ವಿಷಯಕ್ಕೆ ಹೋಗು

ಒ.ಎನ್.ವಿ.ಕುರುಪ್

ವಿಕಿಕೋಟ್ದಿಂದ

ಒ.ಎನ್.ವಿ ಕುರಪ್ ಎಂದು ಪ್ರಸಿದ್ಧವರಾಗಿರುವ ಒಟ್ಟಪ್ಲಾಕ್ಕಲ್ ನಂಬಿಯಾದಿಕ್ಕಲ್ ವೇಲು ಕುರುಪ್ ಅವರು ಕೇರಳದ ಖ್ಯಾತ ಮಲಯಾಳಂ ಕವಿ ಮತ್ತು ಸಾಹಿತಿ.ಇವರಿಗೆ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ೨೦೦೭‌ರಲ್ಲಿ ಲಭಿಸಿದೆ.ಒ.ಎನ್.ವಿ.ಕುರುಪ್ ಅವರು ಮಲಯಾಳಂ ಚಲನಚಿತ್ರಗಳ ಗೀತೆಗಳಿಗೆ ಸಾಹಿತ್ಯ ಒದಗಿಸಿರುವುದರೊಂದಿಗೆ, ನಾಟಕ ಹಾಗೂ ಟಿ.ವಿ ಧಾರವಾಹಿಗಳಿಗೂ ಕೂಡ ಸಾಹಿತ್ಯವನ್ನು ರಚಿಸಿದ್ದಾರೆ. ಇವರಿಗೆ ಭಾರತ ಸರ್ಕಾರದ ನಾಲ್ಕನೆ ಮತ್ತು ಎರಡನೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರಿ(೧೯೯೮) ಮತ್ತು ಪದ್ಮ ವಿಭೂಷಣ(೨೦೧೧) ಲಭಿಸಿದೆ.೨೦೦೨ ರಲ್ಲಿ ಕೇರಳ ವಿಶ್ವವಿದ್ಯಾನಿಲಯ(ತಿರುವನಂದಪುರ)ದಿಂದ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾದರು. ತಮ್ಮ ವಾಮಪಂಥೀಯ ವಿಚಾರಗಳಿಗೆ ಹೆಸರುವಾಸಿಯಾಗಿದ್ದ ಇವರು ೧೯೮೯ರಲ್ಲಿ ತಿರುವನಂತಪುರಂ ಕ್ಷೇತ್ರದ ಲೋಕಸಭಾ ಚುನಾವಣೆಗೆ ಎಡ ಪ್ರಜಾಸಾತ್ತಾತ್ಮಕ ರಂಗದ(ಎಲ್.ಡಿ.ಎಫ಼್) ಅಭ್ಯರ್ಥಿಯಾಗಿದ್ದರು.[]

ಉಕ್ತಿಗಳು

[ಸಂಪಾದಿಸಿ]

ആടി മുകിൽമാല കുടിനീര് തിരയുന്നു
ആതിരകൾ കുളിര് തിരയുന്നു
ആവണികളൊരു കുഞ്ഞുപൂവ് തിരയുന്നു
ആറുകളൊഴുക്ക് തിരയുന്നു . (ഭൂമിക്കൊരു ചരമഗീതം)

ಕುರಿಗಳು ನೀರಿಗಾಗಿ ಹುಡುಕುತ್ತಿವೆ,
ಕುದುರೆಗಳು ಉಷ್ಣತೆಗಾಗಿ ಹುಡುಕುತ್ತಿವೆ,
ಇರುವೆಗಳು ಪುಟ್ಟ ಹೂವನ್ನು ಹುಡುಕುತ್ತಿವೆ, ನ
ದಿಗಳು ತೊರೆಯನ್ನು ಹುಡುಕುತ್ತಿವೆ. (ಭೂಮಿಗಾಗಿ ಒಂದು ಶೋಕಗೀತೆ)

ಕೃತಿಗಳು

[ಸಂಪಾದಿಸಿ]
  • ದಾಹಿಕ್ಕುನ್ನ ಪಾನಪಾತ್ರಂ-೧೯೫೬,
  • ಮರುಭೂಮಿ,
  • ನೀಲಕನ್ನುಗಲ್,
  • ಮಯಿಳ್ ಪೀಲಿ-೧೯೬೪,
  • ಒರು ತುಳ್ಳಿ ವೆಳಿಚಂ,
  • ಅಗ್ನಿ ಶಲಭಂಗಳ್-೧೯೭೧,
  • ಅಕ್ಷರಂ-೧೯೭೪,
  • ಕರುತ ಪಕ್ಷಿಯುಡೆ ಪಾಟು-೧೯೭೭
  • ಉಪ್ಪು-೧೯೮೦,
  • ಭೊಮಿಕಿ ಒರು ಚರಮ ಗೀತಂ-೧೯೮೪,
  • ಶರ್ನ್ಕ ಪಕ್ಷಿಗಳ್-೧೯೮೭,
  • ಮ್ರಿಗಯ-೧೯೯೦,
  • ತೊನ್ಯಾಕ್ಷರಂಗಳ್-೧೯೮೯,
  • ಅಪರಹ್ ನಂ-೧೯೯೧,
  • ಉಜಾಯಿನಿ ಉಜೈನ್-೧೯೯೪,
  • ವೆರುತೆ,
  • ಸ್ವಯಂವರ-೧೯೯೫,
  • ಭೈರವಂಡೆ ತುಡಿ,
  • ಒ.ಎನ್.ವಿ ಯುಡೆ ಗಾನಂಗಳ್,
  • ವಳಪೊಟ್ಟುಗಳ್,
  • ಸೊರ್ಯಗೀತಂ.
  • ಕವಿತಯಿಳ್ ಸಮಂತರ ರೇಕಗಳ್,
  • ಕವಿತಯಿಲೆ ಪ್ರತಿಸಂದಿಗಳ್,
  • ಎಜ಼್ಹುತಚನ್-ಒರು ಪಡನಂ,
  • ಪತೆಯಂ,
  • ಕಲ್ಪನಿಕಂ,
  • ಪುಶ್ಕಿನ್-ಸ್ವಾತಂತ್ರ್ಯ ಭೋದತಿಂಡೆ ದುರಂತಗತ.

ಉಲ್ಲೇಖಗಳು

[ಸಂಪಾದಿಸಿ]