ಕೆ.ಎಸ್. ನಿಸಾರ್ ಅಹಮದ್‌

ವಿಕಿಕೋಟ್ದಿಂದ
(ಕೆ.ಎಸ್‌. ನಿಸಾರ್‌ ಅಹಮದ್‌ ಇಂದ ಪುನರ್ನಿರ್ದೇಶಿತ)
  • ಕಾಲಪ್ರಜ್ಞೆ ಇಲ್ಲದವನಿಗೆ ಗಡಿಯಾರ ಬರಿ ಅಲಂಕಾರವಷ್ಟೇ.
    - ೦೩:೨೩, ೧೩ ಫೆಬ್ರುವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪರಾನುಕರಣೆಯ ಪರಮಾನ್ನಕ್ಕಿಂತ ಸ್ವಸಾಧನೆಯ ಸಾರನ್ನ ಸ್ವಾದಿಷ್ಟ.
    - ೦೩:೨೩, ೩ ಏಪ್ರಿಲ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸಂಸ್ಕೃತಿಯ ಮಹೋನ್ನತವಾದ ಮಹಲಿಗೆ ನೀತಿ ನೆಲಗಟ್ಟು, ಅನುಭವ ಆವಾರ.
    - ೧೦:೩೬, ೬ ಮಾರ್ಚ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬಾಳನ್ನು ಹಸನಾಗಿಸಿಕೊಳ್ಳಬೇಕು, ಪ್ರಹಸನವಾಗಿಸಿಕೊಳ್ಳಬಾರದು.
  • ಮನುಷ್ಯನನ್ನು ಕಡೆಗಣಿಸಿ ಮಾಡಿದ ಯಾವುದೇ ಸತ್ಕರ್ಮ ನಿರರ್ಥಕ, ಅಪ್ರಯೋಜಕ.
    - ೧೮:೩೩, ೨ ಮೇ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮುಂದಿರುವ ಹುಣ್ಣಿಮೆಯ ಸೊಬಗನ್ನು ಸವಿಯದೆ, ಮುಂಬರಲಿರುವ ಅಮಾವಾಸ್ಯೆಯನ್ನು ನೆನೆದು ಕೊರಗುತ್ತಾ ಕೂರುವುದು ವಿವೇಕವೆನ್ನಿಸದು.
    - ೧೭:೫೫, ೩೧ ಜನವರಿ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.