಲ್ಲಿ ಆನಂದ ಕಾಣುತ್ತಾರೆ. - ೨ ಜುಲೈ ೨೦೧೪, ೦೯:೩೩
  • ಸಂಗೀತದಲ್ಲಿ ಸಮಾಧಿ: ಮಗುವೊಂದು ನಿಧಾನವ ಒಬ್ಬೊಬ್ಬರ ಮುಖವನ್ನೇ ಗುರುತಿಸಲು ಕಲಿಯುತ್ತದೆ. ಸುತ್ತ ನೆರೆದವರಲ್ಲಿ ಅಪ್ಪ, ಅಮ್ಮ, ಅಕ್ಕ, ತಂಗಿ ತಮ್ಮ, ಅಜ್ಜ, ಅಜ್ಜಿ ದಿನ ಬೆಳೆದಂತೆ ಬಳಕೆ ಹೆಚ್ಚಾದಂತೆ ಒಬ್ಬೊಬ್ಬರನ್ನೇ ಬೇರೆಬೇರೆಯಾಗಿ ಗುರುತಿಸುವುದನ್ನು ಕ. - ೩ ಜುಲೈ ೨೦೧೪, ೦೪:೩೮
  • ಕಂಬನಿ ಮತ್ತು ಕೋಮಲ ಹೃದಯ: ಕಣ್ಣೀರು ಕೋಮಲ ಹೃದಯದ ಸಂಕೇತ. ಅದು ಒಬ್ಬ ವ್ಯಕ್ತಿಯ ದೌರ್ಬಲ್ಯವನ್ನು ಎತ್ತಿ ತೋರುವುದಲ್ಲ. ಕಣ್ಣೀರು ಎಂದರೆ ಹೂಗಳಂತೆ. - ೪ ಜುಲೈ ೨೦೧೪, ೦೮:೩೬
  • ಬದುಕು ಕಟ್ಟಿಕೊಳ್ಳುವ ಕಲೆ: ಹಿಂದು ಎಂಬುದು ಎಲ್ಲರೂ ತಿಳಿದಂತೆ ಧರ್ಮವಲ್ಲ, ಅದು ಒಂದು ಭೂಪ್ರದೇಶದ ಹೆಸರು ಮಾತ್ರ. ಸಿಂಧೂ ನದಿಯ ತಟದಲ್ಲಿ ವಾಸಿಸುತ್ತಿದ್ದವರೆಲ್ಲಾ ಸಿಂಧೂಗಳು ಎಂದು ಹೆಸರಾದರೂ ಬರಬರುತ್ತಾ ಅದೇ ಜನರ ಬಾಯಲ್ಲಿ ಹಿಂದೂ ಎಂದಾಯಿತು ಅಷ್ಟೆ. - ೫ ಜುಲೈ ೨೦೧೪, ೦೪:೦೬
  • ಕಂಡಿದ್ದು ಮಾತ್ರ ಸತ್ಯವೇ?: ನೋಡಿದರೆ ಮಾತ್ರ ನಾವು ನಂಬುತ್ತೇವೆ. ಇಲ್ಲದಿದ್ದರೆ ಇಲ್ಲ ಎನ್ನುವರು ಚಾರ್ವಾಕರು. ಅವರು ದೇಹ ಮತ್ತು ಜೀವ ಎಂಬ ಎರಡನ್ನೂ ಬೇರೆ ಬೇರೆ ಮಾಡುವುದಕ್ಕೆ ಹೋಗುವುದಿಲ್ಲ. - ೭ ಜುಲೈ ೨೦೧೪, ೦೪:೧೫
  • ಸೌಂದರ್ಯ ಹಾಗೆಂದರೇನು?: ಸೌಂದರ್ಯ ಎಂದರೆ, ನಿಮ್ಮ ಬುದ್ಧಿ ಮತ್ತು ಮನಸ್ಸುಗಳು ಒಂದಾಗಿ ಆನಂದಿಸುವ ಒಂದು ಅದ್ಭುತ ಅನುಭವ. ಜಗತ್ತನ್ನೇ ಮರೆಸುವ ಅನಿರ್ವಚನೀಯ ಕ್ಷಣ. ಸೌಂದರ್ಯಾರಾಧನೆ ಇಲ್ಲದಿದ್ದರೆ ಬದುಕು ಬರಡು. - ೮ ಜುಲೈ ೨೦೧೪, ೦೪:೦೦
  • ಪಂಚತತ್ತ್ವಗಳ ಮಹತ್ವ: ಈ ವಿಶ್ವದಲ್ಲಿ ಎಲ್ಲವೂ ಪಂಚತತ್ತ್ವಗಳ ಮೇಲೆಯೇ ರೂಪಿತ. ಅವೆಂದರೆ, ಭೂಮಿ, ಗಾಳಿ, ಬೆಂಕಿ ನೀರು ಮತ್ತು ಆಕಾಶ. ಈ ಪಂಚತತ್ತ್ವಗಳೇ ಸನಾತನ. ಮನುಷ್ಯರಾದ ನಾವು ಕೂಡ ಈ ಪಂಚತತ್ತ್ವಗಳಿಂದಲೇ ರೂಪುಗೊಂಡಿದ್ದೇವೆ. - ೯ ಜುಲೈ ೨೦೧೪, ೦೪:೦೦
  • ತಂತ್ರಶಾಸ್ತ್ರವೆಂಬುದು ವಿಜ್ಞಾನ: ಮಾನವನನ್ನು ದೈನಂದಿನ ಜಂಜಡಗಳ ಗೋಜಲಿನಿಂದ ಬಿಡುಗಡೆ ಮಾಡುವುದೇ ತಂತ್ರ. ತಂತ್ರ ಒಂದು ವಿಜ್ಞಾನ. ಇಲ್ಲಿ ಮಾಡಿ ಕಲಿ ಸೂತ್ರವನ್ನೇ ಬಳಸಲಾಗುತ್ತದೆ. ದೊಡ್ಡದೊಡ್ಡ ಪುಸ್ತಕಗಳನ್ನು ಅರೆದು ಕುಡಿವ ಗ್ರಾಂಥಿಕ ಜ್ಞಾನಕ ಇಲ್ಲಿ ಕೆಲಸವಿಲ್ಲ. - ೧೦ ಜುಲೈ ೨೦೧೪, ೦೪:೦೦
  • ಸಂಯಮದ ಸಮಯ: ಒಂದು ಸಣ್ಣ ಘಟನೆಯೊಂದಿಗೆ ನನ್ನ ಇಂದಿನ ಮಾತನ್ನು ಆರಂಭಿಸುತ್ತೇನೆ. ಒಬ್ಬ ಫಕೀರ ಸನ್ಯಾಸಿ, ಪ್ರಭುವಿನ ಹುಡುಕಾಟದಲ್ಲಿ ಅಲೆಯುತ್ತಿದ್ದ. ಆತ ಯಾರಾದರೂ ಮಾರ್ಗದರ್ಶಿಯನ್ನು ಹುಡುಕುವ ಕಾರ‌್ಯದಲ್ಲಿ ನಿರತನಾಗಿದ್ದ. - ೧೪ ಜುಲೈ ೨೦೧೪, ೦೪:೧೨
  • ವಾನಪ್ರಸ್ಥವೆಂದರೆ ತ್ಯಾಗವಲ್ಲ: ಯೋಗಿಗಳು, ಗುರುಗಳಿಗೆ ವಾನಪ್ರಸ್ಥಾಶ್ರಮದ ಬಗ್ಗೆ ನಾನೊಂದು ಸೂಕ್ಷ್ಮ ನೋಟವೊಂದನ್ನು ನೀಡುತ್ತೇನೆ. ಈ ಹಂತವನ್ನು ಸಾಮಾನ್ಯವಾಗಿ ಜನ ಐಹಿತ ಭೋಗ-ಭಾಗ್ಯಗಳ ತ್ಯಾಗ ಎಂದು ಭಾವಿಸುತ್ತಾರೆ. - ೧೧ ಜುಲೈ ೨೦೧೪, ೦೪:೦೦
  • ನಮ್ಮೊಳಗಿನ ಹುಡುಕಾಟ: ಈ ವಿವೇಕದ ಅರ್ಥವೇ ಪರಿಪೂರ್ಣವಾಗಿ ಜಾಗರೂಕವಾಗಿರುವುದು. ಶರೀರದ ಸಮಸ್ತ ಕ್ರಿಯೆಯ ಕುರಿತಾಗಿ, ಮನಸ್ಸಿನ ಸಮಸ್ತ ಪ್ರಕ್ರಿಯೆಯ ಕುರಿತಾಗಿ ಎಚ್ಚರದಿಂದ ಇರುವುದು ಮನಸ್ಸಿನ ಕುರಿತು ಜಾಗರೂಕವಾಗಿರುವುದು, ಸಾಕ್ಷಿಯಾಗಿರುವುದು. - ೧೨ ಜುಲೈ ೨೦೧೪, ೦೪:೦೦
  • ಗುರು-ಶಿಷ್ಯ ಬಾಂಧವ್ಯ: ಜ್ಞಾನೋದಯವಾಗುವುದು ಗುರು ಮತ್ತು ಶಿಷ್ಯ ಇಬ್ಬರೂ ಸಿದ್ಧರಾದಾಗ. ಇದು ಹೇಗೆಂದರೆ, ಬತ್ತಿ ಮತ್ತು ಬೆಂಕಿ ಎರಡೂ ಸಿದ್ಧವಾದಾಗ ಹೇಗೆ ಬೆಂಕಿ ಜ್ವಲಿಸುತ್ತದೋ ಹಾಗೆ. - ೧೫ ಜುಲೈ ೨೦೧೪, ೦೪:೦೪
  • ಸಂಬಂಧದ ಕೆಲಸಗಳು: ಪ್ರತಿ ಸಂಬಂಧದಲ್ಲೂ ನೋವು ಇದ್ದೇ ಇದೆ ಎಂಬುದನ್ನು ದಿನವೂ ನಾವು ಎದುರಿ–ಸುವ ಹಲವು ಘಟನೆಗಳಿಂದ ನಮ್ಮ ಅನುಭವಕ್ಕೆ ಬಂದಿದೆ. ಯಾವುದೇ ಸಂಬಂಧ–ದಲ್ಲಿ ಸಂಘರ್ಷ, ಉದ್ವಿಗ್ನತೆ, ತುಮುಲಗಳು ಇಲ್ಲದಿದ್ದರೆ ಅದು ಸಂಬಂಧವಾಗಿ ಉಳಿದಿರುವುದಿಲ್ಲ. - ೧೭ ಜುಲೈ ೨೦೧೪, ೦೪:೫೪
  • ದೇವರಿದ್ದಾನೆ ನಂಬಿ!: ದೇವರು ನಮ್ಮಂತೆಯೇ ಎಂದು ನಾವು ಭಾವಿಸುತ್ತೇವೆ. ನಮ್ಮ ಹೊಗಳಿಕೆಯಿಂದ ಅವನು ಸಂತಪ್ತನಾಗುತ್ತಾನೆ; ತೆಗಳಿದರೆ ಕೋಪಗೊಳ್ಳುತ್ತಾನೆ ಎಂದೂ ನಾವು ನಂಬುತ್ತೇವೆ. - ೧೬ ಜುಲೈ ೨೦೧೪, ೦೪:೫೯
  • ಇಂಗ್ಲಿಷ್ ಕವಿಗಳು ಮತ್ತು ಅದ್ವೈತ ವೇದಾಂತ: ಸಾಹಿತ್ಯವೆಂಬುದೂ ತತ್ವಶಾಸ್ತ್ರವೇ. ಹಲವು ವಿಮರ್ಶಕರು ಇದನ್ನು ಒಪ್ಪುವುದಿಲ್ಲ. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಹಲವು ಕವಿಗಳು ತಮ್ಮ ಬರಹದ ಮೂಲಕ ಸಾರ್ವಕಾಲಿಕ ಸತ್ಯದ ದರ್ಶನ ಮಾಡಿಸಿಬಿಡುತ್ತಾರೆ. - ೧೮ ಜುಲೈ ೨೦೧೪, ೦೪:೩೦
  • ಕತ್ತಲು ಮತ್ತು ಜ್ಞಾನದ ದೀವಿಗೆ: ಜಾಯತೇ, ಅಸ್ತಿ ವರ್ಧತೆ, ವಪರಿಣಮತೆ, ಅಪಕ್ಷೀಯತೆ, ವಿನಶ್ಯತಿ. - ೧೯ ಜುಲೈ ೨೦೧೪, ೦೪:೦೭
  • ಪರಿಶುದ್ಧ ಪ್ರೀತಿ: ಪ್ರೀತಿ ಎಂಬುದು ಕೇವಲ ಭಾವಾವೇಶವಲ್ಲ, ರಸಾತಿರೇಕ ಅಲ್ಲ. ಯಾಕೆಂದರೆ, ಈ ಭಾವಾವೇಶವೆಂಬುದು ಇಂದ್ರಿಯ ರಸೋದ್ರೇಕ ಮಾತ್ರ. ಯಾವುದೇ ಧರ್ಮ ಸತ್ಯದ ಬಗ್ಗೆ ನಿಷ್ಕಾರಣ ಪ್ರೀತಿಯನ್ನು ಒಳಗೊಂಡಿಲ್ಲ. - ೨೧ ಜು ೨೦೧೪, ೦೪:೦೫
  • ಭ್ರಮಾಲೋಕದಿಂದ ಹೊರಬನ್ನಿ: ನೀವು ಕೋಪಿಸಿಕೊಳ್ಳುವ ಪ್ರತಿ ಗಂಟೆಗೆ ನಿಮ್ಮ ೬೦ ನಿಮಿಷಗಳ ಸಂತೋಷ ಕಳ. ಪ್ರಯೋಜನವೇ ಇಲ್ಲದ ವಿಷಯಗಳಿಗೆಲ್ಲ ನಮ್ಮ ಸಂತೋಷ ಹಾಳು ಮಾಡಿಕೊಳ್ಳುವುದಾದರೂ ಏಕೆ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. - ೨೨ ಜುಲೈ ೨೦೧೪, ೦೪:೦೦
  • ಶರಣಾಗತಿಯೇ ಶಿಷ್ಯತ್ವ: ಗುರು, ಶಿಷ್ಯನು ಗುರಿ ತಲುಪುವಲ್ಲಿ ನೆರವಾಗುತ್ತಾನೆ. ಅಷ್ಟು ಮಾತ್ರವಲ್ಲ, ಗುರುವಿಲ್ಲದೆ ಶಿಷ್ಯನೊಬ್ಬ ತನ್ನ ಗುರಿ ತಲುಪಲು ಸಾಧ್ಯವೂ ಇಲ್ಲ. ಗುರುವಿನ ಕೃಪೆ ಇದೆ ಎಂದ ಮಾತ್ರಕ್ಕೆ ಶಿಷ್ಯ ತನ್ನ ಗುರಿ ತಲುಪುತ್ತಾನೆ ಎಂದೂ ಅಲ್ಲ. ಅದಕ್ಕೆ ಶಿಷ್ಯನ ಸ್ವಂತ ಶಕ್ತಿ, ಶ್ರಮವೂ ಬೇಕು. - ೨೩ ಜುಲೈ ೨೦೧೪, ೦೪:೦೦
  • ಮಕ್ಕಳ ಮೇಲಿನ ವ್ಯಾಮೋಹ: ತಾಯಿ, ತಂದೆಯರ ವ್ಯಾಮೋಹ ಮಾರಕ ವೈರಸ್ ಸೋಂಕಿನಂತೆ ಜಗತ್ತನ್ನೇ ವ್ಯಾಪಿಸಿಬಿಟ್ಟಿದೆ. ಮಕ್ಕಳ ಮೇಲೆ ಹೇರುವ ಬಲವಂತದ ಪ್ರೀತಿಯ ಬಂಧನದಿಂದ ತಾವು ಮುಕ್ತರು ಎಂದು ಕೆಲವರಷ್ಟೇ ಎದೆತಟ್ಟಿಕೊಂಡು ಹೇಳಬಲ್ಲರು. ಅದು ಎಷ್ಟೇ ಒಳ್ಳೆಯದಿರಬಹುದು ಆದರೆ ಪೋಷಕರು ಮತ್ತು ಮಕ್ಕಳ ನಡುವಿನ ಹೇರಿಕೆಯ ಮಮತೆ ಒಂದಿಲ್ಲೊಂದು ದಿನ ಹುಳಿಯಾಗುವುದಲ್ಲದೆ, ಅದು ನಾಶಕ್ಕೆ ನಾಂದಿ ಹಾಡುತ್ತದೆ. - ೨೫ ಜುಲೈ ೨೦೧೪, ೦೪:೦೦
  • ಭ್ರಮಾಲೋಕದಿಂದ ಹೊರಬನ್ನಿ: ನೀವು ಕೋಪಿಸಿಕೊಳ್ಳುವ ಪ್ರತಿ ಗಂಟೆಗೆ ನಿಮ್ಮ ೬೦ ನಿಮಿಷಗಳ ಸಂತೋ ಕಳೆದುಕೊಳ್ಳುತ್ತಿರುತ್ತದೆ. ಪ್ರಯೋಜನವೇ ಇಲ್ಲದ ವಿಷಯಗಳಿಗೆಲ್ಲ ನಮ್ಮ ಸಂತೋಷ ಹಾಳು ಮಾಡಿಕೊಳ್ಳುವುದಾದರೂ ಏಕೆ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. - ೨೨ ಜುಲೈ ೨೦೧೪, ೦೪:೦೦
  • ದಯಾ ಮರಣ ನಮ್ಮ ಜನ್ಮ ಸಿದ್ಧ ಹಕ್ಕು: ದಯಾಮರಣ ಅಥವಾ ನಮ್ಮ ಸಾವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿರಬೇಕು. ಪ್ರತಿ ಆಸ್ಪತ್ರೆಯಲ್ಲೂ ಸಾಯುವವರಿಗಾಗಿ ಒಂದು ಜಾಗವಿರಲಿ. ಸಾವನ್ನು ಆಯ್ಕೆ ಮಾಡಿಕೊಂಡವರಿಗಾಗಿ ವಿಶೇಷ ಕಾಳಜಿ ಮತ್ತು ನೆರವು ನೀಡುವುದು ಅಗತ್ಯ. ಅವರ ಸಾವು ಸುಂದರವಾಗಿರಲಿ. - ೨೪ ಜುಲೈ ೨೦೧೪, ೦೪:೦೦
  • ಕತ್ತಲಿನಲ್ಲಿ ದೀವಿಗೆ ಹಚ್ಚಿ: ಸಾಮಾನ್ಯವಾಗಿ ಪಾಪ ನಡೆಯುವ ಸ್ಥಳಗಳೇ ಕತ್ತಲಿನ ಸ್ಥಳಗಳು. ಹಲವು ವರ್ಷಗಳಿಂದ ಪೂರ್ವಗ್ರಹ ಪೀಡಿತವಾದ, ದ್ವೇಷ ತುಂಬಿದ ಆತ್ಮಗಳಿರುವ ಸ್ಥಳಗಳಲ್ಲೇ ತಮಸ್ಸಿದೆ. ಇಂಥಲ್ಲಿ ದೀವಿಗೆಯನ್ನು ಹೊತ್ತಿಸಲು ಹೇಗೆ ನೆರವಾಗಲಿ? - ೨೬ ಜುಲೈ ೨೦೧೪, ೦೪:೦೦
  • ಭ್ರಮಾಲೋಕದಿಂದ ಹೊರಬನ್ನಿ: ನೀವು ಕೋಪಿಸಿಕೊಳ್ಳುವ ಪ್ರತಿ ಗಂಟೆಗೆ ನಿಮ್ಮ ೬೦ ನಿಮಿಷಗಳ ಸಂತೋಷ ಕಳೆದುಕೊಳ್ಳುತ್ತಿರುತ್ತದೆ. ಪ್ರಯೋಜನವೇ ಇಲ್ಲದ ವಿಷಯಗಳಿಗೆಲ್ಲ ನಮ್ಮ ಸಂತೋಷ ಹಾಳು ಮಾಡಿಕೊಳ್ಳುವುದಾದರೂ ಏಕೆ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. - ೨೨ ಜುಲೈ ೨೦೧೪, ೦೪:೦೦
  • ಧ್ಯಾನ ಮತ್ತು ಸೌಂದರ್ಯ: ನಮ್ಮ ದೈನಂದಿನ ಜೀವನ ಕ್ರಮದ ಧ್ಯಾನಕ್ಕೆ ಭದ್ರ ಬುನಾದಿಯನ್ನು ಹಾಕಬೇಕು. ನಾವು ಯೋಚಿಸುವ ಕ್ರಮದಲ್ಲಿ, ಮಾಡುವ ಕ್ರಿಯೆಯಲ್ಲಿ, ನಮ್ಮ ನಡವಳಿಕೆಯಲ್ಲಿ ಹೀಗೆ ಪ್ರತಿಯೊಂದರಲ್ಲೂ ಎಚ್ಚರವಿರುವುದೇ ಧ್ಯಾನದ ಶಾಸನ. ಹೀಗಿರಲು ನಮಗೆ ಬಹಳ ಸೂಕ್ಷ್ಮ ಸಂವೇದನಾಶೀಲತೆಯ ಅಗತ್ಯವಿದೆ. - ೨೮ ಜುಲೈ ೨೦೧೪, ೦೪:೩೭
  • ಅಧ್ಯಾತ್ಮದ ಉನ್ನತಿಗೆ ಕ್ರೀಡೆ: ಯಾವುದೇ ಕ್ರೀಡೆಗೂ ಪ್ರೀತಿಯೇ ಜೀವಾಳ. ಎಂದರೆ, ಒಬ್ಬ ಒಂದು ಆಟವನ್ನು ಪ್ರೀತಿಸದ ಹೊರತು ಆತನೊಬ್ಬ ಕ್ರೀಡಾಪಟು ಆಗಲಾರ. ಭಕ್ತನೊಬ್ಬ ಭಕ್ತಿಯಲ್ಲಿ ಸಮ್ಮೋಹನಗೊಳ್ಳುವಂತೆ ಒಬ್ಬ ಆಟಗಾರ ಕೂಡ ತಾನು ಆಡುವ ಆಟವನ್ನೇ ಉಸಿ––ರಾಡಿ, ಉಂಡು, ಮಲಗುತ್ತಾನೆ. - ೩೦ ಜುಲೈ ೨೦೧೪, ೦೪:೨೧
  • ರಂಜಾನ್ ತಾತ್ವಿಕತೆ: ಪವಿತ್ರ ರಂಜಾನ್ ಆಚರಣೆಯ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ವಿವಿಧ ಸುಂಗಂಧ ದ್ರವ್ಯಗಳ ಪರಿಮಳ ಮೂಗಿಗೆ ಬಡಿಯುತ್ತಿದೆ. ಕಬಾಬ್, ಕುರ್ಮ, ಬಿರಿಯಾನಿಗಳೂ ಸೇರಿ ತರಹೇವಾರಿ ಭೋಜನಗಳಿಂದ ಊಟದ ಟೇಬಲ್ ತುಂಬಿ ಹೋಗಿದೆ. - ೨೯ ಜುಲೈ ೨೦೧೪, ೦೪:೦೯
  • ವಿಭಿನ್ನವಾಗಿಸುವುದು ಯಾವುದು?: ನನ್ನನ್ನು ಇತರರಿಗಿಂತ ವಿಭಿನ್ನವಾಗಿಸುವುದು ಯಾವುದು? ನನ್ನ ನೆನಪೇ ಅತ್ಯಂತ ವಿಶಿಷ್ಟ. ಅದು ಆಧ್ಯಾತ್ಮಿಕ ಮತ್ತು ದೈಹಿಕ ವಿಷಯದಲ್ಲೂ ನಿಜ. ನೆನಪೇ ನನ್ನನ್ನು ಬೇರೆಯವರಿಂದ ವಿಭಿನ್ನವಾಗಿಸಿಬಿಡುತ್ತದೆ. - ೩೧ ಜುಲೈ ೨೦೧೪, ೦೪:೧೫
  • ಭ್ರಮ ಹೊರಬನ್ನಿ: ನೀವು ಕೋಪಿಸಿಕೊಳ್ಳುವ ಪ್ರತಿ ಗಂಟೆಗೆ ನಿಮ್ಮ ೬೦ ನಿಮಿಷಗಳ ಸಂತೋಷ ಕಳೆದುಕೊಳ್ಳುತ್ತಿರುತ್ತದೆ. ಪ್ರಯೋಜನವೇ ಇಲ್ಲದ ವಿಷಯಗಳಿಗೆಲ್ಲ ನಮ್ಮ ಸಂತೋಷ ಹಾಳು ಮಾಡಿಕೊಳ್ಳುವುದಾದರೂ ಏಕೆ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. - ೨೨ ಜುಲೈ ೨೦೧೪, ೦೪:೦೦
  • ಮೌನದೊಳಗಣ ನಾದ; ಕಾಷ್ಠ ಮೌನದಲ್ಲೂ ಸಂಗೀತ ಯಾರಿಗಾದರೂ ಕೇಳುತ್ತಾ. ಯಾವುದೇ ರಾಗದ ಹಂಗಿಲ್ಲದ, ಲಯ ತಾಳಗಳ ಭಿಡೆಯಿಲ್ಲದ ಎರಡು ಶಬ್ಧಗಳ ನಡುವಿನ ಮೌನ ಹಾಡಾ–ಗಬಲ್ಲದೇ? ಒಂದು ಸಂಗೀತ ಅಥವಾ ಸಂಗೀತ ಸುಧೆಯಾಗಿ ಬದಲಾಗಬಲ್ಲದೇ? ಹೌದು ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ. - ೧ ಆಗಸ್ಟ್ಸ್ ೨೦೧೪, ೦೪:೦೬
  • ಭ್ರಮಾಲೋಕದಿಂದ ಹೊರಬನ್ನಿ: ನೀವು ಕೋಪಿಸಿಕೊಳ್ಳುವ ಪ್ರತಿ ಗಂಟೆಗೆ ನಿಮ್ಮ ೬೦ ನಿಮಿಷಗಳ ಸಂತೋಷ ಕಳೆದುಕೊಳ್ಳುತ್ತಿರುತ್ತ. ಪ್ರಯೋಜನವೇ ಇಲ್ಲದ ವಿಷಯಗಳಿಗೆಲ್ಲ ನಮ್ಮ ಸಂತೋಷ ಹಾಳು ಮಾಡಿಕೊಳ್ಳುವುದಾದರೂ ಏಕೆ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. - ೨೨ ಜುಲೈ ೨೦೧೪, ೦೪:೦೦
  • ವರ್ತಮಾನ ಮಾತ್ರ ಸತ್ಯ: ಏನು ಮಾಡಿಕೊಂಡಿರುವೆ ನಿನ್ನ ಬದುಕನ್ನು? ಗಮನಿಸು. ಬದುಕು ಎಷ್ಟೊಂದು ಶ್ರೀಮಂತವಾಗಿದೆ. ಆದರೆ ನೀನು ಮಾತ್ರ ಬರಡು ಹೃದಯದಿಂದ ಬದುಕನ್ನು ಎದುರಿಸುತ್ತಿದ್ದಿ. - ೪ ಆಗಸ್ಟ್ಸ್ ೨೦೧೪, ೦೪:೩೬
  • ಮಹಾಭಾರತದಲ್ಲೂ ಹನುಮ: ರಾಮಾಯಣದಲ್ಲಿ ಹನಮಂತನ ಪಾತ್ರವೇನು ಎಂಬುವುದು ನಮಗೆಲ್ಲರಿಗೂ ಗೊತ್ತು. ಆದರೆ, ಆಂಜನೇಯ ಮಹಾಭಾರತದಲ್ಲೂ ಬರುತ್ತಾನೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. - ೫ ಆಗಸ್ಟ್ ೨೦೧೪, ೦೪:೦೦
  • ವಿನಯವೇ ವೀರನ ಗುಣ: ಚಿರಂಜೀವಿ ಆಂಜನೇಯ ಮಹಾಭಾರತದಲ್ಲೂ ಕಾಣಿಸಿಕೊಳ್ಳುತ್ತಾನೆ ಎನ್ನುವುದನ್ನು ನೋಡಿದ್ದೇವೆ. ಮಹಾಭಾರತಕ್ಕೂ ಆತನಿಗೂ ಯಾವ ನಂಟಿದೆ ಎಂಬ ಕಥೆಯೊಂದನ್ನು ಹೇಳುತ್ತಿದ್ದೆ. ಕುತೂಹಲಕಾರಿಯಾದ ಈ ಕಥೆ ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. - ೬ ಆಗಸ್ಟ್ಸ್ ೨೦೧೪, ೦೪:೦೦
  • ಧರ್ಮವೆಂಬುದು ಅನುಭೂತಿ: ಧರ್ಮವೆಂಬುದು ವಿಚಾರವಲ್ಲ ಅದೊಂದು ಅನುಭೂತಿ. ವಿಚಾರ ಧರ್ಮದ ಛಾಯೆಯೂ ಆಗುವುದಿಲ್ಲ. ಯಾರು ವಿಚಾರಗಳಲ್ಲೇ ಸಂಲಗ್ನರಾಗಿರುತ್ತಾರೋ, ಅವರು ಧರ್ಮದಿಂದ ಸದಾ ದೂರವೇ ಆಗಿರುತ್ತಾರೆ. ತರ್ಕ, ವಿಚಾರದಲ್ಲಿ ತೊಡಗಿರುವವರು ಎಲ್ಲರಿಗಿಂತ ಹೆಚ್ಚು ಧರ್ಮದಿಂದ ದೂರವಾಗುತ್ತಾರೆ. - ೭ ಆಗಸ್ಟ್ಸ್ ೨೦೧೪, ೦೪:೦೦
  • ಪ್ರೀತಿ ಭಯಂಕರ: ಪ್ರೀತಿ ಇಲ್ಲದೆ ಮನುಷ್ಯ ಬದುಕುವುದಾದರೂ ಹೇಗೆ? ಪ್ರೀತಿ ಇಲ್ಲದ ಇರುವಿಕೆ ಎಂದರೆ ನಿಯಂತ್ರಣದ, ಗೊಂದಲದ, ನೋವಿನ ಇರುವಿಕೆ. ನಾವೆಲ್ಲಾ ಸಷ್ಟಿಸುತ್ತಿರುವುದು ಅಂತಹ ಇರುವಿಕೆಯನ್ನೇ. - ೮ ಆಗಸ್ಟ್ಸ್ ೨೦೧೪, ೦೪:೦೦
  • ಕಷ್ಟಪಡುವುದರ ಅರ್ಥ: ಅತ್ಯಂತ ಭರವಸೆಯೇ ಇಲ್ಲದ ಸ್ಥಿತಿಯನ್ನು ನಾವು ಎದುರಿಸುತ್ತಿದ್ದರೂ, ಬದಲಾಯಿಸಲಾರದ ಹಣೆಬರಹವನ್ನು ಎದುರಿಸಬೇಕಾಗಿ ಬಂದಾಗಲೂ ಬದುಕಿನಲ್ಲಿ ಅರ್ಥವನ್ನು ಹುಡುಕಬಹುದು ಎನ್ನುವುದನ್ನು ಮರೆಯಬಾರದು. - ೧೧ ಆಗಸ್ಟ್ಸ್ ೨೦೧೪, ೦೪:೫೪
  • ಕಾರ‌್ಯಸಾಧು ವ್/ಸ್ ಆದರ್ಶಪ್ರಾಯ ಶಾಂತಿ: ವೆಸ್ಟ್‌ಬ್ಯಾಂಕ್, ಗಾಜಾ ಮತ್ತು ಇಸ್ರೇಲ್ ಈ ಮೂರು ಕಡೆ ಪ್ಯಾಲಿಸ್ತೇನಿ ಅರಬರು ಜೀವನ ನಡೆಸುತ್ತಿದ್ದಾರೆ. ವೆಸ್ಟ್‌ಬ್ಯಾಂಕ ಮತ್ತು ಇಸ್ರೇಲ್‌ನಲ್ಲಿರುವ ಅರಬರು ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆ. - ೯ ಆಗಸ್ಟ್ಸ್ ೨೦೧೪, ೦೪:೦೮
  • ಆತ್ಮದ ಸ್ವರೂಪವೇನು?: ಜೈನ ಕತಿ ಭಾಗ್ವತಿ ಸೂತ್ರದಲ್ಲಿ, ಗೌತಮ, ‘‘ಆತ್ಮದ ಸ್ವರೂಪ ಏನು?’’ ಎಂದು ಮಹಾವೀರನನ್ನು ಕೇಳುತ್ತಾನೆ. ಇದಕ್ಕೆ ಮಹಾವೀರ ಉತ್ತರಿಸುವುದು ಹೀಗೆ: ‘‘ಆತ್ಮದ ಸ್ವರೂಪ ಸಮಚಿತ್ತತೆ.’’ - ೧೨ ಆಗಸ್ಟ್ಸ್ ೨೦೧೪, ೦೪:೨೯
  • ಕರ್ಮವನ್ನು ಪ್ರೀತಿಸುವುದೇ ಸೃಷ್ಟಿಶೀಲತೆ: ನೀವು ಜಗತ್ಪ್ರಸಿದ್ಧ ಚಿತ್ರ ಕಲಾವಿದ ಪಿಕಾಸೋನಂತಾದರೆ ಹೆಚ್ಚು ಸಜನಶೀಲ–ರಾ–ಗುತ್ತೀರಿ ಎಂದು ಭಾವಿಸಿದರೆ ಖಂಡಿತಾ ನೀವು ಸಜನಶೀಲರಾಗುವುದಿಲ್ಲ. - ೧೩ ಆಗಸ್ಟ್ಸ್ ೨೦೧೪, ೦೪:೪೯
  • ಹೊಸ ಅನುಬಂಧ: ಇಡೀ ಪ್ರಪಂಚ ಒಂದರೊಳಗೊಂದು ಹೆಣೆದುಕೊಂಡಿದೆ. ಸಕಲ ಜೀವಜಂತುಗಳು, ಅಣುರೇಣು ತಣಕಾಷ್ಟಗಳೂ ಕೂಡ ಪರಮಾಪ್ತವಾದ ನಂಟನ್ನು ಹೊಂದಿವೆ ಎಂದು ಹಿಂದೆಂದೋ ಹಿರಿಯರು ಹೇಳಿದ್ದರು. - ೧೫ ಆಗಸ್ಟ್ಸ್ ೨೦೧೪, ೦೪:೨೫
  • ಪ್ರತಿನಿತ್ಯ ಅಧ್ಯಾತ್ಮ ಸ್ನಾನ: ಉಪಾಸನ ಎಂದರೆ ಸಮೀಪ ಕೂರುವುದು ಎಂದರ್ಥ. ಅಧ್ಯಾತ್ಮ ದೃಷ್ಟಿಯಲ್ಲಿ ಅದರ ಅರ್ಥ ಮತ್ತೂ ಆಳವಾಗಿದೆ. ಉಪಾಸನ ಎನ್ನುವ ಪದವನ್ನು ಸಾಮಾನ್ಯವಾಗಿ ನಾವು ದೇವತಾ ಆರಾಧನಾ ಪದ್ಧತಿ ಎನ್ನುತ್ತೇವೆ. - ೧೮ ಆಗಸ್ಟ್ಸ್ ೨೦೧೪, ೦೪:೪೦
  • ನಾನೇಕೆ ಭಾರತೀಯ: ನಾನೇಕೆ ಭಾರತೀಯ? ನನಗೆ ಬೇರಾವುದೇ ಆಯ್ಕೆಯಿರಲಿಲ್ಲ: ನಾನು ಭಾರತೀಯನಾಗಿ ಹುಟ್ಟಿದೆ. _ ೧೬ ಆಗಸ್ಟ್ಸ್ ೨೦೧೪, ೦೪:೪೯
  • ವರ್ತಮಾನದಲ್ಲಿ ಬದುಕಿ: ಶಾಂತಿ ಮತ್ತು ಸಂತೋಷ ದಕ್ಕುವುದು ನಾವು ‘ಈಗ’ ಬದುಕಿದಾಗ. ವರ್ತಮಾನವನ್ನು ಹಿಡಿಯುವುದು ಕಷ್ಟ. ಇದನ್ನು ವ್ಯಾಖ್ಯಾನಿಸುವುದು ಇನ್ನೂ ಕಷ್ಟ. ಯಾಕೆಂದರೆ, ಯಾವುದನ್ನು ವರ್ತಮಾನ ಎಂದು ವಿವರಿಸಲು ಹೊರಡುತ್ತೇವೋ ಆ ವೇಳೆಗಾಗಲೇ ಅದು ಭೂತವಾಗಿರುತ್ತದೆ. - ೨೦ ಆಗಸ್ಟ್ಸ್ ೨೦೧೪, ೦೪:೦೦
  • ಮಹಾಗುರು ಕೃಷ್ಣ: ಜನ್ಮಾಷ್ಠಮಿ, ಎಲ್ಲರೂ ಪೂಜ್ಯ ಭಾವದಿಂದ ಆರಾಧಿಸುವ ಭಗವಾನ್ ಶ್ರೀ ಕೃಷ್ಣನ ಜನ್ಮ ದಿನ. ಮಹಾವಿಷ್ಣು ಅ ದಿನ. ಕೃಷ್ಣ ಗುರುಗಳ ಗುರು ಎಂದರೆ ಜಗದ್ಗುರು. ಕೃಷ್ಣನ ಅವತಾರ, ದೇವರು ಹೇಗೆ ತನ್ನ ಸೃಷ್ಟಿ ಕ್ರಿಯೆಯನ್ನು ನಿರ್ವಹಿಸುತ್ತಾನೆ ಎನ್ನುವುದರ ಸಾಂಕೇತಿಕ ನಿರೂಪಣೆ. - ೧೯ ಆಗಸ್ಟ್ಸ್ ೨೦೧೪, ೦೪:೦೦
  • ಆದದ್ದೆಲ್ಲಾ ಒಳಿತೇ...: ಜಗತ್ತಿನ ಸುತ್ತ ಒಮ್ಮೆ ಕಣ್ಣೋಟ ಹರಿಸಿದಾಗ ಹೃದಯ ಕಲುಕುವ ದೃಶ್ಯಗಳೇ ಕಾಣ ಸಿಗುತ್ತವೆ. ಭೂಮಿಯ ಮೇಲೆ ಸ್ವಾಮ್ಯ ಸಾಧಿಸಲು ಕದನಗಳು ನಡೆಯುತ್ತಿವೆ, ತಾರ ತಮ್ಯ ಹೆಚ್ಚುತ್ತಿದೆ, ಹವಾಮಾನ ಬದಲಾವಣೆಗಳು ಹೆಚ್ಚುತ್ತಿವೆ ಮತ್ತು ರಾಜಕಾರಣದಲ್ಲಿ ಹಗರಣಗಳು ಹೆಚ್ಚುತ್ತಿವೆ. - ೨೧ ಆಗಸ್ಟ್ಸ್ ೨೦೧೪, ೦೪:೦೦
  • ಬೆಳಕಿನ ಹಾದಿ: ಕತ್ತಲು ಬಹಳ ಪ್ರಾಚೀನ. ಆದರೆ ಸೂರ್ಯನ ಕಿರಣಗಳು ಯಾವಾಗ ಹೊಮ್ಮಿದರೂ ಅವು ಹೊಚ್ಚಹೊಸತು. ಅವು ಫಕ್ಕನೆ ಹೊಳೆದು ಮಾಯವಾಗಿಬಿಡುತ್ತವೆ. ಮತ್ತೆ ನೀವು ನಿಮ್ಮ ಕತ್ತಲಲ್ಲಿ ಮುಳುಗಿಬಿಡುತ್ತೀರಿ. ಯಾವಾಗ ಎರಡನ್ನೂ ತುಲನೆ ಮಾಡತೊಡಗುತ್ತೀರೋ ಆಗ ಬೆಳಕಿನ ಬಗ್ಗೆ ಸಂದೇಹ ಹುಟ್ಟತೊಡಗುತ್ತದೆ. _ ೨೩ ಆಗಸ್ಟ್ಸ್ ೨೦೧೪, ೦೪:೦೦ ೮ಐಡಿಯಾಗಳ ಆಳ ಅಗಲ...: ಮನಸ್ಸು ತನ್ನಲ್ಲಿ ಐಡಿಯಾಗಳನ್ನು ತುಂಬಿಕೊಳ್ಳದೆ ಸ್ವತಂತ್ರವಾಗಿದ್ದಾಗ ಮಾತ್ರ ಯಾವುದೇ ಅನುಭವ ದೊರೆಯಲು ಸಾಧ್ಯ. ಐಡಿಯಾ ಎಂದೂ ಸತ್ಯವಲ್ಲ. ಸತ್ಯ ಎಂಬುದು ಕ್ಷಣಕ್ಷಣವೂ ನೇರವಾಗಿ ಅನುಭವಿಸಬೇಕಾದ್ದು. ಸತ್ಯವೆಂಬುದು ನಮ್ಮ ಬಯಕೆಯ ಅನುಭವವಲ್ಲ. - ೨೨ ಆಗಸ್ಟ್ಸ್ ೨೦೧೪, ೦೪:೦೦
  • ಧ್ಯಾನದಿಂದ ಆರೋಗ್ಯ: ಅನೇಕರು ತಮ್ಮ ಜೀವನದಲ್ಲಿ ತಂದೆ-ತಾಯಿಗಳಿಂದ ಪಡೆದುಕೊಂಡ ನಕಾರಾತ್ಮಕ ಜೀವನ ಧೋರಣೆಗಳನ್ನು ಮತ್ತು ವರ್ತನೆಗಳನ್ನು ಅನುಸರಿಸುತ್ತಿರುತ್ತಾರೆ. - ೨೫ ಆಗಸ್ಟ್ಸ್ ೨೦೧೪, ೦೪:೫೯
  • ಅನುಭವವೇ ಗುರು: ‘ಅನುಭವಗಳಿಂದ ಪಾಠ ಕಲಿಯಬೇಕು’ ಎಂದು ಹಿರಿಯರು ಹೇಳುವುದು ಸಾಮಾನ್ಯ. ಇದೇ ವೇಳೆ, ಅಜ್ಞಾನಿಗಳ ಅನುಭವಕ್ಕೆ ಯಾವುದೇ ಬೆಲೆ ಇಲ್ಲ ಎಂದೂ ನಾವು ಭಾವಿಸುತ್ತೇವೆ. - ೨೬ ಆಗಸ್ಟ್ಸ್ ೨೦೧೪, ೦೪:೧೪
  • ಟ್ರಾನ್ಸ್‌ಫರ್ನನಲ್ ಲೀಡರ್‌ಶಿಪ್: ‘ನಾಯಕತ್ವ’ ಈಗಿನ ಸಂದರ್ಭದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಚಾರ. ಈ ಸಂಬಂಧ ಹಲವು ಸಂಸ್ಥೆಗಳಲ್ಲಿ ಸಾಕಷ್ಟು ಸಂಶೋಧನೆಗಳೂ ನಡೆಯುತ್ತಿವೆ. - ೨೭ ಆಗಸ್ಟ್ಸ್ ೨೦೧೪, ೦೪:೧೦
  • ಮೊದಲ ಗುರು: ಸೃಷ್ಟಿಯ ಪ್ರತಿ ಅಂಶವೂ ಮಾನವನ ದೇಹದೊಳಗೆ ಅಡಕವಾಗಿರುತ್ತದೆ. ದೇಹವೆಂದರೆ ನಾವು ಕನ್ನಡಿಯಲ್ಲಿ ಕಾಣುವುದಷ್ಟೇ ಅಲ್ಲ, ಅಷ್ಟಾಂಗ ಯೋಗ ಮತ್ತು ಸನಾತನ ಕ್ರಿಯೆ ಯೋಗಗಳ ಅಭ್ಯಾಸದಿಂದ ಇಂತಹ ಕೆಲವು ಅನುಭವಗಳು ದಕ್ಕುತ್ತವೆ. - ೨೯ ಆಗಸ್ಟ್ಸ್ ೨೦೧೪, ೦೪:೦೧
  • ನಿರಾಕಾರನಿಗೆ ಆಕಾರಗಳೇಕೆ?: ಹಿಂದೂ ಧರ್ಮದ ಮೂಲವಾದ ವೇದಗಳು ದೇವರ ಬಗ್ಗೆ ಚರ್ಚಿಸುತ್ತವೆ. ಇವು ಚರ್ಚಿಸುವ ದೇವರು ನಿರಾಕಾರ ಮತ್ತು ಅಜಾತ. - ೨ ಸೆಪ್ಟೆಂಬರ್ ೨೦೧೪, ೦೪:೦೦
  • ಮಕ್ಕಳಿಗಿರಲಿ ಹಸಿರಿನ ಅರಿವು: ಈಗ ಎಲ್ಲೆಡೆಯೂ ಕೇಳಿಬರುವ ವಿಚಾರವೆಂದರೆ 'ಹಸಿರು ಪಾಠ'. ಹಲವು ಮ್ಯಾರಥಾನ್‌ಗಳು, ಅದೆಷ್ಟೋ ಆಂದೋಲನಗಳು, ಅಸಂಖ್ಯಾತ ವಿಚಾರ ಸಂಕಿರಣಗಳು-ಎಲ್ಲದರಲ್ಲೂ ಹಸಿರು ಜಪ. ಇದರ ನಡುವೆ ಈಗ ಮುಂಚೂಣಿಗೆ ಬಂದಿರುವ ಮತ್ತೊಂದು ವಿಚಾರ ಎಂದರೆ ಮಕ್ಕಳಿಗೆ ಹಸಿರಿನ ಅರಿವು ನೀಡುವ ಕೆಲಸ. - ೩ ಸೆಪ್ಟೆಂಬರ್ ೨೦೧೪, ೦೪:೦೦
  • ಗುರು ಮತ್ತು ಶಿಕ್ಷಕನ ನಡುವಿನ ಅಂತರ: ದೇವರ ಹುಡುಕಾಟದಲ್ಲಿ ಹಾದಿ ತಪ್ಪುವ ಆತ್ಮಗಳನ್ನು ಮತ್ತೆ ಸರಿದಾರಿಗೆ ತರುವ ಕೆಲಸ ಗುರು ಶಿಷ್ಯರ ಸಂಬಂಧ ಮಾಡುತ್ತದೆ. ಮೊದಲಲ್ಲಿ ಇದನ್ನು ಅನೇಕ ಆಧ್ಯಾತ್ಮಿಕ ಹಾದಿಗಳು ಮತ್ತು ಗುರುಗಳ ನಡುವೆ ತುಲನೆ ಮಾಡುವುದು ಒಳಿತು. - ೪ ಸೆಪ್ಟೆಂಬರ್ ೨೦೧೪, ೦೪:೦೦
  • ದೇವರ ಮೇಲಿನ ನಂಬಿಕೆ ಕುರಿತು: ದೇವರಿದ್ದಾನೋ ಇಲ್ಲವೋ ಎಂಬುದು ದೊಡ್ಡ ವಿಷಯವಲ್ಲ. ಜೀವನದ ವಿಷಯ ಬಂದಾಗ ಅದು ಪ್ರಸ್ತುತವಾಗುವುದೇ ಇಲ್ಲ. ಆ ಶೂನ್ಯ ಸ್ಥಿತಿಯಲ್ಲಿ ನಿಂತು ನೋಡಿದಾಗ ದೇವರೆನ್ನುವುದು ಅರ್ಥಹೀನ ಅಥವಾ ಅತ್ಯಂತ ದುರ್ಬಲ ಕೊಂಡಿಯಂತೆ ಕಾಣುತ್ತದೆ. - ೫ ಸೆಪ್ಟೆಂಬರ್ ೨೦೧೪, ೦೪:೦೦
  • ಆನಂದದ ಮೂರ್ತರೂಪ ರಾಧೆ: ಲೌಕಿಕ ಜಗತ್ತು ಶಾಶ್ವತವಲ್ಲ, ಯಾವುದದೂ ಅಂತಿಮವಲ್ಲ. ಇದಮಿತ್ಥಂ ಎಂಬುದು ಏನೂ ಇಲ್ಲ. ಎಲ್ಲಾ ಭಾವನೆಗಳು ಕ್ಷಣಿಕ ಸಂಚಾರಿ ಭಾವಗಳಷ್ಟೆ. - ೬ ಸೆಪ್ಟೆಂಬರ್ ೨೦೧೪, ೦೪:೦೦
  • ತಿಳಿವು ನೀಡುವ ಆನಂದ: ಜೀವನದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ, ಆನಂದವನ್ನು ಹೆಚ್ಚಿಸುವುದಕ್ಕೆ, ನಿಮ್ಮ ಮನಸ್ಸನ್ನು ಶಾಂತಗೊಳಿಸುವುದಕ್ಕೆ ಮತ್ತು ಮಾನಸಿಕ ಪ್ರಶಾಂತತೆಯನ್ನು ರೂಢಿಸಿಕೊಳ್ಳುವುದಕ್ಕೆ ಬೇಕಾದ ಜ್ಞಾನವನ್ನು ಸಂಪಾದಿಸಿಕೊಳ್ಳಿ. ಹಾಗೆ ಮಾಡಲು ಮುಂದೆ ಸೂಚಿಸಿರುವ ಸಲಹೆಗಳು ಉಪಯುಕ್ತವಾಗುತ್ತದೆ. - ೮ ಸೆಪ್ಟೆಂಬರ್ ೨೦೧೪, ೦೪:೪೨
  • ಎಲ್ಲ ಸಂಕಟಗಳಿಗೂ ಪರಿಹಾರ: ಮನುಕುಲಕ್ಕೆ ಅದರ ಭವಿಷ್ಯದ ಕುರಿತು ಅದೇನೋ ಕುತೂಹಲ. ತನ್ನ ಭವಿಷ್ಯದ ಬದುಕು ಹೇಗಿರುತ್ತದೆ, ಮುಂದಿನ ಜಗತ್ತು ಯಾವ ಸ್ವರೂಪದಲ್ಲಿರುತ್ತದೆ ಎಂದು ತಿಳಿದುಕೊಳ್ಳುವ ಹಂಬಲ ಅದಮ್ಯ. - ೯ ಸೆಪ್ಟೆಂಬರ್ ೨೦೧೪, ೦೪:೦೦
  • ಇಚ್ಛಿಸುವುದು ಫಲಿಸುತ್ತದೆಯೇ?: ಆಕರ್ಷಕತ್ವ ಎಂದರೆ ಇಚ್ಛಿಸಿದ ಆಸೆಗಳು ಫಲಿಸುವಂತೆ ಮಾಡುವ ತಂತ್ರ. ಇದು ನೀವು ಮತ್ತು ನೀವು ಬಯಕೆಗಳ ನಡುವಿನ ಶಕ್ತಿಯಾಗಿ ಪ್ರವಹಿಸುತ್ತದೆ. ಈ ತತ್ತ್ವದ ಪ್ರಕಾರ, ನೀವು ಯಾವುದೇ ಅವಕಾಶ/ಆಸೆಯನ್ನು ಮನದಲ್ಲಿ ಶ್ರದ್ಧೆಯಿಂದ ಬಯಸಿದರೆ ಆ ಅವಕಾಶ ಮತ್ತು ಆಸೆಗಳೆರಡೂ ನಿಮ್ಮದಾಗುತ್ತವೆ. - ೧೦ ಸೆಪ್ಟೆಂಬರ್ ೨೦೧೪, ೦೪:೦೦
  • ಸತ್ವ, ರಾಜಸ, ತಾಮಸ ಮೂರು ಗುಣಗಳು: ನಮ್ಮೆಲ್ಲರಲ್ಲೂ ಸತ್ವ ರಾಜಸ, ತಾಮಸ ಈ ಮೂರೂ ಗುಣಗಳಿವೆ. ಆದರೆ ಅವುಗಳ ಪ್ರಮಾಣ ಯಾರಲ್ಲಿ ಎಷ್ಟಿದೆ ಎಂಬುದೇ ಅವರು ಎಂಥ ಮನುಷ್ಯರು ಎಂಬುದನ್ನು ನಿರ್ಧರಿಸುತ್ತದೆ. - ೧೧ ಸೆಪ್ಟೆಂಬರ್ ೨೦೧೪, ೦೪:೦೦
  • ನಿಜ ಸ್ವಾತಂತ್ರ್ಯದ ಸವಿ: ಪ್ರತಿ ವ್ಯಕ್ತಿಗೂ ಅವರದ್ದೇ ಆದ ವಿಶಿಷ್ಟ ಅಸ್ತಿತ್ವವಿದೆ. ಹುಟ್ಟಿದಂದಿ ಸಾಯುವವರೆಗೂ ಹಲವು ಗುಣಲಕ್ಷಣ, ಮನೋಭಾವ, ಆದರ್ಶ, ಮೌಲ್ಯ ಮತ್ತು ತತ್ತ್ವಗಳನ್ನು ನಮ್ಮದಾಗಿಸಿಕೊಳ್ಳುತ್ತಾ ಮುನ್ನಡೆಯುತ್ತೇವೆ. - ೧೨ ಸೆಪ್ಟೆಂಬರ್ ೨೦೧೪, ೦೪:೦೦
  • ಆಕರ್ಷಣೆ ನಿಯಮ ಮತ್ತು ಶಕ್ತಿ: ಆಕರ್ಷಣೆ ನಿಯಮವು ನೇರವಾಗಿ ನೀವು ಮತ್ತು ನೀವು ಅತ್ಯಂತ ತೀವ್ರವಾಗಿ ಬೇಡಿದ ವಸ್ತುವಿನೊಂದಿಗೆ ನೇರವಾಗಿ ಸಂಬಂಧಪಟ್ಟಿರುತ್ತದೆ. - ೧೩ ಸೆಪ್ಟೆಂಬರ್ ೨೦೧೪, ೦೪:೦೦
  • ಗೌರವಪೂರ್ವಕ ಪ್ರೀತಿ: ಎಲ್ಲ ಮಾನವರಲ್ಲೂ ಸಂತೋಷ, ದುಃಖ, ಪ್ರೀತಿ, ದ್ವೇಷ, ಭರವಸೆ, ನಿರಾಸೆ, ಪ್ರೀತಿಸುವ ಮತ್ತು ಪ್ರೀತಿಗೆ ಸ್ಪಂದಿಸುವ ಮನೋಭಾವಗಳು ಸ್ವಾಭಾವಿಕ. - ೧೫ ಸೆಪ್ಟೆಂಬರ್ ೨೦೧೪, ೦೪:೦೯
  • ವಿವೇಕ ಮತ್ತು ವಿಶ್ವಾಸದೊಂದಿಗೆ ಯಾನಿಸಿ: ನಮ್ಮ ಪ್ರಯಾಣ ನೋಡಲು ಕಷ್ಟಕರವಾಗಿರುವಂತೆ ಕಾಣುತ್ತದೆ ಮತ್ತು ಅದರಲ್ಲಿ ನಾವು ಏಕಾಂಗಿಯಾದಂತೆ ಕಾಣುತ್ತೇವೆ. ಗುರಿ ಬಹಳ ದೂರ ಇದೆ. ಕಷ್ಟಕಾಲದಲ್ಲಿ ಎಲ್ಲವೂ ಕಠಿಣವಾಗಿಯೇ ಕಾಣುತ್ತದೆ. - ೧೬ ಸೆಪ್ಟೆಂಬರ್ ೨೦೧೪, ೦೪:೦೭
  • ಎಲ್ಲರನ್ನೂ ಒಳಗೊಳ್ಳುವುದೇ ಧರ್ಮ: ರಿಲಿಜನ್ ಎನ್ನುವುದು ಆಧುನಿಕ ಕಾಲದಲ್ಲಿ ಅತಿ ಹೆಚ್ಚು ವಾದ-ವಿವಾದಕ್ಕೊಳಗಾಗುತ್ತಿರುವ ಪರಿಕಲ್ಪನೆ. ಲ್ಯಾಟಿನ್ ಮೂಲದ ರೆಲಿಗೇರ್ನಿಂದ ಈ ರಿಲಿಜನ್ ಪದ ಹುಟ್ಟಿದೆ. - ೧೭ ಸೆಪ್ಟೆಂಬರ್ ೨೦೧೪, ೦೪:೫೦
  • ಎಚ್ಚರಿಕೆ ಗಂಟೆ: ಹೊರೆಗಳಿಂದ ಮುಕ್ತವಾದ ಸುಲಲಿತವಾಗಿ ಸಾಗುವ ಬದುಕನ್ನೇಕೆ ದೇವರು ನಮಗೆ ಕೊಡುವುದಿಲ್ಲ? ಜೀವನದ ತುಂಬ ಜಂಜಡಗಳೇ ತುಂಬಿರುವುದೇಕೆ? - ೧೯ ಸೆಪ್ಟೆಂಬರ್ ೨೦೧೪, ೦೪:೧೯
  • ಪ್ರಜ್ಞಾಪೂರ್ವಕ ಚಿಂತನೆ ನಿಮ್ಮದಾಗಲಿ: ಮನದ ಶೂನ್ಯ ತುಂಬಲು ಸುಪ್ತ ಮನಸ್ಸಿನಿಂದ ಪುಟಿಯುವ ಚಿಂತನೆಗಳೇ ‘ಆಲೋಚನಾರಹಿತ ಚಿಂತನೆ’ಗಳು. ಶೂನ್ಯವೆಂದರೆ ಮನಸ್ಸಿಗೆ ಅಷ್ಟಕ್ಕಷ್ಟೆ. - ೧೮ ಸೆಪ್ಟೆಂಬರ್ ೨೦೧೪, ೦೪:೧೬
  • ಆರೋಗ್ಯ ಹೆಚ್ಚಿಸುವ ಕ್ಷಮೆ: ನಮಗೆ ಅನ್ಯಾಯ ಮಾಡಿದವರ ಬಗ್ಗೆ ನಮಗೆ ಕೋಪ, ಜಿಗುಪ್ಸೆ, ದ್ವೇಷ ಇತ್ಯಾದಿ ನಕಾರಾತ್ಮಕ ಭಾವನೆಗಳಿರುವುದು ಸಾಮಾನ್ಯ. ಅಂತಹ ಭಾವನೆಗಳು ನಮ್ಮ ಮಾನಸಿಕ ಒತ್ತಡ ಹೆಚ್ಚಿಸುತ್ತವೆ. - ೨೨ ಸೆಪ್ಟೆಂಬರ್ ೨೦೧೪, ೦೪:೨೧
  • ಪರಮಾತ್ಮ ನಮ್ಮೆದುರಲ್ಲೇ ಇದ್ದಾನೆ: ಸ್ವಾಮಿ ರಾಮತೀರ್ಥರ ಚಿಕ್ಕದೊಂದು ಕಥೆಯಿದೆ. ಪ್ರೇಮಿಯೊಬ್ಬ ದೂರದೇಶಕ್ಕೆ ಹೋದ. ಆತ ಹಿಂತಿರುಗಿ ಬರಲೇ ಇಲ್ಲ. ಆತನ ಪ್ರೇಯಸಿ ಆತನ ಬರವಿಗಾಗಿ ಎದುರು ನೋಡುತ್ತಾ ದಿನ ದೂಡುತ್ತಿದ್ದಳು. - ೨೦ ಸೆಪ್ಟೆಂಬರ್ ೨೦೧೪, ೦೪:೦೦
  • ಹುಟ್ಟುಗುರುತುಗಳು ಪೂರ್ವಜನ್ಮದ ಸಂಕೇತಗಳೇ?: ಹುಟ್ಟಿನ ಗುರುತುಗಳು (ಹುಟ್ಟಿನಿಂದಲೇ ಕಾಣುವ ಶಾಶ್ವತ ಗುರುತುಗಳು) ಪುನರ್ಜನ್ಮದ ಸಂಕೇತಗಳೆಂದು ಭಾವಿಸಲಾಗಿದೆ. ಸ್ಟೀವನ್‌ಸನ್ ಎಂಬ ಸಂಶೋಧಕನೊಬ್ಬ ಹುಟ್ಟಿನ ಗುರುತುಗಳಿಗೂ ಪುನರ್ಜನ್ಮಕ್ಕೂ ನಂಟಿರುವುದನ್ನು ಅಸಂಖ್ಯಾತ ಉದಾಹರಣೆಗಳ ಮೂಲಕ ಪತ್ತೆ ಹಚ್ಚಿದ್ದಾನೆ. - ೨೩ ಸೆಪ್ಟೆಂಬರ್ ೨೦, ೦೪:೦೦
  • ‘ಸ್ವ’-ನಾಶವೇ ಜ್ಞಾನೋದಯ: ಭಾರತದಲ್ಲಿ ಜ್ಞಾನೋದಯ ಪಡೆದವರನ್ನು ’ದ್ವಿಜರು’ ಎನ್ನಲಾಗುತ್ತದೆ. ದ್ವಿಜರು ಎಂದರೆ ಎರಡು ಬಾರಿ ಹುಟ್ಟಿದವರು ಎಂದರ್ಥ. ಮೊದಲ ಬಾರಿಗೆ ನಾವು ತಾಯಿಯ ಗರ್ಭದಿಂದ ಜನ್ಮ ತಳೆದಿರುತ್ತೇವೆ. - ೨೪ ಸೆಪ್ಟೆಂಬರ್ ೨೦೧೪, ೦೪:೩೯
  • ಕೊಡುವುದರಲ್ಲಿನ ಸಂತೃಪ್ತಿ: ನಮ್ಮಲ್ಲಿ ಎಷ್ಟಿದೆಯೋ ಅದರಲ್ಲೇ ಸಂತೋಷವಾಗಿರುವುದೇ ಸಂತೃಪ್ತಿ. ಕೊಡುವುದರಲ್ಲಿನ ಸಂತೋಷವಿದೆಯಲ್ಲಾ ಅದೇ ಸಂತೃಪ್ತಿ. ನೀವು ಕೊಡುತ್ತಾ ಹೋದಂತೆ ನಿಮ್ಮದೆನ್ನುವುದೆಲ್ಲಾ ಮುಗಿದು ಹೋಗಬಹುದು. ಆದರೆ ನೀವೇನನ್ನೋ ಕೊಟ್ಟಾಗ ಅದು ಪುಟ್ಟ ಮಗುವೊಂದರ ಮೊಗದ ಮೇಲೆ ತಿಳಿನಗು ನೆಲೆ ನಿಲ್ಲುವಂತೆ ಮಾಡಿರಬಹುದು. - ೨೫ ಸೆಪ್ಟೆಂಬರ್ ೨೦೧೪, ೦೪:೦೦
  • ಜ್ಞಾನೋದಯದ ಸುತ್ತಮುತ್ತ: ತಿಳಿವು ಮೂಡುವುದೆಂದರೆ ಗಾಢವಾದ ನಿದ್ದೆಯಿಂದ ಎಚ್ಚೆತ್ತಂತೆ. ಕನಸಿನ ಮಾಯಾಲೋಕದಿಂದ ವಾಸ್ತವಕ್ಕೆ ಜಿಗಿದಂತೆ. ಅಜ್ಞಾನವೆಂಬುದು ಕತ್ತಲು. ಅದರ ತುಂಬ ಬರಿ ಅನುಮಾನಗಳು ಮತ್ತು ತಳಬುಡವಿಲ್ಲದ ಉತ್ತರ ದೊರೆಯದ ಪ್ರಶ್ನೆಗಳು. - ೨೬ ಸೆಪ್ಟೆಂಬರ್ ೨೦೧೪, ೦೪:೦೦
  • ಗಮನದ ಅತ್ತ ಇತ್ತ...: ವಸ್ತುವೊಂದರ ಬಗ್ಗೆ ನೀಡುವ ಮತ್ತು ವಸ್ತುರಹಿತ ಗಮನಗಳ ನಡುವೆ ವ್ಯತ್ಯಾಸವಿದೆ ಎಂದು ತೋರುತ್ತದೆ. ನಾವು ಯಾವುದೇ ಒಂದು ನಿರ್ದಿಷ್ಟ ಐಡಿಯಾ, ಆದರ್ಶ, ನಂಬಿಕೆ ಅಥವಾ ವಸ್ತುವಿನ ಬಗ್ಗೆ ಗಮನ ನೀಡಬಹುದು. ಇದು ನಮ್ಮ ಆಯ್ಕೆಯನ್ನು ಬಿಟ್ಟು ಉಳಿದೆಲ್ಲವನ್ನೂ ಬಹಿಷ್ಕರಿಸುವಂಥ ಗಮನ. - ೨೭ ಸೆಪ್ಟೆಂಬರ್ ೨೦೧೪, ೦೪:೦೦
  • ಸಫಲ ಹುಡುಕಾಟ: ಯಾವ ರೀತಿ ಮನಸ್ಸು ಇದ್ದರೆ ಪರಬ್ರಹ್ಮನ ಪ್ರತಿಬಿಂಬವನ್ನು ನಮಗೆ ಕೊಡಬಹುದು ಎಂಬುದನ್ನು ವಿವರಿಸುವೆ. ಪರಬಹ್ಮ ಒಳಗೆ, ಹೊರಗೆ ಸರ್ವಾಂತರ‌್ಯಾಮಿಯಾಗಿ ಇರುವನು. - ೨೯ ಸೆಪ್ಟೆಂಬರ್ ೨೦೧೪, ೦೪:೪೫
  • ಅವಮಾನಗಳಿಂದ ಆಚೆ ಬನ್ನಿ: ನಾವು ಬದು ವಿವಿಧ ರೀತಿಯಲ್ಲಿ ತಿರಸ್ಕರಿಸುವುದನ್ನು ಅಥವಾ ಅ ಅಭ್ಯಾಸ ಮಾಡಿಕೊಂಡಿದ್ದೇವೆ. ವಿಚ್ಛೇದನ, ದೂರವಾಗುವುದು, ನಂಬಿಕೆದ್ರೋಹ ಮುಂತಾದ ರೀತಿಯಲ್ಲಿ ಈ ತಿರಸ್ಕಾರವನ್ನು ವ್ಯಕ್ತಪಡಿಸುತ್ತೇವೆ. - ೩೦ ಸೆಪ್ಟೆಂಬರ್ ೨೦೧೪, ೦೪:೫೨
  • ಸ್ತ್ರೀ-ಆದಿಯೂ, ಅಂತ್ಯವೂ ಆದಿ-ಅಂತ್ಯಗಳೆರಡೂ ಪ್ರಕೃತಿಯಲ್ಲೇ ಇರುವುದರಿಂದ ಸ್ತ್ರೀ ರೂಪಗಳೆಲ್ಲ ಅಮೂಲ್ಯ. ಅಷ್ಟು ಮಾತ್ರವಲ್ಲ, ಅವಳ ಪ್ರತಿಯೊಂದು ರೂಪವೂ ಹೊಸ ಜೀವದ ಸಷ್ಟಿಕ್ರಿಯೆಯನ್ನು ನಡೆಸುತ್ತದೆ. - ೨ ಅಕ್ಟೋಬರ್ ೨೦೧೪, ೦೪:೦೫
  • ಅಹಿಂಸೆಯೂ ಒಂದು ಹಿಂಸೆಯೇ: ಈ ಸಮಾಜ ಶತಮಾನಗಳಿಂದ ಅಹಿಂಸೆಯಲ್ಲೇ ಬದುಕುತ್ತಿದೆ. ಅಹಿಂಸಾ ಕಾರ್ಯಗಳೆಲ್ಲ ಅಹಿಂಸೆಯಲ್ಲ. ಎಲ್ಲ ಅಹಿಂಸಾ ಹೋರಾಟಗಳ ಹಿಂದೆ ಎಲ್ಲ ರೀತಿಯ ವ್ಯವಸ್ಥಿತ ಹಿಂಸೆ ಅಡಗಿರುತ್ತದೆ. - ೧ ಅಕ್ಟೋಬರ್ ೨೦೧೪, ೦೪:೦೧
  • ಕಾಲ ಕೂಡಿ ಬರುವವರೆಗೆ ಕಾಯಬೇಕು: ರಬಿಯಾ ಸೂಫಿ ಸಂಸಂತರಲ್ಲಿ ಒಬ್ಬರು. ಬದುಕನ್ನೇ ದೇವರಿಗೆ ಅರ್ಪಿಸಿದ ಮಹಾ ಮಹಿಳೆ. ಬಡತನ, ತ್ಯಾಗ, ದೇವರೆಡೆಗಿನ ಅಸೀಮ ಪ್ರೀತಿ ಇವೆಲ್ಲವೂ ಆಕೆಯ ಬದುಕಿನಲ್ಲಿ ಹಾಸುಹೊಕ್ಕಾಗಿದ್ದವು. - ಅಕ್ಟೋಬರ್ ೨೦೧೪, ೦೪:೦೦
  • ನಮ್ಮದೇ ದಾರಿ, ನಮ್ಮದೇ ಹೆಜ್ಜೆ: ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ, ಅದು ಬೇರಾರ ಕೈಯಲ್ಲೂ ಇಲ್ಲ. ಬೇರೆ ಯಾರೂ ನಿಮ್ಮ ಬದುಕನ್ನು ರೂಪಿಸಲಾರರು. ನೀವು ಯಾರನ್ನೂ ನಂಬಿಕೊಳ್ಳಬೇಡಿ. - ೬ ಅಕ್ಟೋಬರ್ ೨೦೧೪, ೦೪:೨೦
  • ಮಕ್ಕಳೇ ಗುರುಗಳು: ಜ್ಞಾನದ ನಿಜಸ್ಥಿತಿಯನ್ನು ಅರಿತವನಲ್ಲಿ ಮಗುನಲ್ಲಿರುವ ಗುಣಗಳನ್ನೇ ಕಾಣುತ್ತೇವೆ. ಅವನಲ್ಲಿ ಅರಿಷಡ್ವರ್ಗಗಳಿರುವುದಿಲ್ಲ. ಭಯ, ಆತಂಕ, ಕಳವಳ, ಕೋಪ, ತಾಪ, ವಂಚನೆ, ಮತ್ಸರಾದಿಗಳಾವುದೂ ಇರುವುದಿಲ್ಲ. - ೧೩ ಅಕ್ಟೋಬರ್ ೨೦೧೪, ೦೪:
  • ಯೋಗ ಧರ್ಮವಲ್ಲ: ಧರ್ಮದ ಕುರಿತ ನನ್ನ ಚಿಂತನೆಗಳು ನಿಮಗಿಂತ ಭಿನ್ನ. ಯೋಗ ಒಂದು ಧರ್ಮವಲ್ಲ, ಬದಲಿಗೆ ವಿದ್ಯೆ, ಎಂದರೆ ಜ್ಞಾನ. ಮನುಷ್ಯನ ಚೈತನ್ಯವನ್ನು ವರ್ಧಿಸುವುದೇ ಯೋಗದ ಉದ್ದೇಶ. - ೮ ಅಕ್ಟೋಬರ್ ೨೦೧೪, ೦೪:೦೦
  • ಸತತ ಗೆಲುವಿನ ರಹಸ್ಯ: ಏಷ್ಯಾಡ್ ಕ್ರೀಡಾಕೂಟದಲ್ಲಿ ಭಾರತ ಬಂಗಾರವೂ ಸೇರಿದಂತೆ ಹಲವು ಪದಕಗಳನ್ನು ತನ್ನ ಕೊರಳಿಗೆ ಹಾಕಿಕೊಂಡಿದೆ. ಕ್ರೀಡಾಪ್ರೇಮಿಗಳಿಗಂತೂ ತಾವೇ ಪದಕ ಗೆದ್ದಷ್ಟು ಖುಷಿಯಾ. - ೯ ಅಕ್ಟೋಬರ್ ೨೦೧೪, ೦೪:೦೦
  • ನಿಷ್ಕಲ್ಮಷ ಪ್ರೀತಿ: ಶರದ್ ಪೂರ್ಣಿಮೆ ಎಂದರೆ ದೈವಿಕ ಪ್ರೀತಿಯ ಸಂಭ್ರಮಾಚರಣೆ. ಈ ಹುಣ್ಣಿಮೆಯ ಬಗ್ಗೆ ಭಾಗವತದಲ್ಲಿ ಅನೇಕ ಕತೆಗಳಿವೆ. ಕೃಷ್ಣನ ವೇಣುನಾದದಿಂದ ಶಿವನ ಧ್ಯಾನ ಒಡೆಯಿತು. ನಾದದ ಜಾಡು ಹಿಡಿದ ಶಿವ ವೃಂದಾವನವನ್ನು ತಲುಪುತ್ತಾನೆ. - ೧೦ ಅಕ್ಟೋಬರ್ ೨೦೧೪, ೦೪:
  • ಯಾವುದೂ ಲಯವಾಗುವುದಿಲ್ಲ: ನೀರಿನಲ್ಲಿ ರೂಪುಗೊಳ್ಳುವ ಸುಳಿ ನೀರಿನಲ್ಲೇ ಲೀನವಾದಾಗ ಅಲ್ಲಿ ಯಾವುದೂ ನಾಶವಾಗುವುದಿಲ್ಲ. ಮೃತ ಬ್ರಹ್ಮ, ಶರೀರವೆಂಬ ಬ್ರಹ್ಮನನ್ನು ಆವರಿಸಿದಾಗ ಅಲ್ಲಿ ಲಯವಾಗುವುದೂ ಏನೂ ಇಲ್ಲ. ಅದೇ ರೀತಿ ಬ್ರಹ್ಮನೂ ಕೂಡ ನಿಶ್ಚಲ ಮತ್ತು ಅವಿಶ್ರಾಂತ. - ೭ ಅಕ್ಟೋಬರ್ ೨೦೧೪, ೦೪:೦೦
  • ಅತ್ಯಾಚಾರ ನಡೆಯುವುದೇಕೆ?: ಅತ್ಯಾಚಾರ ನನ್ನಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಅದರ ಹಿಂದಿನ ಉದ್ದೇಶವೇನು? ಅದರಿಂದ ಅವರಿಗೆ ಏನು ಸಿಗುತ್ತದೆ? ಹತಾಶೆ ಮತ್ತು ಕೋಪಗಳನ್ನು ಹೊರಗೆಡಹುವ ಪರಿಯೇ ಅದು? - ೧೧ ಅಕ್ಟೋಬರ್ ೨೦೧೪, ೦೪:೦೦
  • ಕೋಳಿ ಮೊದಲೋ, ಮೊಟ್ಟೆ ಮೊದಲೋ?: ಕೋಳಿ ಮೊದಲೋ ಮೊಟ್ಟೆ ಮೊದಲೋ? ಈ ಪ್ರಶ್ನೆಯೇ ಒಂದು ವರ್ತುಲ. ಅದೇಕೆಂದರೆ ಕೋಳಿ ಮತ್ತು ಮೊಟ್ಟೆ ಎರಡಲ್ಲ. ಕೋಳಿ ಮತ್ತು ಮೊಟ್ಟೆ ಒಂದೇ ವಸ್ತುವಿನ ಎರಡು ಅವಸ್ಥೆಗಳು. - ೧೪ ಅಕ್ಟೋಬರ್ ೨೦೧೪, ೦೪:೦೦
  • ಆತ್ಮೋನ್ನತಿಯ ಹಾದಿಯಲ್ಲಿ..: ಆತ್ಮೋನ್ನತಿಯ ಹಾದಿಯಲ್ಲಿ ಕೆಲವು ನೀತಿ ನಿಯಮಗಳನ್ನು ತಪ್ಪದೇ ಅನುಸರಿ–ಸ–ಬೇಕು. ಅವುಗಳಲ್ಲಿ ಅಹಿಂಸೆ, ತಪಸ್ಸು, ಆಸೆ ನಿಗ್ರಹ, ದಾನಗಳು ಪ್ರಮುಖ–ವಾದವು–ಗಳು. - ೧೫ ಅಕ್ಟೋಬರ್ ೨೦೧೪, ೦೪:
  • ಕರ್ಮ ಮತ್ತು ವೇತನ: ವೇತನದ ಬಗ್ಗೆ ಸತ್ಯ ನಾದೇಳ್ಳಾ ಅನಿಸಿಕೆ ಸರಿಯೇ? ವೇತನ ಏರಿಕೆಯನ್ನು ನಮ್ಮ ಪೂರ್ವಾರ್ಜಿತ ಕರ್ಮದೊಂದಿಗೆ ಬೆಸೆದ ನಾದೇಳ್ಳ ಅವರ ಹೇಳಿಕೆಯನ್ನು ಹೀಗೆ ಅರ್ಥೈಸಿಕೊಳ್ಳಬಹುದು. - ೧೬ ಅಕ್ಟೋಬರ್ , ೦೪:೫೦
  • ಮನಃಶುದ್ಧಿಯಿರಲಿ: ಸ್ವಚ್ಛ ಪರಿಸರ ಶಿಸ್ತಿನ, ಸೌಹಾರ್ದತೆಯ ಮತ್ತು ಪಾವಿತ್ರ್ಯದ ಪ್ರತೀಕವಾಗಿ–ರುತ್ತದೆ. ಇಂಥ ಪರಿಸರವು ಕ್ರಿಯಾಶೀಲ ಮತ್ತು ರಚನಾತ್ಮಕ ಚಟುವಟಿಕೆಗಳಿಗೆ ಪೂರಕ–ವಾ–ಗಿರುತ್ತದೆ. ಹಾಗಾಗಿಯೇ ‘ಸ್ವಚ್ಛತೆಯು ದೇವರ ಪ್ರತಿರೂಪ’ ಎಂದೇ ಪರಿಗಣಿಸಲಾಗುತ್ತದೆ. - ೧೮ ಅಕ್ಟೋಬರ್ ೨೦೧೪, ೦೪:೪೫
  • ನಾನು-ನಾನತ್ವಗಳ ವ್ಯತ್ಯಾಸ: ಪ್ರಕೃತಿ ತುಂಬೆಲ್ಲ ಪ್ರೀತಿಯೇ ತುಂಬಿಕೊಂಡಿದೆ. ಪ್ರೀತಿಸುವುದು ಎಲ್ಲ ಜೀವಿಗಳ ಹುಟ್ಟು ಗುಣ. ಆದರೆ, ಅಹಂ ಎನ್ನುವುದು ಇದರ ಅಭಿವ್ಯಕ್ತಿಗೆ ಅಡ್ಡ ಬರುತ್ತದೆ. ಅಹಂ ನಮ್ಮ ಸೃಷ್ಟಿಯೇ ಹೊರತು ದೇವರದಲ್ಲ. ನಿರಾಕರಣೆಯಿಂದ ಮಾತ್ರ ಇದನ್ನು ನಿವಾರಿಸಬಹುದು. - ೨೧ ಅಕ್ಟೋಬರ್ ೨೦೧೪, ೦೪:೦೦
  • ಭಯದಿಂದ ಬಿಡುಗಡೆ: ಮನಸ್ಸು ತನ್ನೊಳಗಿರುವ ಎಲ್ಲ ಭಯವನ್ನೂ ನಿರ್ನಾಮ ಮಾಡಿಕೊಂಡುಬಿಡು–ವುದು ಸಾಧ್ಯವೇ? ಯಾವುದೇ ಬಗೆಯ ಭಯವಾಗಿರಲಿ, ಅದು ಭ್ರಮೆಗಳನ್ನು ಹುಟ್ಟಿಹಾಕುತ್ತದೆ. - ೧೭ ಅಕ್ಟೋಬರ್ ೨೦೧೪, ೦೪:೨೭
  • ಸಿನ್ ವರ್ಸಸ್ ಕರ್ಮ: ಕ್ರೈಸ್ತ ಧರ್ಮದಲ್ಲಿ ಏಳು ಮಹಾ ಸಿನ್ (ಇದು ಪಾಪಕ್ಕೆ ಸಂವಾದಿಯಲ್ಲ. ಕ್ರಿಶ್ಚಿಯಾನಿಟಿಯಲ್ಲಿ ಇದಕ್ಕೆ ಪಾಪಕ್ಕಿಂತ ಭಿನ್ನ ಅರ್ಥವಿದೆ.)ಗಳಿರುವ ಹಾಗೆ ಹಿಂದೂ ಧರ್ಮದಲ್ಲೂ ಅಭಿಮಾನ, ಈರ್ಷೆ, ಲೋಭ, ಕರ್ಮ, ಕ್ರೋಧ ಇತ್ಯಾದಿ ಪಾಪಗಳಿವೆ. - ೨೨ ಅಕ್ಟೋಬರ್ ೨೦೧೪, ೦೪:೦೦
  • ಅಂತರಂಗದಲಿ ದೀಪದ ಮೊಗ್ಗು: ದೀಪಾವಳಿಯ ರಾತ್ರಿ ವರ್ಷದ ಅತ್ಯಂತ ಕಗ್ಗತ್ತಲ ರಾತ್ರಿ. ಬೆಳಕಿನ ಕುಡಿಯಿಂದ ತಮಸ್ಸನ್ನು ಹೊಡೆದೋಡಿಸುವುದಕ್ಕೆ ಸಕಾಲವೂ ಇದೇ. ಮನಸ್ಸು ಬೆಳಕಿಗಾಗಿ ತುಡಿಯುವುದೂ ಈಗಲೇ. - ೨೪ ಅಕ್ಟೋಬರ್ ೨೦೧೪, ೦೪:೦೦
  • ಪ್ರಕ್ರಿಯೆ ನಿಮ್ಮಿಂದಲೇ ಶುರುವಾಗಲಿ: ‘‘ಯಾವುದೇ ಸ್ಥಿತಿಯನ್ನು ಬದಲಿಸಲಾಗದಿದ್ದರೆ, ಅದರ ಬಗ್ಗೆ ಏಕೆ ಮನಸ್ಸು ಕೆಡಿಸಿಕೊಳ್ಳುತ್ತೀರಿ? ಪರಿಸ್ಥಿತಿ ಬದಲಿಸುವುದು ನಿಮ್ಮ ಕೈಯಲ್ಲಿಲ್ಲದಿದ್ದಾಗ ಆ ಬಗ್ಗೆ ತಲೆಕೆಡಿಸಿಕೊಳ್ಳುವುದರಿಂದ ಪ್ರಯೋಜನವೇನು?’’ ಎನ್ನುತ್ತದೆ ನಾಣ್ಣುಡಿ. ಈ ನೀತಿ ನಾವು ದೈನಂದಿನ ಬದುಕಿನಲ್ಲಿ ಎದುರಿಸುವ ಎಲ್ಲಾ ಘಟನೆಗಳಿಗೂ ಅನ್ವಯ. - ೨೫ ಅಕ್ಟೋಬರ್ ೨೦೧೪, ೦೪:೧೮
  • ಸದ್ಯ ಮತ್ತು ಶಾಶ್ವತ: ವಿವೇಕವುಳ್ಳ ಮನುಷ್ಯರು ಸುಖ, ದುಃಖವೆನ್ನುವುದನ್ನೆಲ್ಲ ಆದ್ಯಂತವಾಗಿ ಪರಿಶೀಲಿಸುತ್ತಾರೆ. ಅವು ಎಲ್ಲ ಮಾನವರಿಗೆ ಬರುತ್ತವೆ ಎಂಬುದು ಗೊತ್ತಿದೆ. ಯೋಗಿಗಪ್ರೀತಿ ಭಯಂಕರ:ಳು ಒಂದು ಮತ್ತೊಂದನ್ನು ಹಿಂಬಾಲಿಸಿ ಅದರಲ್ಲಿ ಐಕ್ಯವಾಗುತ್ತದೆ ಎನ್ನುತ್ತಾರೆ. - ೨೭ ಅಕ್ಟೋಬರ್ ೨೦೧೪, ೦೪:೦೦
  • ಪುಣ್ಯಕ್ಷೇತ್ರವೆಂಬ ಅಧ್ಯಾತ್ಮಿಕ ತಾಣ: ನಾನು ಪುಷ್ಕರ್ ತಲುಪಿದಾಗ ಆಗಸ್ಟ್ ೧೫ರ ಮಧ್ಯರಾತ್ರಿ. ನಾನು ಹತ್ತಿದ್ದ ರೈಲು ಪುಷ್ಕರ್‌ಗೆ ೧೨ ಕಿ.ಮೀ ದೂರವಿದ್ದ ಅಜ್ಮೀರ್‌ನಲ್ಲಿ ನಿಂತಿತು. ನಾಗ್ ಪಹರ್ ಎಂದರೆ ಹಾವುಗಳ ಪರ್ವತ ಅಜ್ಮೀರ್ ಮತ್ತು ಪುಷ್ಕರ್ ಎಂಬ ಪವಿತ್ರ ಕ್ಷೇತ್ರಗಳನ್ನು ಬೇರ್ಪಡಿಸುತ್ತದೆ. - ೨೯ ಅಕ್ಟೋಬರ್ ೨೦೧೪, ೦೪;೫೦
  • ಗೀತೆಯಲ್ಲಿನ ಕಡೆಯ ಸಂದೇಶ: ಕೃಷ್ಣ, ಕುರುಕ್ಷೇತ್ರದಲ್ಲಿ ತನ್ನವರ ವಿರುದ್ಧವೇ ಶಸ್ತ್ರವೆತ್ತಲು ನಿರಾಕರಿಸಿದ ಅರ್ಜುನನಿಗೆ ಗೀತೋಪದೇಶ ಮಾಡುತ್ತಾನೆ. ಗೀತೋಪದೇಶದ ಕಡೆಯ ಅರ್ಜುನನಿಗೆ ಜಿಜ್ಞಾಸೆ ಹುಟ್ಟುತ್ತದೆ. - ೩೧ ಅಕ್ಟೋಬರ್ ೨೦೧೪, ೦೪:೨೬
  • ಪುಣ್ಯಕ್ಷೇತ್ರವೆಂಬ ಅಧ್ಯಾತ್ಮಿಕ ತಾಣ: ನಾನು ಪುಷ್ಕರ್ ತಲುಪಿದಾಗ ಆಗಸ್ಟ್ ೧೫ರ ಮಧ್ಯರಾತ್ರಿ. ನಾನು ಹತ್ತಿದ್ದ ರೈಲು ಪುಷ್ಕರ್‌ಗೆ ೧೨ ಕಿ.ಮೀ ದೂರವಿದ್ದ ಅಜ್ಮೀರ್‌ನಲ್ಲಿ ನಿಂತಿತು. ನಾಗ್ ಪಹರ್ ಎಂದರೆ ಹಾವುಗಳ ಪರ್ವತ ಅಜ್ಮೀರ್ ಮತ್ತು ಪುಷ್ಕರ್ ಎಂಬ ಪವಿತ್ರ ಕ್ಷೇತ್ರಗಳನ್ನು ಬೇರ್ಪಡಿಸುತ್ತದೆ. - ೨೯ ಅಕ್ಟೋಬರ್ ೨೦೧೪, ೦೪:೫೦
  • ಬಾಹ್ಯ ಮತ್ತು ಆಂತರಿಕ ಜಗತ್ತು: ಖಾದಿ ಎಂಬುದು ಬರಿ ಬಟ್ಟೆಯಲ್ಲ. ಅದೊಂದು ಆಧ್ಯಾತ್ಮಿಕ, ರಾಜಕೀಯ ಮತ್ತು ಐತಿಹಾಸಿಕ ಸಂಕೇತ. ಗಾಂಧಿ ನೇಯ್ಗೆಯನ್ನು ಕೇವಲ ಒಂದು ಕೆಲಸವನ್ನಾಗಿ ನೋಡ–ಲಿಲ್ಲ. - ೩೦ ಅಕ್ಟೋಬರ್ ೨೦೧೪, ೦೪:೨೮
  • ಬುದ್ಧತ್ವ ಅಂದರೆ ಪೂರ್ಣತ್ವ: ನಾವು ಧ್ಯಾನವನ್ನು ಪ್ರತಿದಿನ ಮಾಡಬೇಕು. ಎಲ್ಲಾದರೂ, ಹೇಗಾದರೂ, ಪ್ರಕೃತಿಯಲ್ಲಾಗಲಿ ಸಾಮೂಹಿಕವಾಗಿ ಆಗಲಿ, ಪಿರಮಿಡ್‌ನಲ್ಲಾಗಲಿ ಹಾಗೂ ಹುಣ್ಣಿಮೆ ದಿನದಂದಾಗಲಿ ಮಾಡಬೇಕು. - ೧ ನವಂಬರ್ ೨೦೧೪, ೦೪:೩೯
  • ಕೋಪಕ್ಕೆ ಮದ್ದು: ಅಲ್ಲಿಯವರೆಗೆ ಸುಗಮವಾಗಿ ಸಾಗುತ್ತಿದ್ದ ಟ್ರಾಫಿಕ್ ಹಟಾತ್ ಸ್ಥಗಿತಗೊಳ್ಳು–ತ್ತದೆ. ಹತ್ತು, ಹದಿನೈದು ನಿಮಿಷ ಯಾವುದೇ ಚಲನೆಯಿಲ್ಲ. ಯಾರೋ ಅಡ್ಡಿಪಡಿಸಿದ್ದರಿಂದ ಹೊರ ಹೋಗುವ ದಾರಿಯನ್ನು ಕಳೆದುಕೊಳ್ಳುತ್ತೇವೆ. - ೪ ನವಂಬರ್ ೨೦೧೪, ೦೪:೩೯
  • ನಾನಕರ ಉದಾರವಾದ: ಕೀರ್ ಕಾರ್ಣಿ- ಬದುಕಿಗಾಗಿ ವೃತ್ತಿ, ನಾಮ್ ಜಾಪ್ನ- ದೇವರ ನಾಮಸ್ಮರಣೆ ಮತ್ತು ವಂದ್ ಚಕ್ನಾ- ತಮ್ಮಲ್ಲಿರುವುದನ್ನು ಬೇರೆಯವರೊಂದಿಗೆ ಹಂಚಿಕೊಂಡು ಜೀವನ ನಡೆಸುವುದು ಇವು ಗುರುನಾನಕರ ಚಿಂತನೆ ಮತ್ತು ದರ್ಶನಗಳು. - ೬ ನವಂಬರ್ ೨೦೧೪, ೦೪:೦೧
  • ಹೃದಯ ಸಾಮ್ರಾಜ್ಯ: ನಮ್ಮಲ್ಲೊಂದು ಭಾವನೆ ಇದೆ. ಎಲ್ಲವೂ ಹೃದಯಕ್ಕೆ ಸಂಬಂಧಿಸಿದ್ದು. ಅದುವೇ ಎಲ್ಲಾ ಕ್ರಿಯಾತ್ಮಕ ಚಟುವಟಿಕೆಗಳಿಗೆ ಸಿಂಹಾಸನ. ನಮ್ಮ ಹೃದ–ುದಲ್ಲೊಂದು ಜ್ಯೋತಿ ಇದೆ. - ೫ ನವಂಬರ್ ೨೦೧೪, ೦೪:೫೩
  • ಗೌರವಿಸುವ ಕಲೆ ಕಳೆದು ಹೋಗಿದೆ: ಮತ್ತೊಬ್ಬರಿಗೆ ಕೃತಜ್ಞತೆ ಸಲ್ಲಿಸುವುದು ಮಾನವ ಮಾಡಬಹುದಾದ ಅತ್ಯಂತ ಶ್ರೇಷ್ಠ ಕೆಲಸಗಳಲ್ಲಿ ಒಂದು. ಅದು ಪ್ರತಿಯೊಬ್ಬರಲ್ಲೂ ಇರಲೇಬೇಕಾದ ಕನಿಷ್ಠ ಸೌಜನ್ಯವೂ ಹೌದು. - ೭ ನವಂಬರ್ ೨೦೧೪, ೦೪:೦೭
  • ಸೃಜನಶೀಲ ಕಾರ್ಯಗಳು: ಪ್ರತಿಯೊಬ್ಬರೂ ತಮಗೆ ಪ್ರಕೃತಿದತ್ತವಾದ ಒಂಟಿತನವನ್ನು ಅಥವಾ ಬೆಳವಣಿಗೆಯ ಹಿನ್ನೆಲೆಯಿಂದ ಬಂದ ಸಂಕೀರ್ಣ ಕೀಳರಿಮೆ ಮುಂತಾದ ನಕಾರಾತ್ಮಕ ಜೀವನಧೋರಣೆಗಳನ್ನು ಕಳೆದುಕೊಳ್ಳುವುದಕ್ಕೆ ಸೃಜನಶೀಲ ಕಾರ್ಯಗಳನ್ನು ಮಾಡುವುದು ಅತ್ಯಂತ ಉಪಯುಕ್ತವಾದ ಒಂದು ವಿಧಾನ. - ೧೦ ನವಂಬರ್ ೨೦೧೪, ೦೪:೪೭
  • ಅಧ್ಯಾತ್ಮಿಕ ತಾಣ: ನಾನು ಪುಷ್ಕರ್ ತಲುಪಿದಾಗ ಆಗಸ್ಟ್ ೧೫ರ ಮಧ್ಯರಾತ್ರಿ. ನಾನು ಹತ್ತಿದ್ದ ರೈಲು ಪುಷ್ಕರ್‌ಗೆ ೧೨ ಕಿ.ಮೀ ದೂರವಿದ್ದ ಅಜ್ಮೀರ್‌ನಲ್ಲಿ ನಿಂತಿತು. ನಾಗ್ ಪಹರ್ ಎಂದರೆ ಹಾವುಗಳ ಪರ್ವತ ಅಜ್ಮೀರ್ ಮತ್ತು ಪುಷ್ಕರ್ ಎಂಬ ಪವಿತ್ರ ಕ್ಷೇತ್ರಗಳನ್ನು ಬೇರ್ಪಡಿಸುತ್ತದೆ. - ೨೯ ಅಕ್ಟೋಬರ್ ೨೦೧೪, ೦೪:೫೦
  • ನಿರೀಕ್ಷೆಯ ಗುಳ್ಳೆ ಹೊಡೆದಾಗ...: ನಾವೆಲ್ಲ, ನಾವೇ ರೂಪಿಸಿಕೊಂಡ ಗುಳ್ಳೆಗಳಲ್ಲಿ ಬದುಕುತ್ತಿರುತ್ತೇವೆ. ನಮ್ಮ ನೆನಪು, ನಿರೀಕ್ಷೆಗಳೆಂಬ ಗುಳ್ಳೆ ಹೊಡೆದಾಗ ಬದುಕನ್ನು ನೋಡುವ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ಜೀವನದ ನಿಜವಾದ ಅರ್ಥ ತಿಳಿಯುವುದೇ ಆಗ. - ೧೧ ನವಂಬರ್ ೨೦೧೪, ೦೪:೦೦
  • ಪುಣ್ಯಕ್ಷೇತ್ರವೆಂಬ ಅಧ್ಯಾತ್ಮಿಕ ತಾಣ: ನಾನು ಪುಷ್ಕರ್ ತಲುಪಿದಾಗ ಆಗಸ್ಟ್ ೧೫ರ ಮಧ್ಯರಾತ್ರಿ. ನಾನು ಹತ್ತಿದ್ದ ರೈಲು ಪುಷ್ಕರ್‌ಗೆ ೧೨ ಕಿ.ಮೀ ದೂರವಿದ್ದ ಅಜ್ಮೀರ್‌ನಲ್ಲಿ ನಿಂತಿತು. ನಾಗ್ ಪಹರ್ ಎಂದರೆ ಹಾವುಗಳ ಪರ್ವತ ಅಜ್ಮೀರ್ ಮತ್ತು ಪುಷ್ಕರ್ ಎಂಬ ಪವಿತ್ರ ಕ್ಷೇತ್ರಗಳನ್ನು ಬ. - ೨೯ ಅಕ್ಟೋಬರ್ ೨೦೧೪, ೦೪
  • ಮಕ್ಕಳನ್ನು ಮಕ್ಕಳಂತೆ ಇರಲು ಬಿಡಿ: ಮಕ್ಕಳು ಪ್ರೌಢರಲ್ಲ. ಅವರನ್ನು ಪ್ರೌಢರಂ ನಡೆದುಕೊಳ್ಳುವಂತೆ ನಿರೀಕ್ಷಿಸುವುದೂ ಸಲ್ಲ. ಮಕ್ಕಳಿಗೆ ಸಂಪೂರ್ಣವಾಗಿ ವಿಭಿನ್ನವಾದ ದೃಷ್ಟಿಕೋನವಿರುತ್ತದೆ. ಪ್ರೌ ಅನಿಸಿಕೆಗಳನ್ನು ಹೇರುವ ಅಗತ್ಯವಿಲ್. ಅವ ಮಕ ಇರ ಬ. - ೧ ನ , ೦
  • ಕಣ ನಡೆಯುವ ಮೊದಲು. ಮನಸ್ಸಿನ ಗುಣದ ಬಗ್ಗೆ ಚಿಂತನೆ ನಡೆಸುವುದು ಅಗತ್ಯ ಎನ್ನುತ್ತಾರೆ ಗಣೇಶಪುರಿಯ ಸಂತ ಸ್ವಾಮಿ ಮುಕ್ತಾನಂದ. - ೧೪ ನವಂಬರ್ ೨೦೧೪, ೦೪:೦೦
  • ನಾನಕರ ಉದಾರವಾದ: ಕೀರ್ತ್ ಕಾರ್ಣಿ- ಬದುಕಿಗಾಗಿ ವೃತ್ತಿ, ನಾಮ್ ಜಾಪ್ನ- ದೇವರ ನಾಮಸ್ಮರಣೆ ಮತ್ತು ವಂದ್ ಚಕ್ನಾ- ತಮ್ಮಲ್ಲಿರುವುದನ್ನು ಬೇರೆಯವರೊಂದಿಗೆ ಹಂಚಿಕೊಂಡು ಜೀವನ ನಡೆಸುವುದು ಇವು ಗುರುನಾನಕರ ಚಿಂತನೆ ಮತ್ತು ದರ್ಶನಗಳ. - ೬ ನವಂಬರ್ ೨೦೧೪, ೦೪:೦೧
  • ತಪ್ಪು ಮಾಡುವುದು ಒಳ್ಳೆಯದೆ...: ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ತಪ್ಪು ಮಾಡಿಯೇ ಮಾಡುತ್ತಾರೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ವಿಚಾರ. ಇದು ಮನುಷ್ಯನ ಮೂಲಭೂತ ಗು. ತಪ್ಪು ಎರಡು ರೀತಿಯಲ್ಲಿರುತ್ತದೆ. ಮೊದಲನೆಯದು ಕೇವಲ ತಪ್ಪು ಅಷ್ಟೆ. ಆದರೆ ಮತ್ತೊಂದು ರೀತಿಯ ತಪ್ಪೂ ಇದೆ. ಅದು ‘ತಪ್ಪಿನ ನಂತರದ ತಪ್ಪು’ ಎಂದು ಹೇಳಬಹುದು. - ೧೨ ನವಂಬರ್ ೨೦೧೪, ೦೪:೦೦
  • ಶಾಂತಿ ಸಿಗುವುದೆಲ್ಲಿ?: ಶಾಂತಿ ಮತ್ತು ಸಂತೋಷಕ್ಕಾಗಿ ಮನುಷ್ಯ ಇನ್ನಿಲ್ಲದ ಕಸರತ್ತು ನಡೆಸುತ್ತಾನೆ. ಪೂಜೆ, ಪುನಸ್ಕಾರ, ಹೋಮ, ಹವನ, ವ್ರತ ಮುಂತಾದ ಕ್ರಿಯೆಗಳಲ್ಲಿ ತೊಡಗುತ್ತಾನೆ. - ೧೭ ಡಿಸೆಂಬರ್ ೨೦೧೪, ೦:೦೯
  • ಶಿಕ್ಷಕರನ್ನು ಕರೆತನ್ನಿ: ಇದು ಶಿಕ್ಷಕರೊಬ್ಬರ ಕಥೆ. ಹಾಗೆಯೇ ವಿದ್ಯಾರ್ಥಿಗಳದ್ದೂ ಕೂಡ. ರಾಜಸ್ಥಾನದ ಕುಗ್ರಾಮ ಸಿಕರ್. ಅಲ್ಲೊಂದು ಪುಟ್ಟ ಸರಕಾರಿ ಶಾಲೆ. ಹೆಚ್ಚಿನ ಸವಲತ್ತುಗಳೇನಿರಲಿಲ್ಲ, ಆಸಕ್ತಿಯಿಂದ ಓದುವ ಮಕ್ಕಳಿಗೆ ಕೊರತೆ ಇರಲಿಲ್ಲ. ಆದರೆ ಮಕ್ಕಳಿಗೆ ಪಾಠ ಹೇಳಿಕೊಡಲು ಶಿಕ್ಷಕರು ಬರುತ್ತಲೇ ಇರಲಿಲ್ಲ. - ೨೦ ಡಿಸೆಂಬರ್ ೨೦೧೪, ೦೪:೦೦
  • ಅನುಭವ ಗುರುವಾಗುವುದು ಯಾವಾಗ?: ಅನುಭವ... ಹಾಗೆಂದರೇನು? ಇಂದ್ರಿಯಗಳಿಗೆ ತಾಗುವುದೆಲ್ಲವೂ ಅನುಭವವಾಗುತ್ತದೆಯೇ? ನನಗೆ ಅದರ ಅನುಭವ ಇಲ್ಲ ಎಂಬ ಮಾತಿನ ಅರ್ಥವೇನು? ಕಂಡೂ, ಕೇಳಿಯೂ, ಮಾಡಿಯೂ ಅದು ನಮ್ಮ ಅನುಭವದ ಭಾಗವಾಗಲಿಲ್ಲ ಎಂದರೆ ಅಂತಹ ಸ್ಥಿತ ಏನೆನ್ನುವುದು? - ೨೪ ಡಿಸೆಂಬರ್ ೨೦೧೪, ೦೪:೪೦
  • ಹೃದಯ ಸಮುದ್ರದಲ್ಲಿದೆ ಜ್ಞಾನದ ಮುತ್ತು: ಭಾರತದಲ್ಲಿ ಅನೇಕ ಶತಮಾನಗಳಿಂದ ಹಿಂದೂಗಳು, ಕ್ರೈಸ್ತರು, ಮುಸ್ಲಿಮರು, ಸಿಖ್ಖರು, ಪಾರಸಿ ಹಾಗೂ ಸೂಫಿಗಳು ಸೌಹಾರ್ದಯುತವಾಗಿ ಬದುಕಿದ್ದಾರೆ. - ೨೬ ಡಿಸೆಂಬರ್ ೨೦೧೪, ೦೪:೫೪
  • ಪರಿಕಲ್ಪನೆಗಳ ಸುಳಿಯಲ್ಲಿ...: ನೀವು ಪ್ರವಚನ ಕೇಳುವಾಗ ಅವರು ಹೇಳುವ ಯಾವುದೇ ಪರಿಕಲ್ಪನೆಯನ್ನು ಸೂಕ್ಷ್ಮವಾಗಿ ಗ್ರಹಿಸಿ. ಆಗ, ಅದರ ಪೂರ್ಣ ಚಿತ್ರಣವನ್ನು ನೀವು ಕಟ್ಟಿಕೊಳ್ಳಲು ಸಾಧ್ಯ. ಆಗಷ್ಟೇ, ಪ್ರವಚನಕಾರ ಹೇಳುವ ‘ಹೊಸತನ’ವನ್ನು ನೀವು ಅನುಭವಿಸುತ್ತೀರಿ. - ೧೬ ಡಿಸೆಂಬರ್ ೨೦೧೪, ೦೪:೦೦
  • ನಕಲಿ ಬಾಬಾಗಳು ಮತ್ತು ನೈಜ ಗುರುಗಳು: ಗುರುವೆಂದರೆ ಶಕ್ತಿ, ತೇಜಸ್ಸು. ಗುರುವು ತನ್ನ ಜ್ಞಾನವನ್ನು ಹಂಚುತ್ತಾನೆಯೇ ಹೊರತು ಮಾರುವುದಿಲ್ಲ. ನಕಲಿ ಬಾಬಾಗಳು ಲೌಕಿಕ ಬಂಧನದಲ್ಲಿ ನಿಮ್ಮನ್ನು ಕಟ್ಟಿಹಾಕಿದರೆ ನೈಜ ಗುರು ನಿಮ್ಮನ್ನು ಬಂಧಮುಕ್ತಗೊಳಿಸಿ ಆಧ್ಯಾತ್ಮಿಕ ಹಾದಿಯಲ್ಲಿ ಔನತ್ಯಕ್ಕೆ ಕರೆದೊಯ್ಯುತ್ತಾನೆ. - ೧೯ ಡಿಸೆಂಬರ್ ೨೦೧೪, ೦೪:೦೦
  • ನಾವು ನಾವಷ್ಟೆ ಆಗಬೇಕಾಗಿದೆ: ನಾವು ಅಡುಗೆ ಅಸಲಿ (ಅಥೆಂಟಿಕ್) ಎಂದಾಗ ಅದು ತನ್ನ ಮೂಲ ಸೊಗಡನ್ನು ಉಳಿಸಿಕೊಂಡಿದೆ ಎಂದೇ ಅರ್ಥೈಸುತ್ತೇವೆ. ಆದರೆ ತದ್ವಿರುದ್ಧವಾದದ್ದು ತೋರಿಕೆಯದ್ದು. ಮನುಷ್ಯರ ನಡವಳಿಕೆಗಳಿಂದ ಇದಕ್ಕೆ ಸಾಮ್ಯಗಳನ್ನು ಹುಡುಕಿದಾಗ ಹಲವು ಒಳನೋಟಗಳು ತಾನೇತಾನಾಗಿ ಹೊಳೆಯತೊಡಗುತ್ತವೆ. - ೧೮ ಡಿಸೆಂಬರ್ ೨೦೧೪, ೦೪:೫೯
  • ಎಲ್ಲವೂ ಬ್ರಹ್ಮ: ‘ತಂದೆ ಮತ್ತು ನಾನು ಒಂದೇ’ ಎಂದ ಜೀಸಸ್, ಆ ಮೂಲಕ ಪರಮಾರ್ಥ ಅನುಭಾವ ಮತ್ತು ಎಲ್ಲವೂ ಒಂದೇ ಎಂಬ ಸಂದೇಶ ಸಾರಿದ. ಭಗವದ್ಗೀತೆ ಹೇಳುವುದೂ ಇದನ್ನೇ. - ೨೫ ಡಿಸೆಂಬರ್ ೨೦೧೪, ೦೪:೨೬
  • ನಿನಗೆ ನೀನೇ ಗುರು: ಸತ್ಯವು ದೂರವೂ ಇಲ್ಲ, ಹತ್ತಿರವೂ ಇಲ್ಲ, ನಿಮ್ಮೊಳಗೇ ಅಡಕವಾಗಿರುವಂಥದ್ದು ಹಾಗೂ ಚಿರಂತನವಾಗಿರುವಂಥದ್ದು. ಆನಂದ ಸಾಮ್ರಾಜ್ಯದ ಬೀಗದ ಕೈ ನಿಮ್ಮೊಳಗೇ ಶಾಶ್ವತವಾಗಿದೆ. - ೨೨ ಡಿಸೆಂಬರ್ ೨೦೧೪, ೦೪:೪೪
  • ಜ್ಞಾನಮಾರ್ಗವೇ ಪೂರ್ಣತ್ವದ ಮಾರ್ಗ: ಎಲ್ಲ ಮನುಷ್ಯರೂ ಸಂತೃಪ್ತಿಗಾಗಿ ಹಂಬಲಿಸುತ್ತಾರೆ. ಸಂತೃಪ್ತಿ ಅಥವಾ ಆನಂದವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಣುತ್ತಾರೆ. - ೨೩ ಡಿಸೆಂಬರ್ ೨೦೧೪, ೦೪:೪೭
  • ಪೂರ್ವಜರಿಂದಲೂ ಮನೋರೋಗ?: ನೇಚರ್ ಮತ್ತು ನ್ಯೂಸೈಂಟಿಸ್ಟ್ ಪತ್ರಿಕೆಗಳಲ್ಲಿ ಇತ್ತೀಚೆಗೆ ವರದಿಯಾದ ನರವಿಜ್ಞಾನ ಸಂಶೋಧನೆಯೊಂದರೆ ಪ್ರಕಾರ, ಇಲಿಗಳ ಮೇಲೆ ನಡೆದ ಒಂದು ಸಂಶೋಧನೆಯಲ್ಲಿ, ಕೆಲವು ಅನುಭವಗಳು ಮುಂದಿನ ತಲೆಮಾರುಗಳನ್ನೂ ಪ್ರಭಾವಿಸುವುದು ಸಾಬೀತಾಗಿದೆ. - ೩ ಫೆಬ್ರವರಿ ೨೦೧೫, ೦೪:೦೦
  • ಪ್ರೀತಿ ಹರಿಯಲು ಅಹಂ ಬಿಡಿ: ಪ್ರೀತಿಸುವುದು ಎಲ್ಲ ಜೀವಿಗಳ ಹುಟ್ಟು ಗುಣ. ಆದರೆ, ಎಷ್ಟೋ ವೇಳೆ, ಅಹಂ ಎನ್ನುವುದು ಪ್ರೀತಿ ತೋರಿಸುವುದಕ್ಕೆ ಅಡ್ಡಿಯಾಗುತ್ತದೆ. ಅಹಂ ನಮ್ಮ ಸೃಷ್ಟಿಯೇ ಹೊರತು ದೇವರದಲ್ಲ. ನಿರಾಕರಣೆಯಿಂದ ಮಾತ್ರ ಇದನ್ನು ನಿವಾರಿಸ–ಬ–ಹುದು. ನಶ್ವರ ಮತ್ತು ಶಾಶ್ವತಗಳ ನಡುವಿನ ವ್ಯತ್ಯಾಸ ತಿಳಿದಾಗ ಮಾತ್ರ ಅಹಂ ಅನ್ನು ಬಿಡಬಹುದು. - ೪ ಫೆಬ್ರವರಿ ೨೦೧೫, ೦೪:೨೮
  • ಬದುಕೆಂದರೆ ಎಲ್ಲ ಸಂಬಂಧಗಳ ಸಮಾಗಮ: ಬದುಕನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದನ್ನು ನಿರ್ವಹಿಸುವುದು ಎರಡೂ ಕಷ್ಟಸಾಧ್ಯ. ಜನನದಿಂದ ಮರಣದವರೆಗಿನ ಪಯಣವನ್ನು ಸುಗಮವಾಗಿ ಸಾಗಿಸಲು ಸಂಬಂಧಗಳ ಸಹಾಯ ಬೇಕು. - ೭ ಫೆಬ್ರವರಿ ೨೦೧೫, ೦೪:೪೧
  • ಯಾವುದು ಮೌಲ್ಯ: ಯಾವುದು ಮೌಲ್ಯ? ಯಾವುದು ಅಪಮೌಲ್ಯ? ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು? ಮೌಲ್ಯವೆಂದರೆ ಅಂಕುಶವೇ? ಅಥವಾ ಹೀಗೇ ಇ––ಬೇಕೆಂದು ಹೇಳುವ ವಿಧೇಯಕವೇ? - ೫ ಫೆಬ್ರವರಿ ೨೦೧೫, ೦೯:೫೭
  • ನೆಲದ ನಂಟು: ಇತ್ತೀಚೆಗೆ ಬಸ್ತಾರ್‌ಗೆ ಭೇಟಿ ಕೊಟ್ಟಿದ್ದ ನನ್ನ ಗೆಳೆಯರೊಬ್ಬರು ಹೇಳಿದ ಅಂಶ ಇನ್ನಿಲ್ಲದಂತೆ ಸೆಳೆಯಿತು. ಬುಡಕಟ್ಟು ಜನಾಂಗದ ಮೂವರು ಮಹಿಳೆಯರು ತಲೆ ಮೇಲೆ ದೊಡ್ಡ ಹೊರೆ ಹೊತ್ತು ಟಾರು ರಸ್ತೆ ಬಿಟ್ಟು ಮಣ್ಣ ಹಾದಿಯಲ್ಲಿ ಬರಿಗಾಲಿನಲ್ಲಿ ಬಿರಬಿರನೆ ನಡೆಯುತ್ತಿದ್ದರು. - ೬ ಫೆಬ್ರವರಿ ೨೦೧೫, ೦೪:೫೦
  • ಕೆಟ್ಟ ಆಲೋಚನೆಗಳು ಮತ್ತು ಕೆಲಸಗಳು: ಒಬ್ಬ ಶ್ರೀಮಂತನ ಮನೆಯಲ್ಲಿ ಕೆಲಸದಾಕೆ ಎಷ್ಟೇ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರೂ ಆಕೆಯ ಮನಸ್ಸೆಲ್ಲ ತನ್ನ ಮನೆಯಲ್ಲಿರುವ ತನ್ನ ಮಕ್ಕಳ ಮೇಲೆಯೇ ಇರುತ್ತದೆ. - ೧೨ ಫೆಬ್ರವರಿ ೨೦೧೫, ೦೪:೦೦
  • ಹಿಮಾಲಯದ ಮಹಾತ್ಮರ ಸನ್ನಿಧಿ: ನನ್ನ ಜೀವನದಲ್ಲಿ ನಾನು ಭೇಟಿ ಮಾಡಿದ ಎಲ್ಲ ಸ್ಥಳಗಳಲ್ಲಿ ಗಂಗೋತ್ರಿಗಿಂತಲೂ ಹೆಚ್ಚು ಪರವಶಗೊಳಿಸಿದ ಬೇರೊಂದು ಸ್ಥಳವನ್ನು ನಾನು ಕಂಡಿಲ್ಲ. ಇಲ್ಲಿ ಪರ್ವತ ಶಿಖರಗಳು ನಿರಂತರವಾಗಿ ಹಿಮಾವೃತವಾಗಿರುತ್ತವೆ. - ೨ ಫೆಬ್ರವರಿ ೨೦೧೫, ೦೪:೦೦
  • ಅರಿವಿನಿಂದ ಸಿಗುವ ಆನಂದ: ಅರಿವೇ ಗುರು ಎಂಬುದು ಪ್ರಭುದೇವರ ಮಾತು. ಮಾನವ ಅರಿವಿನ ಆಕಾಂಕ್ಷಿಯಾಗಿರಬೇಕು. ಆಗ ಆತನ ಬದುಕಿಗೊಂದು ದಿವ್ಯತೆ ಮತ್ತು ಭವ್ಯತೆ. ಈ ಅರಿವು ಸತ್ಯದರ್ಶನದ ಅನುಭೂತಿಗೆ ಕಾರಣವಾಗುತ್ತದೆ. ಅರಿವಿನಿಂದ ಮನಸ್ಸು ಯಾವುದರ ಸಹಾಯವೂ ಬೇಕಿಲ್ಲದೆ ಸತ್ಯಪ್ರಜ್ಞೆಯ ಎತ್ತರಕ್ಕೆ ಏರುತ್ತದೆ. - ೯ ಫೆಬ್ರವರಿ ೨೦೧೫, ೦೪:೩೦
  • ಅಧ್ಯಾತ್ಮದ ಹಾದಿ ಕಡುಕಷ್ಟ: ಆತ್ಮ ಸಾಕ್ಷಾತ್ಕಾರ ಎನ್ನುವುದು ಮನುಷ್ಯನ ಆತ್ಯಂತಿಕ ಸಾಧನೆ. ಅದು ಪರಮಾನಂದದ ಪರಮಾವಧಿ. ಆದರೆ ಇದನ್ನು ಸಾಧಿಸುವುದು ಅಷ್ಟು ಸುಲಭದ ಕೆಲಸವಲ್ಲ. - ೧೦ ಫೆಬ್ರವರಿ ೨೦೧೫, ೦೪:೦೦
  • ನಿರಂತರ ಚಿಂತನೆಯಿಂದ ಶಕ್ತಿ ನಷ್ಟ: ನಮ್ಮಲ್ಲಿ ಅನೇಕರು ತಮ್ಮ ಬದುಕನ್ನು ಹೋರಾಟ, ಸಂಘರ್ಷ, ಅದೊಂದು ಬಗೆಯ ಚಡಪಡಿಕೆಯಲ್ಲಿ ಕಳೆಯುತ್ತಾರೆ. ಇವು ನಮ್ಮನ್ನು ಕಾಡುತ್ತಿವೆ ಎಂದಾದರೆ ಅದರಿಂದ ನಮ್ಮ ಶಕ್ತಿ ವ್ಯರ್ಥವಾಗಿ ವ್ಯಯವಾಗುತ್ತಿದೆ ಎಂದೇ ಅರ್ಥ. - ೧೩ ಫೆಬ್ರವರಿ ೨೦೧೫, ೦೪:೦೦
  • ಅಗತ್ಯವೇ ಬೇರೆ, ಆಸೆಯೇ ಬೇರೆ: ನಾವು ಮಾಡುವ ಎಲ್ಲ ಕೆಲಸಗಳ (ಕರ್ಮ) ಹಿಂದೆಯೂ ಎರಡು ಅಂಶಗಳು ಪ್ರಧಾನವಾಗಿ ಕೆಲಸ  ಮಾಡುತ್ತವೆ- ಒಂದು, ನಮ್ಮ ಸ್ವಭಾವ; ಇನ್ನೊಂದು, ನಮ್ಮಲ್ಲಿ ಮೊಳೆಯುವ ಆಸೆ. ಇಂಥ ಸಹಜ  ಸ್ವಭಾವ ಮತ್ತು ನಮ್ಮ ಅಗತ್ಯಗಳ ನಡುವೆಯೇ ನಮ್ಮ ಸುತ್ತಲಿನ ಎಲ್ಲ ಕೆಲಸಗಳೂ  ಆಗುತ್ತಿರುತ್ತವೆ. - 2 ಮೇ 2015, 04:00
  • ಬುದ್ಧನ ಆಧ್ಯಾತ್ಮಿಕ ಮಾರ್ಗ: ಬುದ್ಧನ ಜೀವನದ ಬಗ್ಗೆ ಎಲ್ಲರಿಗೂ ಗೊತ್ತಿರುವಂಥ ಒಂದು ಅಂಶವಿದೆ. ಅದೇನೆಂದರೆ, ಆತ  ತೀವ್ರವಾದ ಆಧ್ಯಾತ್ಮಿಕ ಹಸಿವನ್ನು ಹೊಂದಿದ್ದ ವ್ಯಕ್ತಿ. ಈ ಮೂಲಕ ಆತ ಕೊನೆಗೆ ತುಂಬಾ  ಸರಳವಾದ ಜೀವನವನ್ನು ರೂಢಿಸಿಕೊಂಡು, ಅದನ್ನೇ ಬದುಕಿನುದ್ದಕ್ಕೂ ಪ್ರತಿಪಾದಿಸಿದ. - 3 ಮೇ 2015, 04:00
  • ಪ್ರತಿ-ಕೃತಿ ನಿರ್ಮಾಣ: ಜಗತ್ತಿನಲ್ಲಿ  ಎಷ್ಟೆಲ್ಲ ಯಂತ್ರಗಳಿವೆ. ಎಷ್ಟೆಲ್ಲ  ವೈವಿಧ್ಯಮಯ ಪದಾರ್ಥಗಳನ್ನು  ತಯಾರಿಸುತ್ತಿವೆ ಅವು! ಆದರೂ ಯಂತ್ರಗಳು ಮೂಲತಃ ಮಾಡುತ್ತಿರುವುದು ಪ್ರತಿ-ಕೃತಿ  ನಿರ್ಮಾಣದ ಕೆಲಸವನ್ನು ಮಾತ್ರ. - 4 ಮೇ 2015, 04:37
  • ಖಡ್ಗಕ್ಕಿಂತ ಸೂಜಿಯೇ ಮೇಲು!: ಸಾಮಾನ್ಯವಾಗಿ ದೇವರ ದರ್ಶನಕ್ಕೆ ಹೋಗುವಾಗ ಹಣ್ಣು-ಹಂಪಲು ಅಥವಾ ಹೂವನ್ನು ಕಾಣಿಕೆಯಾಗಿ ಸಮರ್ಪಿಸಬೇಕು ಎಂಬುದು ಭಾರತೀಯ ಸಂಪ್ರದಾಯ. - 5 ಮೇ 2015, 04:17
  • ಆತ್ಮದ ಪ್ರಭಾವ: ಮನಸ್ಸಿನ ಮೇಲೆ ಐದು ವಿಷಯಗಳು ತಮ್ಮ ಪ್ರಭಾವ ಬೀರುತ್ತವೆ. ಅವೇ ಸ್ಥಳ, ಸಮಯ, ಆಹಾರ, ಗತ ಸಂಸ್ಕಾರಗಳು, ಸಂಘ ಮತ್ತು ಕೃತ್ಯಗಳು. - 29 ಏಪ್ರಿಲ್ 2015, 04:17
  • ತಾರತಮ್ಯದಿಂದ ಸಮಾಜಕ್ಕೆ ನಷ್ಟ: ನಂಬಿಕೆಗಳ ಹುಟ್ಟಿಗೆ ಕೊನೆಯಿಲ್ಲ. ಯಾವುದೋ ಕಾರಣಕ್ಕೆ, ಸಂದರ್ಭಕ್ಕೆ ಹುಟ್ಟಿದ ಒಂದು  ನಂಬಿಕೆ ಮುಂದುವರಿದು ಸಂಪ್ರದಾಯವಾಗುತ್ತದೆ. ಹಾಗೆಯೇ ಗಟ್ಟಿಯಾಗಿ ಬಿಡುತ್ತದೆ. ವರ್ಣ  ಮತ್ತು ವರ್ಗ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ಸಂಪ್ರದಾಯಗಳ ಸುಳಿಗೆ ಸಿಕ್ಕವರು ನಿಮ್ನ  ವರ್ಗದವರು. - 1 ಮೇ 2015, 04:00
  • ಹೃದಯ ಶುದ್ಧಿ, ಕಾರ್ಯಸಿದ್ಧಿ: ಹೃದಯ ಶುದ್ಧಿಗೆ ಮತ್ತೊಂದು ಸಾಧನವೆಂದರೆ ತನ್ಮಯತೆ. ಇದನ್ನೇ ಮಗ್ನತೆ ಎನ್ನುತ್ತಾರೆ.  ಇದು ಧ್ಯಾನದಿಂದ ಬರುವಂಥದ್ದು. ಪ್ರಶಾಂತ ಪರಿಸರದಲ್ಲಿ ದೀಪವೊಂದು ಸ್ಥಿರವಾಗಿ  ಬೆಳಗುವಂತೆ ನಮ್ಮ ಮನೋದೀಪವು ಸ್ಥಿರವಾಗಿ ಉಳಿದರೆ ಅದೇ ಧ್ಯಾನ! ಅದರಿಂದಲೇ ಹೃದಯಶುದ್ಧಿ  ಮತ್ತು ಕಾರ್ಯಸಿದ್ಧಿ. - 30 ಏಪ್ರಿಲ್ 2015, 04:00
  • ದೊಡ್ಡವರು ಯಾರು?: ‘ಗುಡ್ಡಕ್ಕೆ ಗುಡ್ಡವೇ ಅಡ್ಡ’ ಎಂಬ ಮಾತಿನಂತೆ ಈ ಪ್ರಪಂಚದಲ್ಲಿ ಯಾರು ದೊಡ್ಡವರು ಎಂದು  ಹುಡುಕಲು ಹೊರಟರೆ, ಸೂಕ್ತ ಉತ್ತರ ಕಂಡುಹಿಡಿಯುವುದು ಬಹಳ ಕಷ್ಟದ ಕಾರ್ಯ. - 28 ಏಪ್ರಿಲ್ 2015, 04:00
  • ಆಹಾರ ಮತ್ತು ದೈವತ್ವ: ಏನು ತಿನ್ನಬೇಕು ಮತ್ತು ಏನನ್ನಲ್ಲ ಎಂಬ ಆಯ್ಕೆ ಇರುವುದು ಹೊಟ್ಟೆ ತುಂಬಾ ತಿನ್ನಲು  ಸಾಕಷ್ಟು ಇರುವವರಿಗಷ್ಟೆ. ಅಂಥವರಿಗೆ ಏನು ತಿನ್ನಬೇಕು ಎಂಬುದು ಒಂದು ನಂಬಿಕೆ. - 26 ಏಪ್ರಿಲ್ 2015, 04:00