ವಿಷಯಕ್ಕೆ ಹೋಗು

ಡಾ.ಪಾಟೀಲ ಪುಟ್ಟಪ್ಪ

ವಿಕಿಕೋಟ್ದಿಂದ

ಪಾಟೀಲ ಪುಟ್ಟಪ್ಪ ಭಾರತೀಯ ಬರಹಗಾರ, ಅನುಭವಿ ಪತ್ರಕರ್ತ ಮತ್ತು ಹುಬ್ಬಳ್ಳಿ ಮೂಲದ ಕಾರ್ಯಕರ್ತರಾಗಿದ್ದರು. ಕನ್ನಡ ದಿನಪತ್ರಿಕೆ ವಿಶ್ವವಾಣಿ ಸ್ಥಾಪಕ-ಸಂಪಾದಕರಾಗಿದ್ದರು.ಪುಟ್ಟಪ್ಪ, 1940 ಮತ್ತು 1950 ರ ದಶಕದ ಅಂತ್ಯದಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದ ಪ್ರದೇಶಗಳನ್ನು ಏಕೀಕರಿಸುವಂತೆ ಒತ್ತಾಯಿಸಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಧಾರವಾಡ ಮೂಲದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದರು. ಅವರು ರಾಜ್ಯಸಭೆಯಲ್ಲಿ ಎರಡು ಅವಧಿಗೆ ರಾಜ್ಯವನ್ನು ಪ್ರತಿನಿಧಿಸಿದರು (1962 ರಿಂದ 1974). ಅವರು ಕನ್ನಡ ಭಾಷಾ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು, ನಂತರ ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಮರುನಾಮಕರಣ ಮಾಡಲಾಯಿತು.2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.1949 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಪುಟ್ಟಪ್ಪನವರ ಕೃತಿಗಳು

[ಸಂಪಾದಿಸಿ]
  • ನಮ್ಮ ದೇಶ ನಮ್ಮ ಜನ
  • ನನ್ನದು ಈ ಕನ್ನಡ ನಾಡು
  • ಕರ್ನಾಟಕದ ಕಥೆ
  • ಪಾಪು ಪ್ರಪಂಚ
  • ಶಿಲಾಬಾಲಿಕೆ ನುಡಿದಳು ಕಥಾಸಂಕಲನ
  • ಗವಾಕ್ಷ ತೆರೆಯಿತು
  • ಸಾವಿನ ಮೇಜವಾನಿ
  • ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು- ಜೀವನ ಚರಿತ್ರೆ ;
  • ನನ್ನೂರು ಈ ನಾಡು,
  • ಹೊಸದನ್ನ ಕಟ್ಟೋಣ,
  • ಬದುಕುವ ಮಾತು-ಪ್ರಬಂಧ ಸಂಕಲನಗಳು
  • ಬದುಕಲು ಬೇಕು ಬದುಕುವ ಈ ಮಾತು
  • ಸೋತೇ ಎನ್ನಬೇಡಿ ಸೋಲಿನಲ್ಲೇ ಗೆಲುವು ಇದೆ.
  • ನಮ್ಮ ಗುರುಗಳು
  • ಸಾವಿನ ಮೇಜವಾಣಿ

[]