ಡಿ. ಕೆ. ಶಿವಕುಮಾರ್
ಗೋಚರ
ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ (ಜನನ ೧೫ ಮೇ ೧೯೬೨), ಇವರನ್ನು ಡಿ.ಕೆ ಶಿವಕುಮಾರ್ ಎಂದು ಕರೆಯುತ್ತಾರೆ. ಅವರು ಭಾರತೀಯ ರಾಜಕಾರಣಿಯಾಗಿದ್ದು, ಕರ್ನಾಟಕದ ೯ ನೇ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿಯಾಗಿದ್ದಾರೆ. ೨೦ ಮೇ ೨೦೨೩ ರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು ಮತ್ತು ೨೦೨೦ ರಿಂದ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ೨೦೧೪ ರಿಂದ ೨೦೧೯ ರವರೆಗೆ ಕರ್ನಾಟಕ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಹಾಗೂ ಅವರು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ
ಉಲ್ಲೇಖಗಳು
[ಸಂಪಾದಿಸಿ]- "ಓದುತ್ತಿದ್ದರೆ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಸಬಹುದು, ಓದದೆ ಇದ್ದರೆ ಜನ ಸೇವಕನಾಗುತ್ತೀರಿ. ಆಯ್ಕೆಯು ನಿಮ್ಮದು. ಮನಸಿದ್ದರೆ ಮಾರ್ಗ, ಆದರೆ ಪರಿಶ್ರಮ ಮುಖ್ಯವಾದದ್ದು.
- ಆಡುಗೋಡಿಯಲ್ಲಿ ನಡೆದ ‘ಶಾಲಾ ಪ್ರಾರಂಭ 2025-26’ ಕಾರ್ಯಕ್ರಮದಲ್ಲಿ.(2025, ದಿ ಸ್ಟೇಟ್ ಮ್ಯಾನ್).
- "ಒಳ್ಳೆಯ ಬೀಜ ಬಿತ್ತಿದರೆ ಒಳ್ಳೆಯ ಬೆಳೆ ಬರುತ್ತದೆ. ಹಾಗೆಯೇ, ಜ್ಞಾನದ ಬೀಜ ಬಿತ್ತಿದರೆ ಒಳ್ಳೆಯ ನಾಗರಿಕರಾಗುತ್ತಾರೆ."
- ಆಡುಗೋಡಿಯಲ್ಲಿ ನಡೆದ ‘ಶಾಲಾ ಪ್ರಾರಂಭ 2025-26’ ಕಾರ್ಯಕ್ರಮದಲ್ಲಿ.(2025, ದಿ ಸ್ಟೇಟ್ ಮ್ಯಾನ್).
- “ನಾವು ಪರಿಸರವನ್ನು ಕೇವಲ ಹಸಿರಿಗಾಗಿ ಮಾತ್ರವಲ್ಲ, ನಮ್ಮ ಉಸಿರಿಗಾಗಿ ಸಂರಕ್ಷಿಸಬೇಕು.”
- “ಶಕ್ತಿ ಶಾಶ್ವತವಲ್ಲ, ಭಕ್ತಿ ಶಾಶ್ವತ.”
- "ಅಧಿಕಾರ ಬರ್ತದೆ, ಅಧಿಕಾರ ಹೋಗ್ತದೆ, ಇಲ್ಲಿ ಯಾವುದೂ ಶಾಶ್ವತ ಅಲ್ಲ"
- "ನಾನು ಕನಕಪುರ ಬಂಡೆ ಅಲ್ಲ, ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ"
