ವೇದವ್ಯಾಸ

ವ್ಯಾಸ ಅಥವಾ ವೇದವ್ಯಾಸ (ಸಂಸ್ಕೃತ: ವೇದವ್ಯಾಸ, ಅರ್ಥ: ‘ವೇದಗಳನ್ನು ವಿಭಾಗಿಸಿದವನು). ಅವರು ಬಹುತೇಕ ಹಿಂದೂ ಪರಂಪರೆಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ಋಷಿ (ಮುನಿ) ಯಾಗಿ ಗುರುತಿಸಲ್ಪಟ್ಟಿದ್ದಾರೆ. ವ್ಯಾಸರು ಮಹಾಭಾರತ ಮಹಾಕಾವ್ಯದ ಕರ್ತೃ ಎಂದೇ ಪರಿಗಣಿಸಲ್ಪಟ್ಟಿದ್ದು, ಅದರಲ್ಲೇ ಅವರು ಪ್ರಮುಖ ಪಾತ್ರಧಾರಿಯಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಹಿಂದೂ ಪರಂಪರೆಗಳ ಪ್ರಕಾರ ಅವರು ವೇದಗಳಲ್ಲಿ ಮಂತ್ರಗಳನ್ನು ನಾಲ್ಕು ವಿಭಜಿತ ಭಾಗಗಳಾಗಿ ಸಂಶೋಧಿಸಿ ಸಂಕ್ಷಿಪ್ತಗೊಳಿಸಿದವರಾಗಿದ್ದು, ಎಂಟುಪದರ ಪುರಾಣಗಳು ಮತ್ತು ಬ್ರಹ್ಮಸೂತ್ರಗಳ ಕೃತಿಕಾರರಾಗಿ ಪರಿಗಣಿಸಲ್ಪಟ್ಟಿದ್ದಾರೆ.ಅವರು ವಿಷ್ಣುವಿನ ಅಂಶಾವತಾರ ಎಂದು ಹಲವರು ನಂಬಿದ್ದಾರೆ. ವೈದಿಕ ಚಿರಂಜೀವಿಗಳಲ್ಲೊಬ್ಬರಾಗಿ, ಈಗಿನ ಕಲೀಯುಗದಲ್ಲಿಯೂ ಅವರು ಜೀವಂತವಾಗಿರುವರಂತೆ ಭಕ್ತರು ನಂಬುತ್ತಾರೆ.[೧]
ಉಕ್ತಿಗಳು
[ಸಂಪಾದಿಸಿ]"ದಿರ್ಘಕಾಲದ ಅಭ್ಯಾಸದಿಂದ ಹುಟ್ಟುವ, ಮೊದಲಿಗೆ ವಿಷದಂತೆ ಕಾಣಿಸಿಕೊಂಡರೂ ಕೊನೆಗೆ ಅಮೃತದಂತೆ ಅನುಭವವಾಗುವ, ದುಃಖಗಳ ಅಂತ್ಯಕ್ಕೆ ಹಾದಿ ತೋರಿಸುವ ಆನಂದವೇ ನಿಜವಾದ ಆನಂದವಾಗಿದೆ. ಇಂತಹ ಆನಂದವು ಅಂತಃಕರಣದ ಶಾಂತಿಯಿಂದ ಹುಟ್ಟುತ್ತದೆ."
"ಯಾರು ಜೀವಿಗಳಲ್ಲೆಲ್ಲಾ ತಾನ್ನೇ ಕಾಣುತ್ತಾನೋ ಮತ್ತು ತಾನಲ್ಲಿಯೇ ಎಲ್ಲಾ ಜೀವಿಗಳನ್ನು ನೋಡುವನೋ, ಅವನು ನಿಜವಾದ ಸಮದರ್ಶಿ."
"ನಿನ್ನ ಕೆಲಸದ ಮೇಲೆಯೇ ಕಣ್ಣಿಟ್ಟು ಕೆಲಸಮಾಡು, ಫಲದ ಆಶೆಯ ಮೇಲೆ ಅಲ್ಲ."
"ನಿನ್ನನ್ನು ನೀನೆ ರೂಪಿಸಿಕೊಳ್ಳು. ಸ್ವಇಚ್ಛೆ ನಿನ್ನ ಶತ್ರುವಾಗಬಹುದು, ಆದರೆ ಅದೇ ನಿನ್ನ ಸ್ನೇಹಿತನಾಗಲೂ ಸಾಧ್ಯವಿದೆ." (ಅಧ್ಯಾಯ 6, ಶ್ಲೋಕ 5)
"ನಾವು ಯಾರು ಎನ್ನುವುದು ನಮ್ಮ ಚಿಂತನೆಗಳ ಫಲಿತಾಂಶ. ನಮ್ಮ ಜೀವನವನ್ನೆಲ್ಲಾ ಆಲೋಚನೆ ರೂಪಿಸುತ್ತದೆ."
"ಯಾರು ಫಲದ ಆಶೆಯಿಂದಲೇ ಪ್ರೇರಿತರಾಗಿರುವರೋ, ಅವರು ಸದಾ ಫಲದ ಬಗ್ಗೆ ಆತಂಕದಿಂದ ಪೀಡಿತರಾಗಿರುವರು."
"ಎಲ್ಲಾ ಚಲನೆಗೂ ಕಾರಣ ಪ್ರಕೃತಿಯೇ. ‘ನಾನು ಇದನ್ನು ಮಾಡಿದೆ’ ಎಂದು ಅಭಿಮಾನಿಸುವ ಮೂಢನು ಅಹಂಕಾರದಿಂದ ಮೋಹಿತರಾಗಿರುತ್ತಾನೆ."
"ಸ್ವಭಾವ ಒಂದೇ, ಪ್ರತಿಯೊಂದು ಜೀವಿಯಲ್ಲಿ ಸಮಾನವಾಗಿರುತ್ತದೆ... ಜೀವನವೆಂದರೆ ಒಂದು ಅಖಂಡ ಸತ್ಯ."
"ನಾನು ಸಾವು ಆಗಿದ್ದೇನೆ – ಲೋಕಗಳನ್ನು ನಾಶಮಾಡುವವನು!" (ಈ ಶ್ಲೋಕವನ್ನು ೧೧ನೇ ಅಧ್ಯಾಯದ ವಿಶ್ವರೂಪ ದರ್ಶನ ಯೋಗದಲ್ಲಿ ಕೃಷ್ಣನು ಹೇಳುತ್ತಾನೆ.)
"ಪ್ರತಿಯೊಂದು ಜೀವಿಯಲ್ಲಿಯೂ ಹಾಗೂ ಜಡವಸ್ತುಗಳಲ್ಲಿಯೂ ಭಗವಂತನನ್ನು ನೋಡುವುದು ಸಮದರ್ಶನ. ಎಲ್ಲರೊಂದಿಗೆ ಎಲ್ಲ ಸಂದರ್ಭಗಳಲ್ಲಿಯೂ ಶಾಂತಿಯುತವಾಗಿ ವರ್ತಿಸುವುದೇ ಶಾಂತಿ." [೨]
ಉಲ್ಲೇಖಗಳು
[ಸಂಪಾದಿಸಿ]- ↑ Gopal, Madan (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 158.
- ↑ https://www.goodreads.com/author/quotes/16476547.Veda_Vyasa