ಸುಭಾಷಿತ ಮಂಜರಿ

ವಿಕಿಕೋಟ್ದಿಂದ
  • ಈ ಜಗತ್ತಿನಲ್ಲಿರುವುದು ಮೂರೇ ರತ್ನಗಳು: ಅನ್ನ, ನೀರು ಮತ್ತು ಒಳ್ಳೆಯ ಮಾತು. ಕಲ್ಲಿನ ತುಂಡುಗಳನ್ನು ರತ್ನಗಳೆನ್ನುವವರು ಮೂರ್ಖರು. - ೧೭:೦೪, ೨೯ ಆಗಸ್ಟ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಈ ಭೂಮಿಯ ಮೇಲೆ ನೀರು, ಆಹಾರ ಮತ್ತು ಸುಭಾಷಿತಗಳೇ ರತ್ನಗಳು. ಆದರೆ ಮೂರ್ಖರು ಹರಳುಗಳನ್ನು ರತ್ನಗಳು ಎನ್ನುವರು. - ೦೭:೩೨, ೧೯ ಡಿಸೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸೋಮಾರಿತನವು ನಮ್ಮಲ್ಲಿ ಮನೆಮಾಡಿಕೊಂಡಿರುವ ದೊಡ್ಡ ಶತ್ರು. ಶ್ರಮಕ್ಕಿಂತ ದೊಡ್ಡ ಮಿತ್ರನಿಲ್ಲ. - ೧೩:೨೩, ೧೩ ಜನವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸಂಕುಚಿತ ಮನಸ್ಸಿನವರು ‘ಇವರು ನನ್ನವರು ಅವರು ಬೇರೆಯವರು’ ಎಂದು ಯೋಚಿಸುತ್ತಾರೆ. ಆದರೆ ಉದಾರ ಸ್ವಭಾವದವರಿಗೆ ಇಡೀ ವಿಶ್ವವೇ ಒಂದು ಕುಟುಂಬ. - ೧೩:೩೧, ೨೨ ಜನವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.