ಪುರಂದರದಾಸರು

ವಿಕಿಕೋಟ್ದಿಂದ
  • ಶಕ್ತನಾದರೆ ನೆಂಟರೆಲ್ಲ ಹಿತರು, ಅಶಕ್ತನಾದರೆ ಆಪ್ತ ಜನರೇ ವೈರಿಗಳು.
  • ಬೆಲ್ಲದ ಕಟ್ಡೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನುಮಳೆ ಗರೆದರೆ ವಿಷ ಹೋಗುವುದೇನಯ್ಯಾ.
  • ಪತಿಯನು ನಿಂದಿಸಿ ಬೊಗಳುವ ಸತಿಯು ಎಷ್ಟು ವೃತಗಳ ಮಾಡಿದರೇನು ಫಲ.
  • ಕಮಲನಾಭನ ಪೊಗಳದ ಸಂಗೀತ ಗರ್ದಭ ರೋದನವೋ.
  • ಅಂತರಂಗದಲಿ ಹರಿಯ ಕಾಣದವ ಹುಟ್ಟು ಕುರುಡನೋ.
  • ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ.
  • ಧ್ಯೇಯಗಳಲ್ಲಿ ಕಲ್ಲಿನಂತಿರಬೇಕು, ಕಷ್ಟಗಳಲ್ಲಿ ಬಿಲ್ಲಿನಂತಿರಬೇಕು, ಜ್ಞಾನಿಗಳೊಡನೆ ಉತ್ತಮನಂತಿರಬೇಕು.