ಲಲಿತಾ ಸಿದ್ಧಬಸವಯ್ಯ
ಕವಯಿತ್ರಿ ಲಲಿತಾ ಸಿದ್ಧಬಸವಯ್ಯ ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಲೇಖಕಿ, ಕವಿ, ನಾಟಕಕಾರ್ತಿಯಾಗಿದ್ದಾರೆ. ಅವರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಇವರು ೨೮ ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸಿದರು.
ಕವಿತೆಗಳು
[ಸಂಪಾದಿಸಿ]ಪ್ರೀತಿಗೊಂಡು
- ಕಾಮದೇವನ
ಕಂಡ ಮೇಲಿನ್ನಾರನು ಕಾಣುವುದೇ ಹೇಳು ಸಖೀ, ಉಂಟೆಲ್ಲೆ ಜಗದೊಳು ಟಿಂವ್ವಟಿಂವ್ವನೆ ಎದೆ ಮೀಂಟಿದವನಂಥ ಪುರುಷ !
- ಕಂಡೇನೇ ಆ ಕಣ್ಣು
ಹಾಲ ಗಡಿಗೆಯೊಳು ಚಲಚಲಿಪ ಗುಂಡು ನೇರಳೆಹಣ್ಣು ಅದೆಂತಹ ಹಣೆಯೇ ಅದು ಸಣ್ಣದಲ್ಲ ದೊಡ್ಡದಲ್ಲ ಬೆಣ್ಣೆ ಸವರಿದಂಗೆ ರೇಸಿಮೆಯ ಮೇಲೆ ನುಣ್ಣಗೆ ಮಿನುಗುವುದಲ್ಲೆ ಆ ತಿಲಕವೊ ಒಂಟಿ ಎಳೆ ಮಾವಿನಕಾಯಿ ಗೊನೆ ಕಳಚಿ ಕೂತಂಗೆ ಕೆನೆಮೊಸರ ಮೇಗೆ ಪಳಗಿದ ಕೈ ಬರೆದ ಚಿತ್ರದೊಳು ತಿದ್ದಿದಂತಿದ್ದಾವೆ ಏರಿಯೇರಿಳಿವ ಆ ಜೋಡುಹುಬ್ಬು
- ಬೆದರುಬೊಂಬೆ
ಗೆ ಬಣ್ಣ ಬಳಿದಂಗಲ್ಲವೇ ಅವನ ಕದಪು ಅಲ್ಲವೇ ಅವನ ತುಟಿ ಹೊಗೆಬತ್ತಿ ಸೇದಿದ್ಹಾಂಗೆ ಮುದ್ದೆ ಗಲ್ಲವಲ್ಲವೇ ಅವನವು ಕಿವಿ ಮುತ್ತುಗವಲ್ಲ ಮುತ್ತು ಆರಿಸಿ ಚಿತ್ತ ಒತ್ತೆಯಿರಿಸಿ ಕೆತ್ತಿಟ್ಟ ಚಿತ್ತಿಲ್ಲದ ಚೆದುರನೇ ಎನ್ನ ಕಾಮದೇವ
- ಯಾರ ಆಸ್ತಿಯನು ತಿರುವಿಕೊಂಡಿದ್ದನೇ
ಯಾರ ಮಸ್ತಿಯನು ಕೆಡಿಸಿ ಕೇಕೆಯಿಟ್ಟಿದ್ದನೇ ಏನು ಮಾಡಿದ್ದನೇ ಅಂಥದ್ದೇನು ಮಾಡಿದ್ದನೇ ಮಾಡಬಾರದ್ದೇನು ಮಾಡಿದ್ದನೇ ನನ್ನ ಮನ್ಮಥರಾಯ , ಸುಟ್ಟರಲ್ಲೇ ಅವನ ನಿಂತ ನಿಲುವಿಗೆ ಸುಟ್ಟರೇ. [೧]
ಕವನ ಸಂಕಲನಗಳು
[ಸಂಪಾದಿಸಿ]- ಮೊದಲಸಿರಿ
- ಇಹದಸ್ವರ
- ಕೆಬ್ಬೆನ್ನೆಲ
- ದಾರಿನೆಂಟ
- ಬಿಡಿ ಹರಳು
- ಮರಕತಮಣಿ